ಬಣ್ಣದಾಟಕ್ಕೆ  ಬಾಗಲಕೋಟೆ ಸಜ್ಜು 


Team Udayavani, Mar 9, 2019, 9:35 AM IST

9-march-12.jpg

ಬಾಗಲಕೋಟೆ: ಮೂರು ದಿನಗಳ ನಿರಂತರ ಬಣ್ಣದಾಟ ಹಾಗೂ 15 ದಿನ ನಿರಂತರ ಹಲಗೆ ನೀನಾದದ ಮೂಲಕ ದೇಶದಲ್ಲೇ ಹೋಳಿ ಆಚರಣೆಗೆ ವಿಶಿಷ್ಟ ಸ್ಥಾನ ಪಡೆದಿರುವ ಬಾಗಲಕೋಟೆ ನಗರ ಮತ್ತೂಂದು ಬಣ್ಣದಾಟಕ್ಕೆ ಸಜ್ಜಾಗುತ್ತಿದೆ.

ಹೋಳಿ ಹಬ್ಬ ಬಂತೆಂದರೆ ಕೆಲವರು ಪ್ರವಾಸದ ನೆಪದಲ್ಲಿ ಊರು ಬಿಟ್ಟರೆ, ಇನ್ನೂ ಕೆಲವರು ಬೇರೆ ಬೇರೆ ನಗರ-ಪಟ್ಟಣಗಳಲ್ಲಿ ಕೆಲಸಕ್ಕಾಗಿ ಹೋದವರು ಮರಳಿ ಬರುತ್ತಾರೆ. ಮೂರು ದಿನಗಳ ಕಾಲ ನಿರಂತರ ಬಣ್ಣದ ಬಂಡಿಗಳಲ್ಲಿ ಬಣ್ಣದಾಟವಾಡಿ ಸಂಭ್ರಮಿಸುತ್ತಾರೆ. ಬಣ್ಣದಾಟ ಹಾಗೂ ಹೋಳಿ ಹಬ್ಬದ ವಿಶಿಷ್ಟ ಆಚರಣೆಯಲ್ಲಿ ಬಾಗಲಕೋಟೆಗೆ ದೇಶದಲ್ಲೇ 2ನೇ ಸ್ಥಾನವಿದೆ.

ಎಲ್ಲೆಲ್ಲೂ ಹಲಗೆ ನಿನಾದ: ಹೋಳಿ ಹಬ್ಬ ಬಂತೆಂದರೆ, ಹಲಗೆಗಳ ನಾದ ಎಲ್ಲೆಡೆ ಕೇಳಿಸುತ್ತದೆ. ಚಿಕ್ಕವರಿಂದ ಹಿಡಿದು, ದೊಡ್ಡವರೂ ಕೂಡ ಇಲ್ಲಿ ಹಲಗೆ ಬಾರಿಸುತ್ತಾರೆ. ಶಿವರಾತ್ರಿ ಅಮಾವಾಸ್ಯೆ ಮರುದಿನದಿಂದಲೇ ಹಲಗೆ ಸಪ್ಪಳ ಜೋರಾಗುತ್ತದೆ. ಮಹಿಳೆಯರು, ಮಕ್ಕಳು, ಪುರುಷರು ಸೇರಿದಂತೆ ಎಲ್ಲರೂ ಹಲಗೆ ಬಾರಿಸಿ ಸಂತಸ ಪಡುತ್ತಾರೆ.

