ಮಾಬುಕಳ: ಅಗ್ನಿ ದುರಂತದಿಂದ ಯುವತಿ ಗಂಭೀರ
Team Udayavani, Feb 18, 2019, 4:44 AM IST
ಕೋಟ: ಅಗ್ನಿ ಆಕಸ್ಮಿಕದಿಂದ ಯುವತಿ ಗಂಭೀರವಾಗಿ ಗಾಯ ಗೊಂಡ ಘಟನೆ ರವಿವಾರ ರಾತ್ರಿ ಮಾಬುಕಳ ಸಮೀಪ ಬೊಬ್ಬರ್ಯನಕೆರೆಯಲ್ಲಿ ಸಂಭವಿಸಿದೆ. ಘಟ ನೆಗೆ ಮೊಬೈಲ್ ಸ್ಫೋಟ ಕಾರಣ ಎಂದು ಹೇಳಲಾಗುತ್ತಿದ್ದು, ಅಂಗಳದಲ್ಲಿದ್ದ ಬೈಹುಲ್ಲಿನ ರಾಶಿಗೂ ಹಾನಿಯಾಗಿದೆ. ಜಲಜಾ ಮರಕಾಲ್ತಿ ಅವರ ಪುತ್ರಿ ಅಶ್ವಿನಿ ಮರಕಾಲ್ತಿ (26) ಗಾಯಗೊಂಡವರು.
ಇವರಿಗೆ ಎರಡು ತಿಂಗಳ ಹಿಂದೆ ಮಲ್ಪೆಯ ಯುವಕನೊಂದಿಗೆ ಮದುವೆಯಾಗಿತ್ತು. ಸ್ಥಳೀಯ ಜಾತ್ರೆಯ ಸಲುವಾಗಿ ಆಕೆ ರವಿವಾರ ತಾಯಿ ಮನೆಗೆ ಆಗಮಿಸಿದ್ದರು. ಸಂಜೆ ವೇಳೆ ಮನೆಯ ಅಂಗಳದಲ್ಲಿ ಮೊಬೈಲ್ನಲ್ಲಿ ಮಾತನಾಡುತ್ತಿದ್ದ ಸಂದರ್ಭ ಮೊಬೈಲ್ ಸ್ಫೋಟಿಸಿದ್ದು, ಕೂಡಲೇ ಅದನ್ನು ಪಕ್ಕದಲ್ಲಿದ ಬೈಹುಲ್ಲಿನ ರಾಶಿಗೆ ಎಸೆದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಅಕ್ಕಪಕ್ಕದವರು ಬಂದು ನೋಡುವಾಗ ಯುವತಿ ಗಂಭೀರವಾದ ಸುಟ್ಟಗಾಯದಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದು, ತಾಯಿ ಕೂಡ ಅಸ್ವಸ್ಥಗೊಂಡಿದ್ದರು. ಅನಂತರ ಸ್ಥಳೀಯರ ಸಹಕಾರದಿಂದ ಮಂಗ ಳೂರಿನ ಆಸ್ಪತ್ರೆಗೆ ದಾಖಲಿಸ ಲಾಯಿತು. ತಾಯಿಗೆ ಸಮೀಪದ ಕ್ಲಿನಿಕ್ನಲ್ಲಿ ಚಿಕಿತ್ಸೆ ನೀಡಲಾಯಿತು ಎಂದು ಸ್ಥಳೀಯರು ತಿಳಿಸಿದ್ದಾರೆ. ಸಂಪೂರ್ಣ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ.ಅಗ್ನಿಶಾಮಕದ ದಳದವರು ಆಗಮಿಸಿ ಸ್ಥಳೀಯರ ಸಹಕಾರ ದೊಂದಿಗೆ ಬೆಂಕಿಯನ್ನು ನಂದಿಸಿದರು.