ಸಯ್ಯದ್‌ ಮುಷ್ತಾಕ್‌ ಅಲಿ ಟಿ20: ಸತತ 5ನೇ ಜಯ; ಕರ್ನಾಟಕ ಅಜೇಯ


Team Udayavani, Feb 28, 2019, 12:30 AM IST

syed-mushtaq-ali-t20-karnataka-win.jpg

ಕಟಕ್‌: ದಿಟ್ಟ ಹೋರಾಟ ನೀಡಿದ ಛತ್ತೀಸ್‌ಗಢವನ್ನು 4 ವಿಕೆಟ್‌ಗಳಿಂದ ಮಣಿಸಿದ ಕರ್ನಾಟಕ, “ಸಯ್ಯದ್‌ ಮುಷ್ತಾಕ್‌ ಅಲಿ ಟಿ20′ ಕ್ರಿಕೆಟ್‌ ಸರಣಿಯಲ್ಲಿ ಸತತ 5 ಗೆಲುವುಗಳೊಂದಿಗೆ ಅಜೇಯ ಓಟ ಬೆಳೆಸಿದೆ. “ಡಿ’ ವಿಭಾಗದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

ಬುಧವಾರ ಕಟಕ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ಛತ್ತೀಸ್‌ಗಢ 3 ವಿಕೆಟಿಗೆ 171 ರನ್‌ ಪೇರಿಸಿದರೆ, ಕರ್ನಾಟಕ 19.2 ಓವರ್‌ಗಳಲ್ಲಿ 6 ವಿಕೆಟಿಗೆ 175 ರನ್‌ ಬಾರಿಸಿ ಜಯ ಸಾಧಿಸಿತು. ಕರ್ನಾಟಕವಿನ್ನು ಒಡಿಶಾ (ಫೆ. 28) ಮತ್ತು ಹರ್ಯಾಣ (ಮಾ. 2) ವಿರುದ್ಧ ಕೊನೆಯ 2 ಲೀಗ್‌ ಪಂದ್ಯಗಳನ್ನು ಆಡಲಿದೆ.

ವಿನಯ್‌, ಸುಚಿತ್‌, ಮಿಥುನ್‌ ಸಾಹಸ
ಕೊನೆಯ 5 ಓವರ್‌ಗಳಲ್ಲಿ ಸಿಡಿಲಬ್ಬರ ಬ್ಯಾಟಿಂಗ್‌ ಪ್ರದರ್ಶಿಸುವ ಮೂಲಕ ಕರ್ನಾಟಕ ಗೆಲುವಿನ ಸಂಭ್ರಮ ಆಚರಿಸಿತು. ಮೊದಲ 15 ಓವರ್‌ಗಳಲ್ಲಿ 5 ವಿಕೆಟಿಗೆ 109 ರನ್‌ ಗಳಿಸಿ ಸೋಲಿನ ಅಂಚಿನಲ್ಲಿದ್ದ ಕರ್ನಾಟಕ, ಬಳಿಕ ಜಗದೀಶ್‌ ಸುಚಿತ್‌, ವಿನಯ್‌ ಕುಮಾರ್‌ ಮತ್ತು ಅಭಿಮನ್ಯು ಮಿಥುನ್‌ ಅವರ ಆಕ್ರಮಣಕಾರಿ ಬ್ಯಾಟಿಂಗ್‌ ಮೂಲಕ ಛತ್ತೀಸ್‌ಗಢದ ಗೆಲುವಿನ ಕನಸನ್ನು ಛಿದ್ರಗೊಳಿಸಿತು. ಕೊನೆಯ 4.2 ಓವರ್‌ಗಳಲ್ಲಿ ಈ ಮೂವರು 66 ರನ್‌ ಪೇರಿಸಿ ಅಮೋಘ ಗೆಲುವನ್ನು ತಂದಿತ್ತರು.