ನಗರದ ಕಿಲ್ಲಾ, ಹಳಪೇಟ, ಹೊಸಪೇಟ, ಜೈನಪೇಟ ಮತ್ತು ವೆಂಕಟಪೇಟ ಮುಂತಾದ ಬಡಾವಣೆಗಳಲ್ಲಿ ಪ್ರತಿದಿನ ಸಂಜೆ ಹೊತ್ತು, ಯುವಕರು ಗುಂಪು ಗುಂಪಾಗಿ ಸೇರಿ ತರಹೇವಾರಿ ಶಬ್ದಗಳಲ್ಲಿ ಹಲಗೆ ಬಾರಿಸುತ್ತಾರೆ. ಹೋಳಿ ಹಬ್ಬ ಮುಗಿದು ಬಣ್ಣದಾಟ ಸಂಪನ್ನಗೊಳ್ಳುವವರೆಗೂ ಹಳೆಯ ನಗರ, ವಿದ್ಯಾಗಿರಿ, ನವನಗರ ಸಹಿತ ವಿವಿಧ ಏರಿಯಾಗಳಲ್ಲಿ ಯುವಕರು ಗುಂಪು ಗುಂಪಾಗಿ ನಿಂತು ನಿತ್ಯವೂ ಹಲಗೆ ಬಾರಿಸುವುದರಲ್ಲಿ ತಲ್ಲೀನರಾಗಿರುತ್ತಾರೆ. ಒಟ್ಟು ಐದು ಶಬ್ದಗಳಲ್ಲಿ (ಐದು ರೀತಿ) ಹಲಗೆ ವಾದನ ಎಲ್ಲರ ಗಮನ ಸೆಳೆಯುತ್ತದೆ. ಈ ವಿಶಿಷ್ಟ ಹಲಗೆ ವಾದನ ಇಡೀ ದೇಶದಲ್ಲೇ ಗಮನ ಸೆಳೆದ ಕೀರ್ತಿಯೂ ಇದೆ.

ಹಲಗೆ ಮೇಳ: ಭಾರತೀಯರ ಪ್ರಾಚೀನ ಹಬ್ಬ, ಹರಿದಿನಗಳು, ಸಂಸ್ಕೃತಿ-ಪರಂಪರೆ ಉಳಿಯುವ ನಿಟ್ಟಿನಲ್ಲಿ ಹಲವು ಚಟುವಟಿಕೆ ನಡೆಸಲಾಗುತ್ತಿದೆ. ಹೋಳಿ ಹಬ್ಬ ಹಾಗೂ ಹಲಗೆ ವಾದನಕ್ಕೆ ಉತ್ತೇಜನ ಕೊಡುವ ಜತೆಗೆ ಹಬ್ಬಕ್ಕೆ ಸಂಭ್ರಮ ತರಲು, ಒಂದು ವಾರಗಳ ಕಾಲ ನಗರದ ವಿವಿಧೆಡೆ ಹಲಗೆ ಮೇಳ ಆಯೋಜಿಸಲಾಗುತ್ತದೆ.

ಒಂದೊಂದು ಏರಿಯಾದ ಯುವಕರೂ, ಆ ಓಣಿಯ ಹೆಸರಿನಲ್ಲಿ ಹಲಗೆ ಮೇಳ ನಡೆಸುತ್ತಾರೆ. ಈ ಹಲಗೆ ಮೇಳದಲ್ಲಿ ತಾಳಬದ್ಧವಾಗಿ ಹಲಗೆ ಬಾರಿಸುವ ತಂಡಕ್ಕೆ ನಗದು ಬಹುಮಾನ ನೀಡಲಾಗುತ್ತದೆ. ಈ ಸಂಭ್ರಮ ಕಳೆದ ಹಲವು ವರ್ಷಗಳಿಂದ ಬಾಗಲಕೋಟೆಯಲ್ಲಿ ನಡೆದುಕೊಂಡು ಬಂದಿದೆ. ಹಲವು ಬಡಾವಣೆಗಳಲ್ಲಿ ಈ ಬಾರಿಯೂ ಹಲಗೆ ಮೇಳ ನಡೆಸಲು ತೀರ್ಮಾನಿಸಲಾಗಿದೆ. ವಿವಿಧ ಸಂಘ-ಸಂಸ್ಥೆಗಳು, ಸಂಘಟನೆಗಳು ಹಲಗೆ ಮೇಳ ನಡೆಸುವ ಜತೆಗೆ ಹೋಳಿ ಹಬ್ಬದ ಕಾಮದಹನದ ಹಿಂದಿನ ದಿನ ನಗರದ ವಲ್ಲಭಬಾಯಿ ವೃತ್ತದಲ್ಲಿ ಹೋಳಿ ಆಚರಣೆ ಸಮಿತಿಯಿಂದ ಅಧಿಕೃತವಾಗಿ ಚಾಲನೆ ನೀಡಲಾಗುತ್ತದೆ.

