ಪುರಾತನ ನಾಣ್ಯ, ನೋಟು, ಸಾಧನಗಳ ಅನಾವರಣ


Team Udayavani, Feb 23, 2019, 6:23 AM IST

puratana.jpg

ಬೆಂಗಳೂರು: ದೊರೆಗಳ ಆಳ್ವಿಕೆ ಸಮಯದಲ್ಲಿ ಚಾಲ್ತಿಗೆ ತಂದ ನಾಣ್ಯಗಳು, ನಂತರ ಚಲಾವಣೆಗೆ ಬಂದ ನೋಟುಗಳು, ಇತಿಹಾಸ ಸೇರಿದ ಸಾಧನಗಳು ನಗರದ ಶಿಕ್ಷಕರ ಸದನದಲ್ಲಿ ಅನಾವರಣಗೊಂಡಿವೆ.

ಜರ್ಮನಿಯಲ್ಲಿ 1954ರಲ್ಲಿ ಆವಿಷ್ಕರಿಸಿದ ಕ್ಯಾಮೆರಾ, ರಾತ್ರಿ ವೇಳೆ ಸೈಕಲ್‌ ಓಡಿಸಲು ಬಳಸಲುತ್ತಿದ್ದ 50 ವರ್ಷಗಳ ಹಿಂದಿನ ದೀಪ, ನಕಲಿ ಅಂಚೆ ಚೀಟಿಗಳನ್ನು ಪತ್ತೆ ಹಚ್ಚಲು ಇಂಗ್ಲೆಂಡ್‌ ಆವಿಷ್ಕರಿಸಿದ್ದ ಸಾಧನ ಹಾಗೂ ಮೊದಲ ಗಣತಂತ್ರ ದಿನದ ಅಂಗವಾಗಿ ಆರ್‌ಬಿಐ ಬಿಡುಗಡೆ ಮಾಡಿದ್ದ ನೋಟು ಮತ್ತು ನಾಣ್ಯಗಳೆಲ್ಲವೂ ಅಲ್ಲಿವೆ.

ಮರುಧರ್‌ ಸಂಸ್ಥೆ ವತಿಯಿಂದ ಹಮ್ಮಿಕೊಂಡಿರುವ ಮೂರು ದಿನಗಳ ಪ್ರದರ್ಶನಕ್ಕೆ ಶುಕ್ರವಾರ ಚಾಲನೆ ದೊರೆತಿದೆ. 1854ರಲ್ಲಿ ವಿಶ್ವದಲ್ಲೇ ಪ್ರಥಮ ಬಾರಿ ಜಾರಿಗೊಳಿಸಿದ ಅಂಚೆ ಚೀಟಿ “ಬ್ಲಾಕ್‌ ಪೆನ್ನಿ’, ಸ್ವಾತಂತ್ರಾé ನಂತರ ಭಾರತೀಯ ಅಂಚೆ ಇಲಾಖೆ ಹೊರ ತಂದ ಮೊದಲ ಅಂಚೆ ಚೀಟಿ ತ್ರಿವರ್ಣ ಧ್ವಜದ ಜೈಹಿಂದ್‌ ಪ್ರಮುಖ ಆಕರ್ಷಣೆಯಾಗಿವೆ.

ಪ್ರದರ್ಶನದಲ್ಲಿ ಜರ್ಮನಿ ಕ್ಯಾಮೆರಾ ನೋಡುಗರಲ್ಲಿ ಕುತೂಹಲ ಹುಟ್ಟಿಸುತ್ತಿದೆ. ಈ ಕ್ಯಾಮೆರಾದ ಮುಂಭಾಗ ಜಿಗ್‌ಜಾಗ್‌ ಮಾಡಿದಂತಿದ್ದು ಇದರಲ್ಲಿ ಒಂದೇ ಲೆನ್ಸ್‌ ಬಳಸಲು ಸಾಧ್ಯ. ಅದನ್ನು ಛಾಯಗ್ರಾಹಕರು ತಮಗೆ ಬೇಕಾದಂತೆ ಹೊಂದಿಸಿಕೊಳ್ಳಲು ಮುಂಭಾಗದಲ್ಲಿ ವೃತ್ತಾಕಾರದ ಗೋಲದೊಳಗೆ ಸೂಜಿ ಇದೆ.

ಫೋಟೊ ತೆಗೆಯಲು ಹಿಂಬದಿಯಲ್ಲಿರುವ ಬಟನ್‌ ಅನ್ನು ಒಮ್ಮೆ ಒಂದೇ ಬಾರಿ ಕ್ಲಿಕ್ಕಿಸಿಸಬೇಕು. ಕ್ಲಿಕ್ಕಿಸಿದ ಕೆಲ ಕ್ಷಣದಲ್ಲೇ ಕ್ಯಾಮೆರಾದಿಂದ ನೆಗೆಟಿವ್‌ ಹೊರ ಬರುತ್ತದೆ. ಅದು ಬಂದ ನಂತರ ಮತ್ತೂಂದು ಫೋಟೊ ತೆಗೆಯಬಹುದು. ಕ್ಯಾಮೆರಾದಲ್ಲಿ ಯಾವುದೇ ಫ್ಲಾಷ್‌ ಲೈಟ್‌ ಇಲ್ಲದಿರುವುದರಿಂದ ಸೂರ್ಯನ ಬೆಳಕಿನಲ್ಲಿ ಮಾತ್ರ ಫೋಟೊ ಕ್ಲಿಕ್ಕಿಸಲಾಗುತ್ತಿತ್ತು.

