ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಗತ್ಯ
Team Udayavani, Feb 21, 2019, 1:00 AM IST
ಪೆರ್ಡೂರು: ಅಂತರ್ಜಲ ಮಟ್ಟ ಪೆರ್ಡೂರು ಗ್ರಾ.ಪಂ. ವ್ಯಾಪ್ತಿಯಲ್ಲೂ ತೀವ್ರ ವಾಗಿ ಕುಸಿಯತೊಡಗಿದ್ದು, ನೀರಿನ ಅಭಾವ ಕಾಣಿಸತೊಡಗಿದೆ.
ಪೆರ್ಡೂರು ಗ್ರಾ. ಪಂ. ವ್ಯಾಪ್ತಿಯಲ್ಲಿ 10, 927 ಜನಸಂಖ್ಯೆಯಿದ್ದು 3,380 ಕುಟುಂಬಗಳು ಇವೆ. ಇಲ್ಲಿ 1567 ಖಾಸಗಿ ಬಾವಿಗಳು, 22 ಸರಕಾರಿ ಬಾವಿಗಳಿದ್ದು ಶೇ.50ರಷ್ಟು ಜನ ಪಂಚಾಯತ್ ನೀರನ್ನೇ ಅವಲಂಬಿಸಿದ್ದಾರೆ. ಒಟ್ಟು 748 ನಳ್ಳಿ ನೀರಿನ ಸಂಪರ್ಕ ನೀಡಲಾಗಿದೆ. ಕಳೆದ ಬಾರಿ ಸಮಸ್ಯೆ ಇದ್ದ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗಿತ್ತು.
ಎಲ್ಲೆಲ್ಲಿ ಸಮಸ್ಯೆ?
ಪಂಚಾಯತ್ ವ್ಯಾಪ್ತಿಯ ಹೊಸಂಗಡಿ, ಕೈರು, ಪಕ್ಕಾಲು, ಹೆರ್ಡೆ, ಬಾದಲ್ಜಡ್ಡು, ಪಾಡಿಗಾರ,
ಕುಕ್ಕುಂಡಿ ಮೊದಲಾದ ಪ್ರದೇಶದಲ್ಲಿ ಹಾಗೂ ಬೈರಂಪಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹರಿಖಂಡಿಗೆ, ಕುಂಟಾಲ್ಕಟ್ಟೆ ಪ್ರದೇಶದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಈ ವರ್ಷ ಮಾರ್ಚ್, ಎಪ್ರಿಲ್, ಮೇ ತಿಂಗಳಲ್ಲಿ ಸಮಸ್ಯೆ ಬಿಗಡಾಯಿಸುವ ಸಾಧ್ಯತೆ ಇದೆ.
ಹೆಸರಿಗೆ ಮಾತ್ರ ಕೊಳವೆ ಬಾವಿ
ಪಂಚಾಯತ್ ವ್ಯಾಪ್ತಿಯಲ್ಲಿ 53 ಕೊಳವೆ ಬಾವಿಗಳಿದ್ದರೂ ಈಗ ಕೇವಲ 13 ಮಾತ್ರ ಉಪಯೋಗಿಸಲಾಗುತ್ತಿದೆ. ಉಳಿದ ಕೊಳವೆ ಬಾವಿಗಳನ್ನು ಉಪಯೋಗಿಸದರೆ ನೀರಿನ ಸಮಸ್ಯೆ ಸ್ವಲ್ಪ ನೀಗಬಹುದು.
ಅಂತರ್ಜಲ ಪೂರಣ ಆಗಬೇಕು
ಹಿಂದೆ ಈ ಭಾಗದಲ್ಲಿ ನೀರಿನ ಸಮಸ್ಯೆ ಇರಲಿಲ್ಲ. ಆದರೆ ಅವ್ಯಾಹತ ಬೋರ್ವೆಲ್ಗಳು, ನೀರಿನ ಬಳಕೆಯಿಂದ ಸಮಸ್ಯೆ ಇದೆ. ಆದ್ದರಿಂದ ಈ ಭಾಗದಲ್ಲಿ ಮಳೆ ನೀರಿಂಗಿಸುವಿಕೆಯಂತಹ ಕೆಲಸಗಳನ್ನು ಅಗತ್ಯವಾಗಿ ಮಾಡಬೇಕಿದೆ. ಜತೆಗೆ ಕೆರೆಗಳ ಹೂಳೆತ್ತುವಿಕೆಯೂ ಆಗಬೇಕಿದೆ.
