ಕಿಡ್ನಿ ಕೊಟ್ಟು ಮೊಮ್ಮಗನಿಗೆ ಬಾಳು ಕೊಟ್ಟ ಅಜ್ಜ
Team Udayavani, Feb 23, 2019, 12:39 AM IST
ಹುಬ್ಬಳ್ಳಿ: ಎಂಟು ವರ್ಷದ ಬಾಲಕನಿಗೆ 52 ವಯಸ್ಸಿನ ವ್ಯಕ್ತಿಯ ಮೂತ್ರಪಿಂಡ (ಕಿಡ್ನಿ) ಜೋಡಿಸುವ ಶಸ್ತ್ರ ಚಿಕಿತ್ಸೆಯನ್ನು ಇಲ್ಲಿನ ತತ್ವದರ್ಶ ಆಸ್ಪತ್ರೆಯ ವೈದ್ಯರ ತಂಡ ಯಶಸ್ವಿಯಾಗಿ ಪೂರೈಸಿದೆ.
ಸುದ್ದಿಗೋಷ್ಠಿಯಲ್ಲಿ ಮೂತ್ರಪಿಂಡ ತಜ್ಞ ಡಾ.ವೆಂಕಟೇಶ ಮೊಗೇರ ಮಾತನಾಡಿ, ಎಂಟು ವರ್ಷದ ಮಲ್ಲು ಕೋಟಿಕಲ್ಲ ಎಂಬ ಬಾಲಕನಿಗೆ ಆತನ ಅಜ್ಜನ ಮೂತ್ರಪಿಂಡ ದಾನ ಪಡೆದು ಜೋಡಿಸಲಾಗಿದೆ. ಇಂತಹ ಶಸ್ತ್ರಚಿಕಿತ್ಸೆ ಉತ್ತರ ಕರ್ನಾಟಕದಲ್ಲಿ ಮೊದಲು. ಕಳೆದ ಐದು ವರ್ಷಗಳಿಂದ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ಬಾಲಕ ನಮ್ಮ ಆಸ್ಪತ್ರೆಗೆ ಬಂದಾಗ ಮೂತ್ರಪಿಂಡ ಜೋಡಣೆ ಅನಿರ್ವಾಯವಾಗಿತ್ತು. ಬಾಲಕನ ಅಜ್ಜನ ಕಿಡ್ನಿ ಪಡೆದು ಬಾಲಕನಿಗೆ ಜೋಡಿಸಲಾಗಿದೆ ಎಂದರು.
ಬಾಲಕನ ತಾಯಿ ಚಿನ್ನಮ್ಮ ಕೋಟಿಕಲ್ಲ ಮಾತನಾಡಿ, ಮಗನಿಗೆ ಕಿಡ್ನಿ ನೀಡಲು ನಾನು ಮತ್ತು ನನ್ನ ಪತಿ ಸಿದ್ಧ ರಿದ್ದೆವು. ಆದರೆ ನಮ್ಮ ಕಿಡ್ನಿ ಅವನಿಗೆ ಹೊಂದಾಣಿಕೆ ಆಗಲಿಲ್ಲ. ನಮ್ಮ ತಂದೆಯವರ ಕಿಡ್ನಿ ಹೋಲಿಕೆಯಾಗಿದ್ದು, ಮೊಮ್ಮಗನಿಗೆ ಕಿಡ್ನಿ ದಾನ ಮಾಡಿ ನನ್ನ ಮಗನ ಪ್ರಾಣ ಉಳಿಸಿದ್ದಾರೆ. ಸೈನಿಕನ ಮಗ ಎನ್ನುವ ಕಾರಣಕ್ಕೆ ಆಸ್ಪತ್ರೆಯಿಂದ ಶೇ.50ರಿಯಾಯಿತಿ ನೀಡಿರುವುದು ಒಂದಿಷ್ಟು ಆರ್ಥಿಕ ತೊಂದರೆ ತಪ್ಪಿದಂತಾಗಿದೆ ಎಂದು
ತಿಳಿಸಿದರು.
ಮಗುವಿನ ತಂದೆ ಸೋಮಪ್ಪ ಕೋಟಿಕಲ್ಲ, ಕಿಡ್ನಿ ದಾನ ಮಾಡಿದ ಹುಚ್ಚಪ್ಪ ನರಿ, ಶಸ್ತ್ರಚಿಕಿತ್ಸೆಯಲ್ಲಿ ಪಾಲ್ಗೊಂಡಿದ್ದ ವೈದ್ಯರಾದ ಡಾ.ದಿಲೀಪ ಜವಳಿ, ಡಾ.ಮಂಜು ಪ್ರಸಾದ, ಡಾ.ಭರತ ಕ್ಷತ್ರಿ, ಡಾ.ಸಂಜೀವ ಕುಲಗೋಡ, ಡಾ.ಶ್ರೀನಿವಾಸ ಹರಪನಹಳ್ಳಿ, ಡಾ.ಬಸವರಾಜ ಕಲ್ಲಾಪುರ, ಡಾ.ವಿನೋದ ರಟ್ಟಿಗೇರಿ, ಡಾ.ಸುಧೀಂದ್ರ ಪತೇಪೂರ, ಡಾ.ಶೀತಲ ಕುಲಗೋಡ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
MUST WATCH
ಹೊಸ ಸೇರ್ಪಡೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
Bengaluru: ಇನ್ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್; ಅಪರಿಚಿತನ ಮೇಲೆ ಕೇಸು