ಅತ್ಯಂತ ಆಕ್ರಮಣಕಾರಿಯಾಗಿ ಬ್ಯಾಟ್‌ ಬೀಸಿದ ವಿನಯ್‌ ಕುಮಾರ್‌ 13 ಎಸೆತಗಳಿಂದ ಅಜೇಯ 34 ರನ್‌ (4 ಸಿಕ್ಸರ್‌), ಜಗದೀಶ್‌ ಸುಚಿತ್‌ 24 ಎಸೆತಗಳಿಂದ 34 ರನ್‌ (3 ಬೌಂಡರಿ, 1 ಸಿಕ್ಸರ್‌) ಮತ್ತು ಮಿಥುನ್‌ 7 ಎಸೆತಗಳಿಂದ ಅಜೇಯ 18 ರನ್‌ (1 ಬೌಂಡರಿ, 2 ಸಿಕ್ಸರ್‌) ಸಿಡಿಸಿ ತಂಡವನ್ನು ದಡ ಮುಟ್ಟಿಸಿದರು.ಅಗ್ರ ಕ್ರಮಾಂಕದ ಬ್ಯಾಟಿಂಗ್‌ನಲ್ಲಿ ರೋಹನ್‌ ಕದಮ್‌ 16, ಮಾಯಾಂಕ್‌ ಅಗರ್ವಾಲ್‌ 21 ಮತ್ತು ಕರುಣ್‌ ನಾಯರ್‌ 35 ರನ್‌ ಮಾಡಿದರು. ಆದರೆ ನಾಯಕ ಮನೀಷ್‌ ಪಾಂಡೆ (9), ಶರತ್‌ ಬಿ.ಆರ್‌. (0) ವಿಫ‌ಲರಾದರು.

ಹರ್‌ಪ್ರೀತ್‌ ಕಪ್ತಾನನ ಆಟ
ಛತ್ತೀಸ್‌ಗಢ ಪರ ನಾಯಕ ಹರ್‌ಪ್ರೀತ್‌ ಸಿಂಗ್‌ 79 ರನ್‌ (56 ಎಸೆತ, 8 ಬೌಂಡರಿ, 3 ಸಿಕ್ಸರ್‌), ಅಮನ್‌ದೀಪ್‌ ಖಾರೆ ಔಟಾಗದೆ 45 ರನ್‌ (31 ಎಸೆತ, 4 ಬೌಂಡರಿ, 2 ಸಿಕ್ಸರ್‌) ಹೊಡೆದು ತಂಡದ ಸವಾಲಿನ ಮೊತ್ತಕ್ಕೆ ಕಾರಣರಾದರು. ಆರಂಭಕಾರ ರಿಷಭ್‌ ತಿವಾರಿ ಕೊಡುಗೆ 33 ರನ್‌.

ಛತ್ತೀಸ್‌ಗಢದ ಬ್ಯಾಟಿಂಗ್‌ ಅಬ್ಬರದ ವೇಳೆ ಕರ್ನಾಟಕದ ಬೌಲಿಂಗ್‌ ಸಂಪೂರ್ಣ ದಿಕ್ಕು ತಪ್ಪಿತು.

ಸಂಕ್ಷಿಪ್ತ ಸ್ಕೋರ್‌: ಛತ್ತೀಸ್‌ಗಢ-3 ವಿಕೆಟಿಗೆ 171 (ಹರ್‌ಪ್ರೀತ್‌ ಔಟಾಗದೆ 79, ಅಮನ್‌ದೀಪ್‌ ಔಟಾಗದೆ 45, ರಿಷಭ್‌ 33, ಶ್ರೇಯಸ್‌ ಗೋಪಾಲ್‌ 19ಕ್ಕೆ 1, ಕೌಶಿಕ್‌ 36ಕ್ಕೆ 1, ಮಿಥುನ್‌ 46ಕ್ಕೆ 1). ಕರ್ನಾಟಕ-19.2 ಓವರ್‌ಗಳಲ್ಲಿ 6 ವಿಕೆಟಿಗೆ 175 (ನಾಯರ್‌ 35, ಸುಚಿತ್‌ 34, ವಿನಯ್‌ ಔಟಾಗದೆ 34, ಮೌರ್ಯ 13ಕ್ಕೆ 2, ಶುಭಂ 35ಕ್ಕೆ 2, ವಿಶಾಲ್‌ 40ಕ್ಕೆ 2).

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

badminton

Uber Cup ಬ್ಯಾಡ್ಮಿಂಟನ್‌: ಕೆನಡಾವನ್ನು ಮಣಿಸಿದ ಭಾರತ

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

1-wewweq

IPL; ಬೌಲರ್‌ಗಳನ್ನು ಕಾಪಾಡಿ: ಅಶ್ವಿ‌ನ್‌ ವಿನಂತಿ!

1-eqwqewq

IPL;ಲಕ್ನೋ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 7 ವಿಕೆಟ್ ಗಳ ಜಯ

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.