16 ಸಾವಯವ ಕ್ಲಸ್ಟರ್  ಸ್ಥಾಪನೆ 


Team Udayavani, Mar 3, 2019, 11:29 AM IST

3-march-19.jpg

ಶಿರಸಿ: ರೈತರು ಸಾವಯವ ಪದ್ಧತಿಯಲ್ಲಿ ಬೆಳೆದ ತರಕಾರಿ, ಆಹಾರ ಧಾನ್ಯಗಳಿಗೆ ನಗರದ ಕದಂಬ ಸಂಸ್ಥೆ ಮಾರುಕಟ್ಟೆ ಒದಗಿಸಿದೆ. ರೈತರಿಂದ ಗ್ರಾಹಕರಿಗೆ ನೇರವಾಗಿ ತಲುಪಿಸುವ ಕಲ್ಪನೆಯೊಂದಿಗೆ ಸಂಸ್ಥೆ ಹಮ್ಮಿಕೊಂಡ ಸಾವಯವ ಸಂತೆಗೆ ಚಾಲನೆ ನೀಡಲಾಯಿತು.

ಸಸ್ಯ ಸಂತೆ ಉದ್ಘಾಟಿಸಿದ ಕೃಷಿ ಇಲಾಖೆ ಉಪನಿರ್ದೇಶಕ ನಟರಾಜ, ರೈತರು ಬೆಳೆದ ಬೆಳೆಗೆ ಯೋಗ್ಯ ಬೆಲೆ ಇಲ್ಲ. ಗ್ರಾಹಕರು ಶುದ್ಧ ಆಹಾರೋತ್ಪನ್ನಗಳು ಲಭ್ಯವಾಗುತ್ತಿಲ್ಲ ಎಂಬ ಅಳಲಿದೆ. ಸಾವಯವ ಮಾದರಿಯಲ್ಲಿ ರೈತರಿಗೆ ತರಕಾರಿ ಮತ್ತು ಆಹಾರೋತ್ಪನ್ನಗಳನ್ನು ಬೆಳೆಯಲು ನಾವು ಉತ್ತೇಜಿಸುವ ಜೊತೆಗೆ ಗ್ರಾಹಕರಿಗೂ ನೇರವಾಗಿ ರೈತರಿಂದ ಖರೀದಿಗೆ ಅವಕಾಶ ಮಾಡಿಕೊಡಬೇಕು.

ಸಾವಯವ ವಿಧಾನದಲ್ಲಿ ಬೆಳೆದ ಕೃಷಿ ಉತ್ಪನ್ನಗಳಿಗೆ ಸದಾ ಬೇಡಿಕೆ ಇದೆ. ಕದಂಬ ಮಾರ್ಕೆಟಿಂಗ್‌ ಮತ್ತು ಕೃಷಿ ಇಲಾಖೆ ಸಹಯೋಗದಲ್ಲಿ ಜಿಲ್ಲೆಯಲ್ಲಿ 16 ಕಡೆಗಳಲ್ಲಿ ಸಾವಯವ ಕ್ಲಸ್ಟರ್‌ಗಳ ಮೂಲಕ ರೈತರಿಗೆ ಪ್ರೋತ್ಸಾಹಿಸುತ್ತಿದ್ದೇವೆ. ಜೇನು, ತರಕಾರಿ, ಜೊಯಿಡಾ ತಾಲೂಕಿನಲ್ಲಿ ಅಕ್ಕಿ, ಭಟ್ಕಳ ತಾಲೂಕಿನ ಕೆಲ ಹಳ್ಳಿಗಳಲ್ಲಿ ಸಾವಯವ ಕ್ಲಸ್ಟರ್‌ ಮೂಲಕ ತೆಂಗಿನ ಎಣ್ಣೆ ಉತ್ಪಾದಿಸಿ ಗ್ರಾಹಕರಿಗೆ ತಲುಪಿಸುತ್ತಿದ್ದೇವೆ ಎಂದರು.

