ಜಲವಳ್ಳಿ ವೆಂಕಟೇಶರಾವ್ ಇನ್ನಿಲ್ಲ
Team Udayavani, Mar 6, 2019, 12:30 AM IST
ಶಿರಸಿ/ಹೊನ್ನಾವರ: ಯಕ್ಷರಂಗದ ರಾಜ, ಬಡಗುತಿಟ್ಟಿನ ಮೇರು ಕಲಾವಿದ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ
ಜಲವಳ್ಳಿ ವೆಂಕಟೇಶರಾವ್ (86) ಶಿರಸಿ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಸಂಜೆ ನಿಧನರಾದರು.
ಯಕ್ಷಗಾನದಲ್ಲಿ ವಿಶಿಷ್ಟ ಛಾಪು ಮೂಡಿಸಿದ, ಮಾತುಗಾರಿಕೆ, ಹಾವ ಭಾವದಿಂದಲೇ ಪ್ರೇಕ್ಷಕರ ಮನ ಗೆದ್ದು ಹೊಸ ಪರಂಪರೆಗೆ ಕಾರಣರಾಗಿದ್ದ ವೆಂಕಟೇಶರಾವ್ 6 ದಶಕಗಳ ಕಾಲ ಸಕ್ರಿಯವಾಗಿ ರಂಗದಲ್ಲಿ ಮಿಂಚಿದವರು. ಸ್ತ್ರೀ,
ಪುರುಷ ವೇಷ, ಪುಂಡು ವೇಷ, ನಾಯಕ, ಪ್ರತಿ ನಾಯಕ ಪಾತ್ರಗಳನ್ನು ಕಟ್ಟಿಕೊಟ್ಟ ಅಪರೂಪದ ಕಲಾವಿದರಾಗಿದ್ದರು.
ಹೊನ್ನಾವರ ತಾಲೂಕಿನ ಜಲವಳ್ಳಿಯಲ್ಲಿ ಬೊಮ್ಮು ಮಡಿವಾಳ ಹಾಗೂ ಶ್ರೀದೇವಿ ಮಡಿವಾಳರ ಮಗನಾಗಿ 1933,
ನ.1ರಂದು ಜನಿಸಿದ್ದ ವೆಂಕಟೇಶರಾವ್ ಅಪ್ಪಟ ಕನ್ನಡದ ಕಲೆಗಾಗಿ ಬದುಕು ಸವೆಸಿದ್ದರು.
ಯಕ್ಷಗಾನ ಕಲಾವಿದರೂ ಆಗಿದ್ದ ಹೈಗುಂದ ಡಾಕ್ಟರ್ ಮಾರ್ಗ ದರ್ಶನದಲ್ಲಿ ಬೆಳೆದು ತಿಮ್ಮಪ್ಪ ನಾಯ್ಕರ ಬಳಿಯೂ ಅಭ್ಯಾಸ ಮಾಡಿದವರು. ಚಿಟ್ಟಾಣಿ ರಾಮಚಂದ್ರ ಹೆಗಡೆ, ಶಂಭು ಹೆಗಡೆ, ದೇವರ ಹೆಗಡೆ, ಮಹಾಬಲ ಹೆಗಡೆ, ಗೋವಿಂದ ನಾಯ್ಕ, ಕೊಂಡದಕುಳಿ ರಾಮ ಹೆಗಡೆ ಸೇರಿ ಹಿರಿಯ ಕಲಾವಿದರ ಒಡನಾಟದಲ್ಲಿ ದ್ದವರು. ಮೃತರು ಮೂವರು ಪುತ್ರರು, ಪುತ್ರಿ, ಪತ್ನಿ ಸೇರಿ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಜಲವಳ್ಳಿಯಲ್ಲಿ ಬುಧವಾರ ಅಂತ್ಯ ಸಂಸ್ಕಾರ ನಡೆಸಲಾಗುತ್ತದೆ ಎಂದು ಪುತ್ರ ವಿದ್ಯಾಧರ ಜಲವಳ್ಳಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!