ಮನೆಬಾಗಿಲಿಗೆ ಆರೋಗ್ಯ ಸೇವೆ ಶ್ಲಾಘನಾರ್ಹ: ಕೋಟ


Team Udayavani, Feb 21, 2019, 12:30 AM IST

200219astro01.jpg

ಮಣಿಪಾಲ: ವೃದ್ಧರು, ಅಂಗವಿಕಲರು, ದೀರ್ಘ‌ಕಾಲಿಕ ರೋಗಗಳಿಗೆ ತುತ್ತಾಗಿರುವವರು, ಮಧುಮೇಹ ಪೀಡಿತರಿಗೆ ವರದಾನವಾಗುವ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಹೋಮ್‌ ಕೇರ್‌ ಸೇವೆ ಶ್ಲಾಘನಾರ್ಹ ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಬುಧವಾರ ಕೆಎಂಸಿ ಮಣಿಪಾಲದ ಒಪಿಡಿ ಆವರಣದಲ್ಲಿ ಉಡುಪಿ ಜಿಲ್ಲೆಯ ಚೊಚ್ಚಲ ಕೆಎಂಸಿ ಹೋಮ್‌ ಕೇರ್‌ ಸರ್ವಿಸ್‌(ಗೃಹ ಆರೈಕೆ ಸೇವೆ)ಗೆ ಚಾಲನೆ ನೀಡಿ ಮಾತನಾಡಿದರು.

ಮೊದಲೇ ಕೆಎಂಸಿಗೆ ಬನ್ನಿ 
ಮುಖ್ಯ ಅತಿಥಿಯಾಗಿದ್ದ ಶಾಸಕ ಕೆ. ರಘುಪತಿ ಭಟ್‌ ಮಾತನಾಡಿ, ವೃದ್ಧರು, ಮಧುಮೇಹ ಪೀಡಿತರಿಗೆ ಹೋಮ್‌ ಕೇರ್‌ ಸೇವೆ ಅತ್ಯುತ್ತಮ. ಕೆಎಂಸಿಯಲ್ಲಿ ಆರೋಗ್ಯ ಕರ್ನಾಟಕ/ಆಯುಷ್ಮಾನ್‌ ಭಾರತ ಯೋಜನೆಗಳ ಸೇವೆ ಅತ್ಯುತ್ತಮವಾಗಿ ಲಭ್ಯವಿದೆ. ಕಾಯಿಲೆಗಳು ಉಲ್ಬಣಿಸುವ ಮುನ್ನವೇ ಕೆಎಂಸಿಗೆ ಬನ್ನಿ ಎಂದು ಹೇಳಿದರು.

ಮಾಹೆ ಕುಲಪತಿ ಡಾ| ಎಚ್‌. ವಿನೋದ ಭಟ್‌ ಅಧ್ಯಕ್ಷತೆ ವಹಿಸಿದ್ದರು. ಸಹಕುಲಪತಿ ಡಾ| ಪೂರ್ಣಿಮಾ ಬಾಳಿಗ, ಮುಖ್ಯ ನಿರ್ವಹಣಾಧಿಕಾರಿ ಸಿ.ಜಿ. ಮುತ್ತಣ್ಣ ಉಪಸ್ಥಿತರಿದ್ದರು. ಎಚ್‌ಆರ್‌ ವಿಭಾಗದ ಸುಚಿತಾ ನಿರೂಪಿಸಿದರು. ಹೋಮ್‌ಕೇರ್‌ ಸೇವೆ ಇನ್‌ಚಾರ್ಜ್‌ ರತೀಶ್‌ ಮಾಹಿತಿ ನೀಡಿದರು.

10 ಕಿ.ಮೀ. ವ್ಯಾಪ್ತಿ
ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ್‌ ಶೆಟ್ಟಿ ಪ್ರಸ್ತಾವನೆಗೈದು, ಸದ್ಯ ಎರಡು ವಾಹನಗಳ ಮೂಲಕ ಆಸ್ಪತ್ರೆಯ 10 ಕಿ.ಮೀ. ವ್ಯಾಪ್ತಿಯೊಳಗೆ ಹೋಂ ಕೇರ್‌ ಸೇವೆ ಒದಗಿಸುತ್ತೇವೆ. ಮುಂದಿನ ದಿನಗಳಲ್ಲಿ ಈ ಸೇವೆಯನ್ನು ಇನ್ನಷ್ಟು ವಿಸ್ತರಿಸಲಿದ್ದೇವೆ ಎಂದರು.

