ಗೆಲುವಿನ ಯೋಜನೆ ರೂಪಿಸಿದ ಶೇಷ ಭಾರತ


Team Udayavani, Feb 16, 2019, 12:30 AM IST

4.jpg

ನಾಗ್ಪುರ: ರಣಜಿ ಚಾಂಪಿಯನ್‌ ವಿದರ್ಭ ಹಾಗೂ ಶೇಷ ಭಾರತ ತಂಡಗಳ ನಡುವಿನ ಇರಾನಿ ಕಪ್‌ ಪಂದ್ಯ ರೋಚಕ ಘಟ್ಟದತ್ತ ಸಾಗಿದೆ. ಈಗಾಗಲೇ ಮೊದಲ ಇನ್ನಿಂಗ್ಸ್‌ ಹಿನ್ನಡೆಗೆ ಸಿಲುಕಿದ ಶೇಷಭಾರತ ಸ್ಪಷ್ಟ ಗೆಲುವಿನ ಯೋಜನೆಗೆ ಮುಂದಾಗಿದ್ದು, ವಿದರ್ಭ ವಿಜಯಕ್ಕೆ 280 ರನ್ನುಗಳ ಗುರಿ ನೀಡಿದೆ. ವಿದರ್ಭ ಒಂದು ವಿಕೆಟಿಗೆ 37 ರನ್‌ ಮಾಡಿ 4ನೇ ದಿನದಾಟ ಮುಗಿಸಿದೆ. ಶನಿವಾರ ಪಂದ್ಯದ ಅಂತಿಮ ದಿನವಾಗಿದ್ದು, ವಿದರ್ಭ ಉಳಿದ 9 ವಿಕೆಟ್‌ಗಳಿಂದ 243 ರನ್‌ ಗಳಿಸಬೇಕಿದೆ. ಶೇಷಭಾರತ ಈ 9 ವಿಕೆಟ್‌ಗಳನ್ನು ಬೇಗನೇ ಉದುರಿಸಿ ಗೆಲುವು ಸಾಧಿಸೀತೇ ಎಂಬ ಕುತೂಹಲ ಮೇರೆ ಮೀರಿದೆ.

ವಿಹಾರಿ ಬ್ಯಾಟಿಂಗ್‌ ವೈಭವ
ಟೆಸ್ಟ್‌ ಬ್ಯಾಟ್ಸ್‌ಮನ್‌ ಹನುಮ ವಿಹಾರಿ ಅವರ ಅಜೇಯ 180 ರನ್‌ ಶುಕ್ರವಾರದ ಆಟದ ಆಕರ್ಷಣೆಯಾಗಿತ್ತು. ಭರ್ತಿ 300 ಎಸೆತ ಎದುರಿಸಿದ ಅವರು 19 ಬೌಂಡರಿ ಹಾಗೂ 4 ಸಿಕ್ಸರ್‌ ನೆರವಿನಿಂದ ಈ ಬ್ಯಾಟಿಂಗ್‌ ಸಾಹಸಗೈದರು. ನಾಯಕ ಅಜಿಂಕ್ಯ ರಹಾನೆ 87 ರನ್‌ (232 ಎಸೆತ, 6 ಬೌಂಡರಿ, 1 ಸಿಕ್ಸರ್‌) ಮತ್ತು ಶ್ರೇಯಸ್‌ ಅಯ್ಯರ್‌ ಅಜೇಯ 61 ರನ್‌ ಹೊಡೆದರು (52 ಎಸೆತ, 5 ಬೌಂಡರಿ, 4 ಸಿಕ್ಸರ್‌). ವಿಹಾರಿ-ರಹಾನೆ 3ನೇ ವಿಕೆಟಿಗೆ 229 ರನ್‌ ರಾಶಿ ಹಾಕಿದರು.

ಹನುಮ ವಿಹಾರಿ ಮೊದಲ ಇನ್ನಿಂಗ್ಸ್‌ನಲ್ಲಿ 114 ರನ್‌ ಬಾರಿಸಿದ್ದರು. ಇದರೊಂದಿಗೆ ಅವರು ಇರಾನಿ ಕಪ್‌ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ ಕೇವಲ 2ನೇ ಸಾಧಕನಾಗಿ ಮೂಡಿಬಂದರು. ಶಿಖರ್‌ ಧವನ್‌ ಮೊದಲಿಗ. ಅವರು ಜೈಪುರದಲ್ಲಿ ನಡೆದ 2011ರ ಇರಾನಿ ಕಪ್‌ ಪಂದ್ಯದಲ್ಲಿ ಶೇಷಭಾರತದ ಪರ ರಾಜಸ್ಥಾನ ವಿರುದ್ಧ 177 ಮತ್ತು 155 ರನ್‌ ಬಾರಿಸಿದ್ದರು.

ಹನುಮ ವಿಹಾರಿ ಇನ್ನೂ ಒಂದು ಸಾಹಸದಿಂದ ಸುದ್ದಿಯಾಗಿದ್ದಾರೆ. ಅವರು ಇರಾನಿ ಕಪ್‌ನ ಸತತ 3 ಇನ್ನಿಂಗ್ಸ್‌ಗಳಲ್ಲಿ ಶತಕ ಸಿಡಿಸಿದ ಮೊದಲ ಬ್ಯಾಟ್ಸ್‌ಮನ್‌. ಕಳೆದ ವರ್ಷ ವಿದರ್ಭ ವಿರುದ್ಧವೇ ದ್ವಿತೀಯ ಇನ್ನಿಂಗ್ಸ್‌ನಲ್ಲಿ 183 ರನ್‌ ಬಾರಿಸಿದ್ದರು.

