ಸನಾತನ ಧರ್ಮಕ್ಕೆ ಶ್ರೀಮದಾನಂದ ತೀರ್ಥರ ಕೊಡುಗೆ ಅಪಾರ


Team Udayavani, Feb 15, 2019, 10:05 AM IST

2.jpg

ಭದ್ರಾವತಿ: ಭಾರತೀಯ ಸಂಸ್ಕೃತಿ, ಸಾಹಿತ್ಯಕ್ಕೆ ಮೂಲ ಆಧಾರ ವೇದ, ಉಪನಿಷತ್‌ಗಳು, ಮಹಾಭಾರತ. ಈ ನಾಲ್ಕು ವೇದಗಳೂ ಪರಮಾತ್ಮನ ಅನಂತ ಗುಣಗಳನ್ನು ಸಾರುತ್ತವೆ. ಶ್ರೀಮದಾನಂದ ತೀರ್ಥರು ವೇದಮಂತ್ರಗಳ ಯತಾರ್ಥವನ್ನು ತಿಳಿಸಿ ಹೇಳುವ ಮೂಲಕ ಸನಾತನಧರ್ಮದ ನಿಜವಾದ ಅರ್ಥವನ್ನು ಜಗತ್ತಿಗೆ ಸಾರುವ ಮೂಲಕ ಮಹದುಪಕಾರ ಮಾಡಿದ್ದಾರೆ ಎಂದು ಉತ್ತರಾದಿಮಠದ ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ ಹೇಳಿದರು.

ಜನ್ನಾಪುರದ ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಪಂಚಯತಿಗಳ ಪ್ರತಿಷ್ಠಾಪನಾ ಮಹೋತ್ಸವ ಅಂಗವಾಗಿ ಏರ್ಪಡಿಸಿದ್ದ ಶ್ರೀಮನ್ಮಧ್ವಾಚಾರ್ಯರ ಶೋಭಾಯಾತ್ರೆ ನಂತರ ನಡೆದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಸನಾತನ ಧರ್ಮ ಸರಿಯಾಗಿ ಅರಿಯಲು ವೇದಗಳೇ ಆಧಾರ. ವೇದವನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ಸನಾತನ ಧರ್ಮದ ಬಗ್ಗೆ ಅನ್ಯರು ಮಾಡುವ ಆಕ್ಷೇಪಣೆ ಅವರ ಅಜ್ಞಾನ ತೋರಿಸುತ್ತದೆ ಎಂದರು. 

 ಸನಾತನ ಧರ್ಮದಲ್ಲಿ ಅನೇಕ ದೇವರು ಇದ್ದರೂ ಸಹ ಅವರೆಲ್ಲರೂ ಒಬ್ಬ ಭಗವಂತನ ಅಧೀನದಲ್ಲಿರುವ ದೇವತೆಗಳು. ಆದ್ದರಿಂದ ಸನಾತನ ಧರ್ಮದಲ್ಲಿ ಒಬ್ಬನೇ ದೇವರನ್ನು ಅವನಲ್ಲಿರುವ ಅನಂತ ಗುಣಗಳನ್ನು ಆಧರಿಸಿ ಅವನಿಗೆ ಬೇರೆ ಬೇರೆ ಹೆಸರುಗಳಿವೆ. ಉಳಿದ ದೇವರುಗಳು ಅವನ ಅಧೀನದಲ್ಲಿ ಇದ್ದರಿಂದ ಭಗವಂತನೊಬ್ಬನೇ ಸರ್ವೋತ್ತಮ ಎಂದರು.