ಬೈರಂಪಳ್ಳಿಯಲ್ಲಿಯೂ ಸಮಸ್ಯೆ
ಪೆರ್ಡೂರು ಗ್ರಾ.ಪಂ. ಹತ್ತಿರದ ಬೈರಂಪಳ್ಳಿ ಗ್ರಾ.ಪಂ.ನ ಹರಿಖಂಡಿಗೆ ಕುಂಟಾಲ್ಕಟ್ಟೆಯಲ್ಲಿ ಕೂಡ ಪ್ರತಿವರ್ಷ ನೀರಿನ ಸಮಸ್ಯೆಯಿದೆ. ಎಪ್ರಿಲ್ ಮೇ ತಿಂಗಳಲ್ಲಿ ಇಲ್ಲಿಗೆ ಟ್ಯಾಂಕರ್ ನೀರಿನ ಮೂಲಕ ಪೂರೈಕೆ ಮಾಡಲಾಗುತ್ತದೆ. ಹರಿಖಂಡಿಗೆಯಲ್ಲಿ ಕೇವಲ ಒಂದು ಬೋರ್ವೆಲ್ ಇದ್ದು ಇಲ್ಲಿ ನೀರಿನ ಟ್ಯಾಂಕ್ ನಿರ್ಮಾಣವಾದರೆ ಸ್ವಲ್ಪ ಸಮಸ್ಯೆ ದೂರವಾಗುತ್ತದೆ ಎಂದು ಬೈರಂಪಳ್ಳಿ ಗ್ರಾ.ಪಂ. ಅಧ್ಯಕ್ಷ ಸದಾಶಿವ ಪೂಜಾರಿ ತಿಳಿಸಿದ್ದಾರೆ.
ಟ್ಯಾಂಕರ್ ಮೂಲಕ ನೀರು
ನೀರಿನ ಸಮಸ್ಯೆ ಪ್ರದೇಶಗಳಿಗೆ ಕಳೆದ ವರ್ಷದಂತೆ ಈ ವರ್ಷ ಕೂಡ ಟ್ಯಾಂಕರ್ ಮೂಲಕ ನೀರನ್ನು ಪೂರೈಸಲಾಗುವುದು. ಸಮಸ್ಯೆ ಬಂದಲ್ಲಿ ತತ್ಕ್ಷಣ ಸ್ಪಂದನೆ ನೀಡಲಾಗುತ್ತದೆ.
-ಸುರೇಶ್ , ಪಂ.ಅಭಿವೃದ್ಧಿ ಅಧಿಕಾರಿ, ಪೆರ್ಡೂರು ಗ್ರಾ.ಪಂ.
ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಬೇಕು
ಬೇಗ ಮಳೆ ನಿಂತದ್ದರಿಂದ ಈ ಬಾರಿ ನೀರಿನ ಸಮಸ್ಯೆ ಹೆಚ್ಚಾಗಲಿದೆ. ಸಮಸ್ಯೆಗಳಿರುವ ಪ್ರದೇಶಗಳಲ್ಲಿ ಈ ಬಾರಿ ಬಾವಿಗಳನ್ನು ತೋಡಲಾಗಿದೆ. ಕಳೆದ ವರ್ಷ ರೂಪುಗೊಂಡ ನೀರಿನ ಸೆಲೆ ಇರುವ ಪುತ್ತಿಗೆ ಹೊಳೆ ಮೂಲಕ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಗೊಂಡಲ್ಲಿ ಸಮಸ್ಯೆ ಬಗೆಹರಿಯಬಹುದು.
-ಶಾಂಭವಿ ಕುಲಾಲ್ ಪೆರ್ಡೂರು ಗ್ರಾ.ಪಂ. ಅಧ್ಯಕ್ಷರು
– ಹೆಬ್ರಿ ಉದಯಕುಮಾರ್ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