ಏನಿದು ಹೋಮ್‌ ಕೇರ್‌ ?
ವಿವಿಧ ಪರೀಕ್ಷೆಗಳಿಗೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಆಸ್ಪತ್ರೆಗೆ ಬರಬೇಕಾಗುತ್ತದೆ. ವೃದ್ಧರಿಗೆ, ಅಂಗವಿಕಲರಿಗೆ ಇದು ಕಷ್ಟ. ಇಂಥ ಸಂದರ್ಭ ನರ್ಸಿಂಗ್‌ ತಂಡದ ಸದಸ್ಯರು ರೋಗಿಗಳ ಮನೆಗೆ ತರಳಿ ಸ್ಯಾಂಪಲ್‌ ಸಂಗ್ರಹಿಸುತ್ತಾರೆ. ವರದಿ, ವೈದ್ಯರ ಅಭಿಪ್ರಾಯವನ್ನೂ ಮನೆಗೆ ತಲುಪಿಸುತ್ತಾರೆ. ಫಿಸಿಯೋಥೆರಪಿ ತಜ್ಞರು ಮನೆಗಳಿಗೆ ತೆರಳಿ ಸೇವೆ ನೀಡುತ್ತಾರೆ. ಗಾಯಕ್ಕೆ ಡ್ರೆಸ್ಸಿಂಗ್‌ ಸೇವೆಯನ್ನೂ ಮನೆಯಲ್ಲೇ ನೀಡಲಾಗುವುದು. ಅಗತ್ಯವಿದ್ದವರು 0820-2922761ಕ್ಕೆ  ಕರೆ ಮಾಡಬಹುದು.

ಆಯುಷ್ಮಾನ್‌ ಭಾರತ ಅನುಷ್ಠಾನದಲ್ಲಿ  ಸಮಸ್ಯೆ
ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಆಯುಷ್ಮಾನ್‌ ಭಾರತವು 5 ಲಕ್ಷ ರೂ. ವರೆಗಿನ ಚಿಕಿತ್ಸೆಗೆ ನೆರವಾಗುತ್ತದೆ. ಆದರೆ ರಾಜ್ಯ ಸರಕಾರದಮಟ್ಟದಲ್ಲಿ ಅನುಷ್ಠಾನ ಮಾಡುವಾಗ ಸಮಸ್ಯೆಯಾಗುತ್ತಿದೆ. ಮೊದಲು ಸರಕಾರಿ ಆಸ್ಪತ್ರೆಗೆ ಹೋಗಬೇಕು ಎಂಬ ನಿಯಮ ಮಾಡಿದ್ದು ರೋಗಿಗಳಿಗೆ ಕಷ್ಟವಾಗಿದೆ. ಕೆಲವು ರೋಗಗಳ ಕೋಡ್‌ಇಲ್ಲದೆ ಸಮಸ್ಯೆಯಾಗಿದೆ. ಈ ಬಗ್ಗೆ ವೈದ್ಯರು ಮಾಹಿತಿ ನೀಡಿದಲ್ಲಿ ಸರಕಾರದ ಗಮನಕ್ಕೆ ತರಲಾಗುವುದು. ಕೋಡ್‌ ಇಲ್ಲದ ಕಾಯಿಲೆಗೆ ಚಿಕಿತ್ಸೆ ನೀಡಲು ಸಾಧ್ಯವಾಗುವುದಿಲ್ಲ ಎಂದು ಶಾಸಕ ರಘುಪತಿ ಭಟ್‌ ಹೇಳಿದರು.

ಟಾಪ್ ನ್ಯೂಸ್

7

Viral News: ಕಳ್ಳತನಕ್ಕೆಂದು ಮನೆಗೆ ನುಗ್ಗಿ ಎಸಿಯ ಗಾಳಿಗೆ ಗಾಢವಾಗಿ ನಿದ್ರಿಸಿದ ಕಳ್ಳ.!