 ಈ ತತ್ವವನ್ನು ಭಗವಂತನ ಆದೇಶಾನುಸಾರ ಹನುಮ, ಭೀಮ, ಮಧ್ವರಾಗಿ ಜನಿಸಿದ ಶ್ರೀಮದಾನಂದ ತೀರ್ಥಾಚಾರ್ಯರು ವೇದಗಳಲ್ಲಿ ಬರುವ ಶಬ್ದಗಳಿಗೆ ಸರಿಯಾದ ರೀತಿ ವ್ಯಾಖ್ಯಾನ ಮಾಡುವ ಮೂಲಕ ನಮಗೆ ತಿಳಿಸಿಕೊಟ್ಟಿದ್ದಾರೆ. ಇದನ್ನು ನಾವುಗಳು ಆಚಾರ್ಯರ ಗ್ರಂಥಗಳ ಅಧ್ಯಯನ ಮಾಡುವುದರಿಂದ ಅರಿಯಬೇಕು. ಆ ಮೂಲಕ ಪ್ರತಿನಿತ್ಯ ಅನುಸಂಧಾನದ ಮೂಲಕ ಶ್ರೀಮದಾನಂದ ತೀರ್ಥರನ್ನು ಸ್ಮರಿಸಿದರೆ ಅದು ನಾವು ಆ ಗುರುಗಳಿಗೆ ತೋರುವ ನಿಜವಾದ ನಮನ ಗೌರವ, ಭಕ್ತಿ ಎನಿಸುತ್ತದೆ ಎಂದರು.

ಪಂಡಿತ ರಾಮಾಚಾರ್‌ ಉಪನ್ಯಾಸ ನೀಡಿ, ಮಠ, ಆರಾಧನೆ ಎಂದರೆ ಊಟ, ಪ್ರಸಾದ ದೊರಕುವ ಸ್ಥಳ ಎಂದು ಭಾವಿಸಿ ಹೋಗಬಾರದು. ಬದಲಿಗೆ ಗುರುಗಳ ಸೇವೆ ಮಾಡಲು ದೊರಕುವ ಸೌಭಾಗ್ಯ ಎಂಬ ಭಾವನೆಯಿಂದ ಹೋಗಿ ಗುರುಗಳ ಸೇವೆ ಮಾಡಬೇಕು. ಮಾನವ ಜನ್ಮ ಅತಿದುರ್ಲಬ. ಅದು ದೊರಕಿರುವ ಈ ಜನ್ಮದಲ್ಲಿ ಸಾರ್ಥಕ ಮಾಡಿಕೊಳ್ಳಲು ಗುರು ಸೇವೆ, ಭಗವಂತ ನಾಮಸ್ಮರಣೆ ಮಾಡುವ ಮೂಲಕ ಮೋಕ್ಷ ಸಾಧನೆಗೆ ಪ್ರಯತ್ನಿಸಬೇಕು ಎಂದರು.

ಶೋಭಾಯಾತ್ರೆ: ನ್ಯೂಟೌನ್‌ ಶ್ರೀರಾಮ ಮಂದಿರದ ಮುಂಭಾಗದಿಂದ ಶ್ರೀಮಠದ ವರೆಗೆ ಶ್ರೀಮನ್ಮಧ್ವಾಚಾರ್ಯರ ಭಾವಚಿತ್ರ ಹಾಗೂ ಸೀತಾರಾಮ ಲಕ್ಷ್ಮಣರ ಮೂರ್ತಿಯನ್ನು ವಿದ್ಯುತ್‌ ಅಲಂಕೃತ ವಾಹನದಲ್ಲಿರಿಸಿ ಶೋಭಾಯಾತ್ರೆ ನಡೆಯಿತು. ಮೆರವಣಿಗೆಯಲ್ಲಿ ಚಂಡೆವಾದ್ಯ, ಮಂಗಳ ವಾದ್ಯ ಸಹಿತ ಅಪಾರ ಭಕ್ತರು, ಮಹಿಳೆಯರು ಭಜನೆ ಮಾಡುತ್ತಾ, ಕೋಲಾಟವಾಡುತ್ತಾ ಸಾಗಿದರು. 

ಟಾಪ್ ನ್ಯೂಸ್

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-

Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.