ಬಿಟ್ಟಿ ಚಾಕ್ರಿ ಪದ್ಧತಿ’ ಇನ್ನೂ ಜೀವಂತ


Team Udayavani, Feb 24, 2019, 1:18 AM IST

5-dss.jpg

ಬೆಂಗಳೂರು: ಜೀತ ಪದ್ಧತಿಯಂತಹ ಕೂರ್ರ ವ್ಯವಸ್ಥೆ “ಬಿಟ್ಟಿ ಚಾಕ್ರಿ ಪದ್ಧತಿ’ ರಾಜ್ಯದಲ್ಲಿ ಇನ್ನೂ ಜೀವಂತವಾಗಿದೆ ಎಂದು ಜೀತ ವಿಮುಕ್ತ ಕರ್ನಾಟಕ (ಜೀವಿಕಾ) ಸಂಸ್ಥೆ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ.

ಸಗಣಿ ಬಳಿಯುವುದು, ಹೆಂಡಿ (ಕೊಟ್ಟಿಗೆ) ಕಸ ಬಳಿಯುವುದು, ಹೆಂಡಿ ಕಸ ಎತ್ತುವುದು ಮುಂತಾದ ಪರ್ಯಾಯ ಪದಗಳಿಂದ ಕರೆಯಲಾಗುವ ವ್ಯವಸ್ಥೆ ಶನಿವಾರ ಶಾಸಕ ಭವನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ವಿಚಾರ ಸಂಕಿರಣದಲ್ಲಿ ಬೆಳಕಿಗೆ ಬಂದಿತು. ಉ.ಕ. ಭಾಗದಲ್ಲಿ ದಲಿತರು ಮೇಲ್ಜಾತಿಯ ಮನೆಗಳಲ್ಲಿ ಸ್ವತ್ಛತೆಗೆ ಸಂಬಂಧಿಸಿದ ಕೆಲಸ ಮಾಡಿ ಸಂಬಳವಿಲ್ಲದೆ ಅಥವಾ ಕಡಿಮೆ ಸಂಬಳಕ್ಕೆ ಬದುಕುವ ಹೀನಾಯ ಪರಿಸ್ಥಿತಿಯೇ ಬಿಟ್ಟಿ ಚಾಕ್ರಿ.

ದಿನ ನಿತ್ಯದ ಸ್ವತ್ಛತಾ ಕಾರ್ಯಗಳೊಂದಿಗೆ ದೇವರ ಕಾರ್ಯ ಗಳಲ್ಲಿ ಹಲಿಗೆ ಬಡಿಯುವುದು, ಮದುವೆ ಸಮಯದಲ್ಲಿ ಮದು ಮಗನಿಗೆ ತಾವೇ ಖುದ್ದಾಗಿ ಚಪ್ಪಲಿ ಹೊಲಿದು ಕೊಡುವುದು, ಇಲ್ಲ ದಿದ್ದರೆ ಅಂಗಡಿಯಿಂದ ಚಪ್ಪಲಿ ತಂದು ಪೂಜೆ ಮಾಡಿ ಕೊಡುವುದು, ಸಾವಿನ ಸಮಯದಲ್ಲಿ ಪಂಜು ಹಿಡಿಯುವುದು, ದಾನದ ಬುಟ್ಟಿ ಹೊರುವುದು, ಶವ ಎತ್ತಿಕೊಂಡು ಹೋದ ಮೇಲೆ ಶವ ಇಟ್ಟ ಜಾಗ ತೊಳೆದು ಸಗಣಿಯಿಂದ ಸಾರಿಸಿ ಸ್ವತ್ಛಗೊಳಿಸುವಂತಹ ಕಾರ್ಯಗಳನ್ನು ಇವರು ಮಾಡಬೇಕಾಗುತ್ತದೆ. ಇದಕ್ಕೆ ತಿಂಗಳಿಗೆ ಪುರುಷರಿಗೆ 200 ರೂ. ಹಾಗೂ ಮಹಿಳೆಯರಿಗೆ 100 ರಿಂದ 150 ರೂ. ಕೂಲಿ ನೀಡಲಾಗುವುದು. 10 ದಿನಗಳು ಸರಿ ಯಾಗಿ ಕೆಲಸ ಮಾಡಿದರೆ ಒಂದು ಚೀಲ ಬಿಳಿ ಜೋಳ ಸಂಪಾದಿಸ ಬಹುದು. ರಾತ್ರಿ ಒಂದು ಹೊತ್ತಿನ ಊಟ ದೊರೆಯಲಿದೆ.