Raichur: ಕೆಸರು ಗದ್ದೆಯಂತಾದ ತರಕಾರಿ ಮಾರಾಟ ಕೇಂದ್ರ

Raichur: ಕೆಸರು ಗದ್ದೆಯಂತಾದ ತರಕಾರಿ ಮಾರಾಟ ಕೇಂದ್ರ

Shimoga; ಸಹೋದ್ಯೋಗಿಯನ್ನು ಬೈಕ್ ನಲ್ಲಿ ಕರೆದುಕೊಂಡು ಹೋಗಿದ್ದಕ್ಕೆ ಹಿಂದೂಯುವಕನ ಮೇಲೆ ಹಲ್ಲೆ

Shimoga; ಸಹೋದ್ಯೋಗಿಯನ್ನು ಬೈಕ್ ನಲ್ಲಿ ಕರೆದುಕೊಂಡು ಹೋಗಿದ್ದಕ್ಕೆ ಹಿಂದೂಯುವಕನ ಮೇಲೆ ಹಲ್ಲೆ

NamvsOmn: ಲೋ ಸ್ಕೋರ್‌ ಥ್ರಿಲ್ಲರ್ ನಲ್ಲಿ ಮಿಂಚಿದ ವಿಸ್ಸೆ: ಸೂಪರ್‌ ಓವರ್‌ ಗೆದ್ದ ನಮೀಬಿಯಾ

NamvsOmn: ಲೋ ಸ್ಕೋರ್‌ ಥ್ರಿಲ್ಲರ್ ನಲ್ಲಿ ಮಿಂಚಿದ ವಿಸ್ಸೆ: ಸೂಪರ್‌ ಓವರ್‌ ಗೆದ್ದ ನಮೀಬಿಯಾ

Stock Market: ಸಾರ್ವಕಾಲಿಕ ದಾಖಲೆಯ ಜಿಗಿತ ಕಂಡ ಬಾಂಬೆ ಷೇರುಪೇಟೆ ಸೂಚ್ಯಂಕ!

Stock Market: ಸಾರ್ವಕಾಲಿಕ ದಾಖಲೆಯ ಜಿಗಿತ ಕಂಡ ಬಾಂಬೆ ಷೇರುಪೇಟೆ ಸೂಚ್ಯಂಕ!

Rupert Murdoch: 93ರ ವಯಸ್ಸಿನಲ್ಲಿ 5ನೇ ಮದುವೆಯಾದ ಖ್ಯಾತ ಉದ್ಯಮಿ

Rupert Murdoch: 93ರ ವಯಸ್ಸಿನಲ್ಲಿ 5ನೇ ಮದುವೆಯಾದ ಖ್ಯಾತ ಉದ್ಯಮಿ

ಮದುವೆ ಮೆರವಣಿಗೆಯ ಟ್ರಾಕ್ಟರ್ ಟ್ರಾಲಿ ಪಲ್ಟಿ: ನಾಲ್ವರು ಮಕ್ಕಳು ಸೇರಿದಂತೆ 13 ಮಂದಿ ದುರ್ಮರಣ

ಮದುವೆ ಮೆರವಣಿಗೆಯ ಟ್ರಾಕ್ಟರ್ ಟ್ರಾಲಿ ಪಲ್ಟಿ: ನಾಲ್ವರು ಮಕ್ಕಳು ಸೇರಿದಂತೆ 13 ಮಂದಿ ದುರ್ಮರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MLC Election; ಹಿಂದೆ ಸರಿದಿರುವುದಾಗಿ ಪ್ರಚಾರ: ರಘುಪತಿ ಭಟ್‌ ದೂರು