ಸೈಕಲ್‌ ದೀಪ: ಮನೆಯಲ್ಲಿ ಬಳಸುವ ಬುಡ್ಡಿ ದೀಪವನ್ನು (ಚಿಮಣಿ) 60-70 ವರ್ಷಗಳ ಹಿಂದೆ ಜರ್ಮನಿಯಲ್ಲಿ ಸೈಕಲ್‌ನಲ್ಲಿ ಬಳಸಲಾಗುತ್ತಿತ್ತು. ಮೂರ್‍ನಾಲ್ಕು ಮುಚ್ಚುಳಗಳನ್ನು ತೆರೆದು ಅದರೊಳಗೆ ಇರುವ ಬತ್ತಿಕಡ್ಡಿಗೆ ಬಟ್ಟೆಯಿಂದ ಮಾಡಿದ ಬತ್ತಿಯನ್ನು ಹಾಕಬೇಕು. ನಂತರ ಕೆಳಗಿನ ಸೀಸೆಯೊಳಗೆ ಸೀಮೆಎಣ್ಣೆ ಹಾಕಬೇಕು.

ಬಟ್ಟೆಯಿಂದ ಮಾಡಿದ ಬತ್ತಿ ಎಣ್ಣೆಯಲ್ಲಿರಬೇಕು. ನಂತರ ಮೂರ್‍ನಾಲ್ಕು ಮುಚ್ಚಳಗಳನ್ನು ಹಾಕಿ ಸೈಕಲ್‌ ಮುಂಭಾಗದಲ್ಲಿ ಇಟ್ಟು ಓಡಿಸಿದರೆ ಆಯಿತು. ರಾತ್ರಿ ವೇಳೆ ಈ ರೀತಿ ದೀಪಗಳಿಲ್ಲದೆ ಓಡಾಡುವ ಸೈಕಲ್‌ ಸವಾರರಿಗೆ ಅಂದಿನ ಜರ್ಮನಿ ಸರ್ಕಾರ ದಂಡ ವಿಧಿಸುತ್ತಿತ್ತು ಎಂದು ಹೆಳಲಾಗಿದೆ.

ಹೂವಿನ ದಳದ ಆಕಾರದ ನಾಣ್ಯ?: ಆಫ್ರಿಕಾ ಖಂಡದಲ್ಲಿರುವ ಕಟಿಂಗ್‌ ಕ್ರಾಸ್‌ ದೇಶದ ಅರಸನೊಬ್ಬ 40ನೇ ಶತಮಾನದಲ್ಲಿ ಜಾರಿಗೊಳಿಸಿದ ನಾಣ್ಯ ಹೂವಿನ ದಳದ ಆಕಾರದಲ್ಲಿದೆ. ನಾಣ್ಯದಲ್ಲಿನ ಪ್ರಾಣಿಯ ಆಕೃತಿ ಕುದುರೆ ಅಥವಾ ಜಿಂಕೆಯನ್ನು ಹೋಲುತ್ತದೆ.

1773ರಲ್ಲಿ ಫ್ರೆಂಚ್‌ ಅಧೀನದಲ್ಲಿದ್ದ ವಿಂಡ್‌ವಾಡ್‌ ಐಸ್‌ಲ್ಯಾಂಡ್‌ ದೇಶ ಚಲಾವಣೆಗೆ ತಂದ 12 ಸೊಲ್‌ (ಮೌಲ್ಯ) ರೋಚೆಲ್‌ ಮಿಂಟ್‌ (ಕರೆನ್ಸಿ ಹೆಸರು) ಪ್ರದರ್ಶನಲ್ಲಿ ಬಹು ಅಪರೂಪದ ನಾಣ್ಯವಾಗಿತ್ತು. ಒಂದು ಬದಿ ಮೀನು, ಇನ್ನೊಂದು ಬದಿ ಎಲೆಗಳೊಳಗೆ ಅವಿತುಕೊಂಡ ಕೀಟದ ಚಿತ್ರವಿದ್ದ  ನಾಣ್ಯದ ಗಮನ ಸೆಳೆಯಿತು.

ಟಾಪ್ ನ್ಯೂಸ್

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್‌ಗೆ 48 ಗಂಟೆ ಪ್ರಚಾರ ನಿಷೇಧ

Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್‌ಗೆ 48 ಗಂಟೆ ಪ್ರಚಾರ ನಿಷೇಧ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ…? ಸಂಸದನ ವಿವಾದಾತ್ಮಕ ಹೇಳಿಕೆ

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ

Bengaluru water crisis: ನೀರು ಯಾವಾಗ ಬರುತ್ತೆ?: ಮೊಬೈಲಲ್ಲೇ ಮಾಹಿತಿ

Bengaluru water crisis: ನೀರು ಯಾವಾಗ ಬರುತ್ತೆ?: ಮೊಬೈಲಲ್ಲೇ ಮಾಹಿತಿ

10

Bengaluru: ಫ್ಲೈಓವರ್‌ಗಳಲ್ಲೂ ಕಸ ಸುರಿಯುವ ವಾಹನ ಸವಾರರು 

7

Bengaluru: ಸೈಕಲ್‌ ಕದಿಯುತ್ತಿದ್ದ ಸೆಕ್ಯೂರಿಟಿ ಗಾರ್ಡ್‌ ಬಂಧನ

Extortion:  ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

Extortion: ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್‌ಗೆ 48 ಗಂಟೆ ಪ್ರಚಾರ ನಿಷೇಧ

Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್‌ಗೆ 48 ಗಂಟೆ ಪ್ರಚಾರ ನಿಷೇಧ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.