ಇಷ್ಟಲಿಂಗವು ಜ್ಯೋತಿಯ ಕುರುಹು: ಅನ್ನಪೂರ್ಣ
Team Udayavani, Mar 6, 2019, 7:09 AM IST
ಬೀದರ: ಇಷ್ಟಲಿಂಗವು ಜಾತಿಯ ಕುರುಹಲ್ಲ. ಜ್ಯೋತಿಯ ಕುರುಹು. ನಿರ್ಗುಣ ನಿರಾಕಾರ ಪರಮಾತ್ಮನ ಸಾಕಾರ ಕುರುಹು ಎಂದು ಲಿಂಗಾಯತ ಮಠದ ಅಕ್ಕ ಅನ್ನಪೂರ್ಣ ಹೇಳಿದರು. ನಗರದ ಶರಣ ಉದ್ಯಾನದಲ್ಲಿ ಮಹಾಶಿವರಾತ್ರಿ ನಿಮಿತ್ತ ನಡೆದ ಸಾಮೂಹಿಕ ಇಷ್ಟಲಿಂಗ ಯೋಗ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ನೆನಪಿನ ಶಕ್ತಿ ಹೆಚ್ಚಿಸುವ, ಆರೋಗ್ಯ ವೃದ್ಧಿಸುವ ಮತ್ತು ಮಾನಸಿಕ ಒತ್ತಡ ನಿವಾರಿಸಿ ನೆಮ್ಮದಿ ನೀಡುವ ಸಾಮರ್ಥ್ಯ ಇಷ್ಟಲಿಂಗ ಯೋಗದಲ್ಲಿದೆ. ಉತ್ಸಾಹ, ನೆಮ್ಮದಿಯ ಜೀವನಕ್ಕೆ ಪ್ರತಿಯೊಬ್ಬರು ಇಷ್ಟಲಿಂಗ ಯೋಗವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು.
ಗಡಿಯಾರ ಯಾವ ಧರ್ಮದವರು ಕಂಡು ಹಿಡಿದರು ಎಂಬುದು ಮುಖ್ಯವಲ್ಲ. ಸಮಯ ತಿಳಿಯಬೇಕೆನ್ನುವವರು ಗಡಿಯಾರ ಧರಿಸಬೇಕು. ಹಾಗೆಯೇ ಆತ್ಮೋದ್ಧಾರ ಬಯಸುವವರು ಯಾವ ಜಾತಿ-ಧರ್ಮದವರೆ ಆಗಿರಲಿ ಇಷ್ಟಲಿಂಗ ಯೋಗದ ಮೊರೆ ಹೊಗಬೇಕು ಎಂದರು.
ಇಷ್ಟಲಿಂಗ ಧರಿಸಿಕೊಂಡು ದೇಹವನ್ನೇ ದೇವಾಲಯ ಮಾಡಿಕೊಳ್ಳುವ ವಿಜ್ಞಾನ ಪೂಜೆಯಲ್ಲಿ ಅಡಗಿದೆ. ಅಂತರಂಗ ವಿಕಾಸಕ್ಕೆ ವೈಜ್ಞಾನಿಕವಾಗಿ ಪೂರಕವಾಗಿರುವ ಇಷ್ಟಲಿಂಗ ಬಸವಣ್ಣನವರ ವಿಶಿಷ್ಟ ಕೊಡುಗೆಯಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ನಡೆಯಿತು. ಡಾ| ಗಂಗಾಂಬಿಕೆ ಹಾಗೂ ರಮೇಶ ಮಠಪತಿ ಪ್ರಾಣಲಿಂಗ ಪೂಜಾವಿಧಿ ತಿಳಿಸಿದರು. ಶಿವರಾಜ ಮದಕಟ್ಟಿ ಧ್ವಜಾರೋಹಣ ನೇರವರಿಸಿದರು. ಸಿದ್ರಾಮಪ್ಪ ಕಪಲಾಪುರೆ, ಚಂದ್ರಶೇಖರ ಹೆಬ್ಟಾಳೆ, ಸಿ.ಎಸ್.ಪಾಟೀಲ, ರಾಚಪ್ಪ ಪಾಟೀಲ, ಅಣವೀರ ಕೊಡಂಬಲ್, ರಾಜಕುಮಾರ ಪಾಟೀಲ, ವಿವೇಕಾನಂದ ಧನ್ನುರ, ಮಲ್ಲಿಕಾರ್ಜುನ ಔರಾದೆ, ವಿಶ್ವನಾಥ ಕಾಜಿ, ಬಸವರಾಜ ಶೇರಿಕಾರ, ಶೋಭಾ ಚಾಂಗಲೇರಾ, ಶಾಂತಾ ಖಂಡ್ರೆ, ಈಶ್ವರಿ ವಡ್ಡೆ, ಶಿವಕುಮಾರ ಪಾಂಚಾಳ, ಮಾಣಿಕಪ್ಪ ಗೋರನಾಳೆ ಹಾಗೂ ಅನೇಕರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
MUST WATCH
ಹೊಸ ಸೇರ್ಪಡೆ
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್