MLC Election; ಹಿಂದೆ ಸರಿದಿರುವುದಾಗಿ ಪ್ರಚಾರ: ರಘುಪತಿ ಭಟ್‌ ದೂರು

ಕ್ಷೇತ್ರದಲ್ಲಿ ಕೆಲಸ ಮಾಡಿ ತೋರಿಸುತ್ತೇನೆ… ಪದವೀಧರರು ನನ್ನ ಕೈ ಬಿಡಲಾರರು: ರಘುಪತಿ ಭಟ್‌

ಕ್ಷೇತ್ರದಲ್ಲಿ ಕೆಲಸ ಮಾಡಿ ತೋರಿಸುತ್ತೇನೆ… ಪದವೀಧರರು ನನ್ನ ಕೈ ಬಿಡಲಾರರು: ರಘುಪತಿ ಭಟ್‌

Mangaluru: ಇಂದು ನೈಋತ್ಯ ಪದವೀಧರರ, ಶಿಕ್ಷಕರ ಕ್ಷೇತ್ರದ ಚುನಾವಣೆ…

Mangaluru: ಇಂದು ನೈಋತ್ಯ ಪದವೀಧರರ, ಶಿಕ್ಷಕರ ಕ್ಷೇತ್ರದ ಚುನಾವಣೆ…

ರೈತ ಸಂಪರ್ಕ ಕೇಂದ್ರಗಳಲ್ಲಿ ಭತ್ತದ ಬಿತ್ತನೆ ಬೀಜಗಳ ಲಭ್ಯ

ರೈತ ಸಂಪರ್ಕ ಕೇಂದ್ರಗಳಲ್ಲಿ ಭತ್ತದ ಬಿತ್ತನೆ ಬೀಜಗಳ ಲಭ್ಯ

Udupi: ಐತಿಹಾಸಿಕ ರಂಗು ಪಡೆದ ವಿಧಾನ ಪರಿಷತ್‌ ಚುನಾವಣೆ..

Udupi: ಐತಿಹಾಸಿಕ ರಂಗು ಪಡೆದ ವಿಧಾನ ಪರಿಷತ್‌ ಚುನಾವಣೆ..

MUST WATCH

udayavani youtube

ಹೆರ್ಗದಲ್ಲಿ 40 ಅಡಿ ಆಳದ ಬಾವಿಗೆ ಬಿದ್ದ ಕರುವಿನ ರಕ್ಷಣೆ

udayavani youtube

ಇಡ್ಲಿ ವಡೆ, ಶಾವಿಗೆ ಬಾತ್ ಗೆ ಹೆಸರುವಾಸಿಯಾದ ಹೋಟೆಲ್

udayavani youtube

ಒಡವೆ ಖರೀದಿಸುವ ನೆಪದಲ್ಲಿ ಮೂರುವರೆ ಲಕ್ಷ ಮೌಲ್ಯದ ಒಡವೆ ಕದ್ದ ಖತರ್ನಾಕ್ ಅಜ್ಜಿ

udayavani youtube

ರಘುಪತಿ ಭಟ್ ಅವರ ಮನದಾಳದ ಮಾತು

udayavani youtube

ರಘುಪತಿ ಭಟ್ ಅವರ ಮನದಾಳದ ಮಾತು

ಹೊಸ ಸೇರ್ಪಡೆ

MLC Election; ಹಿಂದೆ ಸರಿದಿರುವುದಾಗಿ ಪ್ರಚಾರ: ರಘುಪತಿ ಭಟ್‌ ದೂರು

MLC Election; ಹಿಂದೆ ಸರಿದಿರುವುದಾಗಿ ಪ್ರಚಾರ: ರಘುಪತಿ ಭಟ್‌ ದೂರು

7

Viral News: ಕಳ್ಳತನಕ್ಕೆಂದು ಮನೆಗೆ ನುಗ್ಗಿ ಎಸಿಯ ಗಾಳಿಗೆ ಗಾಢವಾಗಿ ನಿದ್ರಿಸಿದ ಕಳ್ಳ.!

ಕೆ.ಸಿ.ಇ.ಟಿ ಫ‌ಲಿತಾಂಶ: ಜ್ಞಾನಸುಧಾ ಎಂಜಿನಿಯರಿಂಗ್‌ನಲ್ಲಿ 18 ರ್‍ಯಾಂಕ್‌

ಕೆ.ಸಿ.ಇ.ಟಿ ಫ‌ಲಿತಾಂಶ: ಜ್ಞಾನಸುಧಾ ಎಂಜಿನಿಯರಿಂಗ್‌ನಲ್ಲಿ 18 ರ್‍ಯಾಂಕ್‌

Raichur: ಕೆಸರು ಗದ್ದೆಯಂತಾದ ತರಕಾರಿ ಮಾರಾಟ ಕೇಂದ್ರ

Raichur: ಕೆಸರು ಗದ್ದೆಯಂತಾದ ತರಕಾರಿ ಮಾರಾಟ ಕೇಂದ್ರ

Raichur: Power outage; Voting by torchlight

Raichur: ವಿದ್ಯುತ್ ಅಡಚಣೆ; ಟಾರ್ಚ್ ಬೆಳಕಿನಲ್ಲಿ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.