ಕದಂಬ ಮಾರ್ಕೆಟಿಂಗ್‌ ವ್ಯವಸ್ಥಾಪಕ ವಿಶ್ವೇಶ್ವರ ಭಟ್‌, ಪ್ರತಿ 15 ದಿನಗಳಿಗೊಮ್ಮೆ ಸಂಸ್ಥೆಯ ಆವರಣದಲ್ಲಿ ಸಾವಯವ ಸಂತೆ ಹಮ್ಮಿಕೊಳ್ಳಲು ನಿರ್ಧರಿಸಿದ್ದೇವೆ. ಇದೇ ರೀತಿ ಮಾರ್ಚ್‌ 2ರಂದು ಅಪ್ಪೆಮಿಡಿ ಮೇಳ, ಏಪ್ರಿಲ್‌ ತಿಂಗಳಿನಲ್ಲಿ ಕೋಕಂ ಮೇಳ ಮತ್ತು ಜೂನ್‌ ತಿಂಗಳ ಮೊದಲ ವಾರದಲ್ಲಿ ಹಲಸಿನ ಮೇಳ ಆಯೋಜಿಸಲಾಗುತ್ತದೆ. ಸಾವಯವ ಪದ್ಧತಿಯಲ್ಲಿ ಬೆಳೆದ ತರಕಾರಿ ಮತ್ತು ವಿವಿಧ ಕೃಷಿ ಉತ್ಪನ್ನಗಳು ಸಂತೆಯಲ್ಲಿ ಯೋಗ್ಯ ಬೆಲೆಯಲ್ಲಿ ಲಭ್ಯವಿದ್ದು. ಅಂಕೋಲಾದಿಂದ ರೈತರು ತಂದ ಕಲ್ಲಂಗಡಿ ಹಣ್ಣುಗಳು, ಸುವರ್ಣಗಡ್ಡೆ, ಗೋಕರ್ಣದ ರೈತರು ತಂದ ಮೆಣಸು, ಗೆಣಸು, ತೊಂಡೆಕಾಯಿ ಹಾಗೂ ಸೊಪ್ಪು ಅಧಿಕ ಸಂಖ್ಯೆಯಲ್ಲಿ ಇದೆ ಎಂದರು. ಕೃಷಿ ಇಲಾಖೆ ಪ್ರಮುಖರಾದ ರಶ್ಮಿ ಶಹಾಪುರಮಠ, ಪ್ರಮುಖರಾದ ಕೆ.ವಿ. ಕೊರ್ಸೆ ಮತ್ತು ಇತರರಿದ್ದರು.

