ಸಮೃದ್ಧ ಮೆಣಸಿನಕಾಯಿ ಬೆಳೆದ ರೈತ
Team Udayavani, Feb 18, 2019, 7:00 AM IST
ಯಡ್ರಾಮಿ: ಗುತ್ತಿಗೆ ಕರಾರಿನ ಮೇಲೆ ಭೂಮಿ ಪಡೆದ ಆಂಧ್ರ ಮೂಲದ ರೈತನೊಬ್ಬ ಉತ್ತಮ ಬೆಳೆ ಬೆಳೆದು ಸುತ್ತಮುತ್ತಲಿನ ರೈತರಿಗೆ ಮಾದರಿಯಾಗಿದ್ದಾನೆ. ಕೆ. ವೀರಯ್ಯ ಎನ್ನುವರೆ ಪಟ್ಟಣದಿಂದ 3ಕಿ.ಮೀ ದೂರದಲ್ಲಿರುವ 20 ಎಕರೆ ಜಮೀನನ್ನು ಗುತ್ತಿಗೆ ಕರಾರಿನ ಮೇಲೆ ಪಡೆದ
ರೈತ. ಈ ರೈತ ಮೂರು ವರ್ಷ ಕಾಲ ಗುತ್ತಿಗೆ ಕರಾರಿನ ಮೇಲೆ ಭೂಮಿ ಪಡೆದಿದ್ದು, ಪ್ರತಿ ವರ್ಷ 3ಲಕ್ಷ ರೂ. ಮುಂಗಡ ನೀಡಿ 16 ಎಕರೆ ಭೂಮಿಯಲ್ಲಿ ಮೆಣಸಿನಕಾಯಿ ಬೆಳೆ ತೆಗೆದಿದ್ದಾನೆ. ವರ್ಷಪೂರ್ತಿ ಸಮಯಕ್ಕೆ ಸರಿಯಾಗಿ ಔಷಧೋಪಚಾರ ಮಾಡಿ, ಸರಿ ಪ್ರಮಾಣದ ಗೊಬ್ಬರ ಉಣಿಸಿ ಸಮೃದ್ಧ ಬೆಳೆ ಬೆಳೆದು ಮಾದರಿಯಾಗಿದ್ದಾನೆ ಈ ರೈತ. ಅಲ್ಲದೇ ಹಸಿ ಮೆಣಸಿನಕಾಯಿ ಮಾರಾಟದಿಂದ ತಾನು ನೀಡಿದ ಕರಾರಿನ ಹಣವನ್ನು ಮರಳಿ ಪಡೆದಿದ್ದಾನೆ. ಮುಂದೆ ಬರುವ ಕೆಂಪು ಮೆಣಸಿನಕಾಯಿ ಪೂರ್ಣ ಲಾಭ ತಂದು ಕೊಡುತ್ತದೆ ಎಂದು ವಿಶ್ವಾಸದಿಂದ ಹೇಳುತ್ತಾನೆ.
ಹೊಲದೊಳಗೆ ಜೋಪಡಿ ಹಾಕಿಕೊಂಡು ಸಮಯಕ್ಕೆ ಸರಿಯಾಗಿ ಔಷಧ ಸಿಂಪಡಿಸುತ್ತೇವೆ. ಭೂಮಿಗೆ ತಕ್ಕಂತೆ ಗೊಬ್ಬರ ಹಾಕುತ್ತೇವೆ. ಔಷಧ ಮತ್ತು ನೀರು ಬಿಡುವ ಕೆಲಸವನ್ನು ನಾನೇ ಮಾಡ್ತಿನಿ. ಇಲ್ಲಿನ ರೈತರು ಭೂಮಿಗೆ ಖರ್ಚು ಮಾಡಲು ಹಿಂಜರಿಯುತ್ತಾರೆ. ಹಸಿ ಮೆಣಸಿನಕಾಯಿ ಮಾರಿ ಎರಡೂಮೂರು ಲಕ್ಷ ರೂ. ಬಂದಿವೆ. ಕೆಂಪುಕಾಯಿಗೆ ಸದ್ಯದ ಬೆಲೆ ಸಿಕ್ಕರೆ 25 ಲಕ್ಷ ರೂ. ವರೆಗೂ ಲಾಭ ಆಗುತ್ತದೆ.
ಕೆ. ವೀರಯ್ಯ, ಆಂಧ್ರ ಮೂಲದ ರೈತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಿಜೆಪಿ ವರ್ಚಸ್ಸು ಕುಸಿತ; ಸೋಲಿನ ಭೀತಿಯಿಂದ ಮೋದಿ ದ್ವೇಷ ಭಾಷಣ: ಬಿ.ಆರ್.ಪಾಟೀಲ್
ಖಡಕ್ ಬಿಸಿಲು- ಪೊಲೀಸ್ ತಳ್ಳಾಟದಿಂದ ಸಂಸದ ಡಾ.ಜಾಧವ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು
Siddaramaiah ಸಿಎಂ ಆದ ಬಳಿಕ ರಾಜ್ಯಕ್ಕೆ ಬರಗಾಲ: ವಿಜಯೇಂದ್ರ
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
MUST WATCH
ಹೊಸ ಸೇರ್ಪಡೆ
Brahmavara-ಉಡುಪಿ ಟ್ರಾಫಿಕ್ ಜಾಮ್ ಸಮಸ್ಯೆ: ಸವಾರರು ಸುಸ್ತೋ ಸುಸ್ತು
Gangster ಗೋಲ್ಡಿ ಬ್ರಾರ್ ಸತ್ತಿಲ್ಲ… ಶೂಟೌಟ್ ಬಗ್ಗೆ ಸ್ಪಷ್ಟನೆ ನೀಡಿದ ಅಮೆರಿಕ ಪೊಲೀಸರು
Pens: ಬಹುರೂಪದಲ್ಲಿ ಲಭ್ಯವಿರುವ ಬಹುಪಯೋಗಿ ಲೇಖನಿ
70 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ; ನಿರ್ವಹಣೆಯಿಲ್ಲದೆ ಸೊರಗಿದ ಮಲ್ಲಿಕಟ್ಟೆ ಪಾರ್ಕ್
Rajinikanth ಬಯೋಪಿಕ್ಗೆ ಭರ್ಜರಿ ತಯಾರಿ; ಬಾಲಿವುಡ್ ನಿರ್ಮಾಪಕನಿಂದ ಸಿನಿಮಾ ನಿರ್ಮಾಣ