ಸಮೀಕ್ಷೆಯಿಂದ ಬೆಳಕಿಗೆ ಬಂದ ಅಂಶ: ರಾಜ್ಯದ 15 ಜಿಲ್ಲೆಗಳಲ್ಲಿ ಒಟ್ಟು 964 ಹಳ್ಳಿಗಳಲ್ಲಿ 3387 ಬಿಟ್ಟಿ ಚಾಕ್ರಿ ಮಾಡುವ ಕುಟುಂಬಗಳನ್ನು ಗುರುತಿಸಲಾಗಿದೆ. ಉ.ಕ.ದ ಎಲ್ಲ ಜಿಲ್ಲೆಗಳಲ್ಲಿ 15 ಸಾವಿರ ದಲಿತ ಕುಟುಂಬಗಳು ಈ ವ್ಯವಸ್ಥೆಯಲ್ಲಿ ಸಿಲುಕಿಕೊಂಡಿವೆ. 11 ಸಾವಿರಕ್ಕಿಂತಲೂ ಹೆಚ್ಚಿನ ಕುಟುಂಬಗಳು ಈಗಲೂ ವಿಶೇಷ ಸಂದರ್ಭದಲ್ಲಿ ಬಿಟ್ಟಿ ಚಾಕ್ರಿ ಮಾಡುತ್ತಿದ್ದಾರೆ.

ಬೀದರ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ (682 ಮಂದಿ) ಬಿಟ್ಟಿ ಚಾಕ್ರಿ ಮಾಡುವವರಿದ್ದಾರೆ. ದಾವಣಗೆರೆಯಲ್ಲಿ ಅತಿ ಕಡಿಮೆ (39 ಮಂದಿ) ಸಂಖ್ಯೆಯಲ್ಲಿದ್ದಾರೆ. ಬೆಳಗಾವಿಯಲ್ಲಿ 424, ಹಾವೇರಿಯಲ್ಲಿ 409, ಬಾಗಲಕೋಟೆಯಲ್ಲಿ 388, ಧಾರವಾಡದಲ್ಲಿ 314,ಗದಗದಲ್ಲಿ 241, ಚಿತ್ರದುರ್ಗದಲ್ಲಿ 164, ಕಲಬುರಗಿಯಲ್ಲಿ 155,ರಾಯಚೂರಿನಲ್ಲಿ 117 ಮಂದಿ ಬಿಟ್ಟಿ ಚಾಕ್ರಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಬೇಡಿಕೆಗಳು: ಸಮಾಜ ಕಲ್ಯಾಣ, ಕಾರ್ಮಿಕ ಹಾಗೂ ಗ್ರಾಮೀಣಾಭಿವೃದ್ಧಿ  ಮತ್ತು ಪಂಚಾಯತ್‌ ರಾಜ್‌ ಇಲಾಖೆ ಬಿಟ್ಟಿ ಚಾಕ್ರಿ ಬಗ್ಗೆ ಸೂಕ್ತ ನಿಲುವು ತಾಳಿ, ಇದಕ್ಕಾಗಿ ಕ್ರಿಯಾಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕು. ಇದನ್ನು ಜೀತಪದಟಛಿತಿ ರದಟಛಿತಿ ಕಾನೂನಿನಡಿ ಪರಿಗಣಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ಸಮಾಜ ಕಲ್ಯಾಣ ಇಲಾಖೆ ಬಿಟ್ಟಿ ಚಾಕ್ರಿ ಮಾಡುವವರಿಗಾಗಿ ಪ್ರತ್ಯೇಕ ಯೋಜನೆ ರೂಪಿಸಬೇಕು.