ಬೌಲರ್‌ಗಳಿಗೆ ನೆರವಾದೀತೇ ಟ್ರ್ಯಾಕ್‌?
ವಿಹಾರಿ ಹಾಗೂ ಶೇಷಭಾರತದ ಬ್ಯಾಟಿಂಗ್‌ ಪರಾಕ್ರಮ ಗಮನಿಸಿದಾಗ ನಾಗ್ಪುರ ಟ್ರ್ಯಾಕ್‌ ಬೌಲರ್‌ಗಳಿಗೆ ವಿಶೇಷ ನೆರವು ನೀಡದಿರುವುದು ಗೋಚರಕ್ಕೆ ಬರುತ್ತದೆ. ಹೀಗಾಗಿ ಎಚ್ಚರಿಕೆಯಿಂದ ಆಡಿದರೆ ವಿದರ್ಭ ಗೆಲುವನ್ನು ಒಲಿಸಿಕೊಳ್ಳಲೂಬಹುದು. ಆದರೆ ಈಗಾಗಲೇ ಇನ್ನಿಂಗ್ಸ್‌ ಮುನ್ನಡೆ ಗಳಿಸಿರುವ ವಿದರ್ಭಕ್ಕೆ ಜಯ ಅನಿವಾರ್ಯವೇನಲ್ಲ. ಪಂದ್ಯವನ್ನು ಡ್ರಾ ಮಾಡಿಕೊಂಡರೂ ಅದು ಇರಾನಿ ಕಪ್‌ ಅನ್ನು ತನ್ನಲ್ಲೇ ಉಳಿಸಿಕೊಳ್ಳಲಿದೆ.

ಆದರೆ ಶೇಷಭಾರತಕ್ಕೆ ಗೆದ್ದರಷ್ಟೇ ಕಪ್‌ ಒಲಿಯಲಿದೆ. ಈ ಕಾರಣಕ್ಕಾಗಿಯೇ ಅದು ದಿಟ್ಟ ಡಿಕ್ಲರೇಷನ್‌ ಮಾಡಿದ್ದು, ಗ್ಯಾಂಬ್ಲಿಂಗ್‌ಗೆ ಮುಂದಾಗಿದೆ. ಇನ್ನಿಂಗ್ಸ್‌ ಹಿನ್ನಡೆ ಅನುಭವಿಸಿ ರುವುದರಿಂದ ಗೆದ್ದರೆ ಬೋನಸ್‌ ಎಂಬುದು ರಹಾನೆ ಬಳಗದ ಲೆಕ್ಕಾಚಾರ. ವಿದರ್ಭ ನಾಯಕ ಫೈಜ್‌ ಫ‌ಜಲ್‌ (0) ಅವರನ್ನು ರಜಪೂತ್‌ 3ನೇ ಎಸೆತದಲ್ಲೇ ಕೆಡವಿದ್ದಾರೆ. ಆರ್‌. ಸಂಜಯ್‌ 17 ಮತ್ತು ಅಥರ್ವ ತಾಯೆ 16 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಸಂಕ್ಷಿಪ್ತ ಸ್ಕೋರ್‌ 
ಶೇಷಭಾರತ-330 ಮತ್ತು 3 ವಿಕೆಟಿಗೆ 374 ಡಿಕ್ಲೇರ್‌ (ವಿಹಾರಿ ಔಟಾಗದೆ 180, ರಹಾನೆ 87, ಅಯ್ಯರ್‌ ಔಟಾಗದೆ 61, ಸರ್ವಟೆ 141ಕ್ಕೆ 2). ವಿದರ್ಭ-425 ಮತ್ತು ಒಂದು ವಿಕೆಟಿಗೆ 37.

ಕಪ್ಪುಪಟ್ಟಿ  ಧರಿಸಿ ಆಡಿದ ಕ್ರಿಕೆಟಿಗರು
ಗುರುವಾರ ಜಮ್ಮು-ಕಾಶ್ಮೀರದ ಅವಂತಿ ಪೋರಾದಲ್ಲಿ ನಡೆದ ಭೀಕರ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಇರಾನಿ ಟ್ರೋಫಿ ಪಂದ್ಯದ ಶುಕ್ರವಾರದ ಆಟದ ವೇಳೆ ಎರಡೂ ತಂಡಗಳ ಆಟಗಾರರು ಕಪ್ಪುಪಟ್ಟಿ ಧರಿಸಿ ಆಡಲಿಳಿದರು. ಅಂಪಾಯರ್‌ಗಳೂ ಕಪ್ಪುಪಟ್ಟಿ ಧರಿಸಿದ್ದರು. ಉಗ್ರರ ಈ ದುಷ್ಕೃತ್ಯವನ್ನು ಕ್ರೀಡಾಪಟುಗಳಾದ ವಿರಾಟ್‌ ಕೊಹ್ಲಿ, ವೀರೇಂದ್ರ ಸೆಹವಾಗ್‌, ಸಾನಿಯಾ ಮಿರ್ಜಾ, ವಿಜೇಂದರ್‌ ಸಿಂಗ್‌ ಮೊದಲಾದವರು ಖಂಡಿಸಿದ್ದಾರೆ.

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.