ಟಾಪ್ ನ್ಯೂಸ್

Udupi ಸಾಲ ಕೊಡದ ಅಂಗಡಿ ಮಾಲಕನಿಗೆ ಹಲ್ಲೆ

Udupi ಸಾಲ ಕೊಡದ ಅಂಗಡಿ ಮಾಲಕನಿಗೆ ಹಲ್ಲೆ

Uppinangady: ಚಿನ್ನಾಭರಣ ದರೋಡೆ, ಬೆದರಿಕೆ

Uppinangady: ಚಿನ್ನಾಭರಣ ದರೋಡೆ, ಬೆದರಿಕೆ

1-wewwqe

IPL;ಮುಂಬೈ ವಿರುದ್ಧ ಗೆದ್ದು ಪ್ಲೇ ಆಫ್ ಪ್ರವೇಶಿಸಿದ ಕೆಕೆಆರ್

ಪಿಜಿ ಸಿಇಟಿ ಪಠ್ಯ ಪ್ರಕಟ: ಮುಂದಿನ ತಿಂಗಳು ಪರೀಕ್ಷೆ

ಪಿಜಿ ಸಿಇಟಿ ಪಠ್ಯ ಪ್ರಕಟ: ಮುಂದಿನ ತಿಂಗಳು ಪರೀಕ್ಷೆ

ವಿಚಾರಣ ನೋಟಿಸ್‌ ಸ್ವೀಕರಿಸಲು ಬಿವೈವಿ, ಅಮಿತ್‌ ಮಾಳವೀಯ ನಿರಾಕರಣೆ

ವಿಚಾರಣ ನೋಟಿಸ್‌ ಸ್ವೀಕರಿಸಲು ಬಿವೈವಿ, ಅಮಿತ್‌ ಮಾಳವೀಯ ನಿರಾಕರಣೆ

ಯಾರನ್ನೂ ರಾಜಕೀಯವಾಗಿ ಸಮಾಧಿ ಮಾಡಲು ಸಾಧ್ಯವಿಲ್ಲ: ಸಿದ್ದರಾಮಯ್ಯ 

ಯಾರನ್ನೂ ರಾಜಕೀಯವಾಗಿ ಸಮಾಧಿ ಮಾಡಲು ಸಾಧ್ಯವಿಲ್ಲ: ಸಿದ್ದರಾಮಯ್ಯ 

1-wqeeqw

England ಅನುಭವಿ ವೇಗಿ ಆ್ಯಂಡರ್ಸನ್‌ ವಿದಾಯ ಘೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-sirsi

Sirsi: ರಾಜ್ಯ ಮಟ್ಟದ ಕೃಷಿ ಸಂಬಂಧಿತ ಪ್ರಶಸ್ತಿ ಪ್ರಕಟ

Road Mishap ದಾಂಡೇಲಿ; ಕಾರು-ದ್ವಿಚಕ್ರ ವಾಹನ ಅಪಘಾತ: ಸವಾರ ಗಂಭೀರ

Road Mishap ದಾಂಡೇಲಿ; ಕಾರು-ದ್ವಿಚಕ್ರ ವಾಹನ ಅಪಘಾತ: ಸವಾರ ಗಂಭೀರ

Sirsi: ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಮುಂದಾದ ಜೀವಜಲ ಕಾರ್ಯಪಡೆ

Sirsi: ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಮುಂದಾದ ಜೀವಜಲ ಕಾರ್ಯಪಡೆ

Dandeli: ಮದುವೆಗೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಕಾರು ಪಲ್ಟಿ… 8 ಮಂದಿಗೆ ಗಾಯ

Dandeli: ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಕಾರು ಪಲ್ಟಿ.. ಮಕ್ಕಳು ಸೇರಿ 8 ಮಂದಿಗೆ ಗಾಯ

1-ewewqe

Gokarana; ಮಹಾಬಲೇಶ್ವರ ಗರ್ಭಗುಡಿಯ ನಂದಿ ಪೂಜೆ ವಿವಾದ: ಪ್ರತಿಭಟನೆ!

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Udupi ಸಾಲ ಕೊಡದ ಅಂಗಡಿ ಮಾಲಕನಿಗೆ ಹಲ್ಲೆ

Udupi ಸಾಲ ಕೊಡದ ಅಂಗಡಿ ಮಾಲಕನಿಗೆ ಹಲ್ಲೆ

Uppinangady: ಚಿನ್ನಾಭರಣ ದರೋಡೆ, ಬೆದರಿಕೆ

Uppinangady: ಚಿನ್ನಾಭರಣ ದರೋಡೆ, ಬೆದರಿಕೆ

1-wewwqe

IPL;ಮುಂಬೈ ವಿರುದ್ಧ ಗೆದ್ದು ಪ್ಲೇ ಆಫ್ ಪ್ರವೇಶಿಸಿದ ಕೆಕೆಆರ್

ಪಿಜಿ ಸಿಇಟಿ ಪಠ್ಯ ಪ್ರಕಟ: ಮುಂದಿನ ತಿಂಗಳು ಪರೀಕ್ಷೆ

ಪಿಜಿ ಸಿಇಟಿ ಪಠ್ಯ ಪ್ರಕಟ: ಮುಂದಿನ ತಿಂಗಳು ಪರೀಕ್ಷೆ

ವಿಚಾರಣ ನೋಟಿಸ್‌ ಸ್ವೀಕರಿಸಲು ಬಿವೈವಿ, ಅಮಿತ್‌ ಮಾಳವೀಯ ನಿರಾಕರಣೆ

ವಿಚಾರಣ ನೋಟಿಸ್‌ ಸ್ವೀಕರಿಸಲು ಬಿವೈವಿ, ಅಮಿತ್‌ ಮಾಳವೀಯ ನಿರಾಕರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.