2 ಶತಮಾನ ಹಿಂದೆಯೇ ಬಾಲಾಕೋಟ್ನಲ್ಲಿತ್ತು ಜಿಹಾದ್ ಪಾತಕತನ
Team Udayavani, Feb 28, 2019, 12:30 AM IST
ಪಾಕಿಸ್ತಾನದ ಬಾಲಕೋಟ್ನಲ್ಲಿ ಉಗ್ರ ಚಟುವಟಿಕೆ ಈಗ ಆರಂಭವಾಗಿದ್ದಲ್ಲ. ಬದಲಿಗೆ ಇದು ಶುರುವಾಗಿದ್ದು 1800ರಲ್ಲಿ! ಉತ್ತರ ಪ್ರದೇಶದ ರಾಯ್ ಬರೇಲಿ ಮೂಲದ ಸೈಯದ್ ಅಹಮದ್ ಬರೇಲ್ವಿ ಬಾಲಕೋಟ್ನಲ್ಲಿ ಉಗ್ರರ ನೆಲೆಯನ್ನು ಸ್ಥಾಪಿಸಿದ್ದ. ಈ ಭಾಗದಲ್ಲಿ ಇಸ್ಲಾಂ ಆಡಳಿತ ನಡೆಯಬೇಕು ಎಂದು ಈತ ಭಾವಿಸಿದ್ದ. ಭಾರತದಲ್ಲಿ ಮರಾಠರು, ಸಿಖ್ಭರು ಮತ್ತು ಜಾಠರ ಪ್ರಾಬಲ್ಯದ ಮಧ್ಯೆ ಮುಸ್ಲಿಮರ ಪ್ರಾಬಲ್ಯ ಕಡಿಮೆಯಾಗುತ್ತಿದೆ ಎಂದು ಚಿಂತೆಗೀಡಾಗಿದ್ದ. ಇದೇ ಕಾರಣಕ್ಕೆ ಈತ ಈಗಿನ ಖೈಬರ್ ಪಖು¤ಂಖಾ¤$Ìಗೆ ಆತ ಪ್ರಯಾಣಿಸಿದ್ದ. ಈ ಭಾಗದಲ್ಲಿ ಅದಾಗಲೇ ಮಹಾರಾಜರ ಆಡಳಿತವಿತ್ತು. ಅಲ್ಲಿನ ಮುಸ್ಲಿಮರು ರಾಜನ ಬಗ್ಗೆ ಅಸಮಾಧಾನವನ್ನು ಹೊಂದಿದ್ದರಿಂದ, ಸುಮಾರು 2500 ಯೋಧರನ್ನು ಈತ ಕರೆದುಕೊಂಡು ಅಲ್ಲಿಗೆ ಹೊರಟಿದ್ದ.
ಹಾಗೆಂದು ಆತ ನೇರವಾಗಿ ಬಾಲಕೋಟ್ಗೆ ದಾಳಿ ಮಾಡಿರಲಿಲ್ಲ. ಬದಲಿಗೆ ಸುಮಾರು ಐದು ವರ್ಷಗಳನ್ನು ತೆಗೆದುಕೊಂಡು ಆತ ಅಲ್ಲಿಗೆ 1831ರ ವೇಳೆಗೆ ತೆರಳಿದ್ದ. ಆದರೆ ಆಗ ಕಾಶ್ಮೀರದ ಗವರ್ನರ್ ಆಗಿದ್ದ ಹರಿ ಸಿಂಗ್, ಬಾಲಕೋಟ್ಗೆ ಬಂದಿದ್ದ ಬರೇಲ್ವಿಯ ವಿರುದ್ಧ ಹೋರಾಟ ನಡೆಸಿದ್ದ. ಈತನ ಕೋಟೆ ಸುತ್ತಲೂ ಭತ್ತದ ಗದ್ದೆಗಳಿದ್ದವು. ಸಿಖ್ ಸೇನೆ ಆಗಮಿಸುತ್ತಿದ್ದಂತೆಯೇ ಬರೇಲ್ವಿ ಈ ಗದ್ದೆಗಳಿಗೆ ಸುತ್ತಲಿನ ಕೆರೆಗಳಿಂದ ನೀರು ಬಿಟ್ಟು, ಸೇನೆ ಕೋಟೆಗೆ ತಲುಪಲು ಸಾಧ್ಯವಾಗದಿರಲಿ ಅಂತ ಪ್ರಯತ್ನಿಸಿದ್ದ. ಆದರೆ ಬರೇಲ್ವಿಯ ಈ ಪ್ರಯತ್ನ ಯಶಸ್ವಿಯಾಗಲಿಲ್ಲ. ಹರಿ ಸಿಂಗ್ಗೆ ಶೇರ್ ಸಿಂಗ್ ಎಂಬ ಕಮಾಂಡರ್ ಇದ್ದ. ಈತನ ನೇತೃತ್ವದಲ್ಲಿ ನಡೆದ ಹೋರಾಟದಲ್ಲಿ ಬರೇಲ್ವಿಯ ಸುಮಾರು 1300 ಯೋಧರು ಸಾವನ್ನಪ್ಪಿದ್ದರು. ಬರೇಲ್ವಿ ಮತ್ತು ಆತನ ಸಂಬಂಧಿ ಶಾ ಇಸ್ಮಾಯಿಲ್ ಕೂಡ ಸಾವನ್ನಪ್ಪಿದ್ದರು. ಈತ ತನ್ನನ್ನು ಧಾರ್ಮಿಕ ಮುಖಂಡ ಎಂದು ಕರೆದುಕೊಂಡಿದ್ದ. ಈಗಿನ ಭಯೋತ್ಪಾದಕರು ಇಂದಿಗೂ ಈತನ ಬೋಧನೆಗಳನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಈಗ ಅಲ್ಲಿ ಲಷ್ಕರ್- ಎ-ತೊಯ್ಬಾ ಹಾಗೂ ಇತರ ಉಗ್ರರ ನೆಲೆಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