ಬಿಟ್ಟಿ ಚಾಕ್ರಿ ಮಾಡುವವರಿಗೆ 5 ಎಕರೆ ಕೃಷಿ ಭೂಮಿಯನ್ನು ನೀಡಿ, ಅಗತ್ಯ ಪರಿಕರಗಳನ್ನು ಒದಗಿಸಬೇಕು. ಸ್ವ ಉದ್ಯೋಗ ನೆರವು ನೀಡಬೇಕು. ಕುಟುಂಬದ ಎಲ್ಲ ವಯಸ್ಕರರಿಗೆ ಎನ್‌ಆರ್‌ಇಜಿಎ
ಅಡಿ 200 ದಿನ ಉದ್ಯೋಗ ನೀಡಬೇಕು. ಪ್ರತಿ ಕುಟುಂಬಕ್ಕೆ ಸಮಾನ ಧಾನಕರ ವಸತಿ ನಿರ್ಮಾಣಕ್ಕೆ ಸಹಾಯ ಮಾಡಬೇಕು. ಈ ಸಮು ದಾಯದ ಮಕ್ಕಳಿಗೆ ಕೇಂದ್ರ ಅಥವಾ ರಾಜ್ಯ ಸರ್ಕಾರದ ವಸತಿ
ಶಾಲೆಗಳಲ್ಲಿ ಉತ್ತಮ ಶಿಕ್ಷಣ ನೀಡಬೇಕು. ಅನಕ್ಷರಸ್ಥರಿಗೆ ವಯಸ್ಕರ ಶಿಕ್ಷಣ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಬಿಟ್ಟಿ ಚಾಕ್ರಿ ವ್ಯವಸ್ಥೆಯಲ್ಲಿರುವ ಸಂತ್ರಸ್ತರು ಬೇಡಿಕೆಗಳನ್ನಿಟ್ಟರು.

ಕಲ್ಯಾಣ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಬಿಟ್ಟಿ ಚಾಕ್ರಿ ಪದ್ಧತಿಯನ್ನು ವಿಮುಕ್ತಿಗೊಳಿಸಲು ಕಾನೂನಿನ ಅಗತ್ಯವಿದ್ದರೆ ಅದನ್ನೂ ರೂಪಿಸಲಾಗುವುದು.
● ಎಲ್‌.ಕೆ.ಅತೀಕ್‌, ಗ್ರಾಮೀಣಾಭಿವೃದ್ಧಿ , ಪಂಚಾಯತ್‌ ರಾಜ್‌ ಇಲಾಖೆ ಪ್ರಧಾನ ಕಾರ್ಯದರ್ಶಿ

ಬೆಳಗಾವಿಯ ಜಾನುಕೊಪ್ಪ ಎಂಬ ಗ್ರಾಮದಿಂದ ಬಿಟ್ಟಿ ಚಾಕ್ರಿ ಮಾಡುವ ವ್ಯಕ್ತಿಯನ್ನು ಅದರಿಂದ ಹೊರ ತರಲು ಸಾಧ್ಯವಾಗಿಲ್ಲ. ಆ ಊರಿನಲ್ಲಿ ಬಹುತೇಕ ಮಾಜಿ ಶಾಸಕರ ಮನೆಯಲ್ಲಿ, ಕಾಂಗ್ರೆಸ್‌ ಹಾಗೂ ಬಿಜೆಪಿ ಮುಖಂಡರ ಮನೆಗಳಲ್ಲಿ ಬಿಟ್ಟಿ ಚಾಕ್ರಿ ಮಾಡುತ್ತಿದ್ದಾರೆ. ಇದಕ್ಕೆ ಅಲ್ಲಿನ ರಾಜಕಾರಣಿಗಹ್ಯಾರೂ ಆಕ್ಷೇಪ ಎತ್ತಿಲ್ಲ ಎಂಬುದು ದುರದೃಷ್ಟಕರ.
● ನಾಗಪ್ಪ ಮಾದಿಗ, ಬಿಟ್ಟಿ ಚಾಕ್ರಿ ವ್ಯವಸ್ಥೆಗೆ ಒಳಗಾದವರು

ಟಾಪ್ ನ್ಯೂಸ್

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್‌

Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.