ಬಣ್ಣ ಈಗ ಮೂರು ದಿನಕ್ಕೆ ಸೀಮಿತ: ಹಿಂದೆ ಏಳು ದಿನ, ಬಳಿಕ ಐದು ದಿನಗಳವರೆಗೆ ನಡೆಯುತ್ತಿದ್ದ ಬಾಗಲಕೋಟೆಯ ಬಣ್ಣದಾಟ, ಕಳೆದ ಹಲವು ವರ್ಷಗಳಿಂದ ಮೂರು ದಿನಕ್ಕೆ ಸಿಮೀತಗೊಳಿಸಲಾಗಿದೆ. ಒಂದೊಂದು ದಿನ, ಒಂದೊಂದು ಏರಿಯಾಗಳ ಬಣ್ಣದ ಬಂಡಿಗಳು (ಎತ್ತಿನ ಬಂಡಿ, ಟ್ಯಾಕ್ಟರ್‌ಗಳಲ್ಲಿ ಬಣ್ಣದ ನೀರು ತುಂಬಿದ ಬ್ಯಾರೇಲ್‌ ಇಟ್ಟು, ಬಣ್ಣ ಎರಚುತ್ತ ಸಾಗುತ್ತಾರೆ), ಇಡೀ ಬಾಗಲಕೋಟೆಯನ್ನು ಬಣ್ಣದ ನಗರವನ್ನಾಗಿ ಮಾಡುತ್ತವೆ. ಮಾರ್ಚ್‌ 20ರಂದು ರಾತ್ರಿ ಕಾಮದಹನ ಬಳಿಕ ಬಣ್ಣದಾಟಕ್ಕೆ ಚಾಲನೆ ದೊರೆಯುತ್ತದೆ. ಮಾ.21ರಿಂದ 23ರವರೆಗೆ ನಗರದಲ್ಲಿ ಬಣ್ಣದ ಬಂಡಿಗಳ ಸಂಭ್ರಮ ಜೋರಾಗಿ ನಡೆಯಲಿದೆ.

ಪ್ರತಿವರ್ಷ ಹೋಳಿ ಹಬ್ಬವನ್ನು ವಿಶಿಷ್ಟ ಹಾಗೂ ಸುಂದರವಾಗಿ ಆಚರಿಸುವುದು ಬಾಗಲಕೋಟೆಯ ಹೆಮ್ಮೆ. ಇದಕ್ಕಾಗಿಯೇ ಸಮಿತಿ ಇದ್ದು, ಈಗಾಗಲೇ ಸಮಿತಿ ಸಭೆ ನಡೆಸಿ, ಚರ್ಚಿಸಿದೆ. ನಗರದ ಐದು ಓಣಿಗಳ ತುರಾಯಿ ಹಲಗೆ ಮೇಳ ಮತ್ತು ಪ್ರದರ್ಶನ ನಡೆಸಲು ಉದ್ದೇಶಿಸಲಾಗಿದೆ. ನಗರದ ಎಲ್ಲ ಬಂಧುಗಳು, ಹೋಳಿ ಹಬ್ಬವನ್ನು ಶಾಂತ ಹಾಗೂ ಸಂಭ್ರಮದಿಂದ ಆಚರಿಸಬೇಕು.
ಕಳಕಪ್ಪ ಬಾದವಾಡಗಿ,
ಅಧ್ಯಕ್ಷ, ಹೋಳಿ ಆಚರಣೆ ಸಮಿತಿ

ಹೋಳಿ ಹಬ್ಬದ ಪ್ರಯುಕ್ತ ನಡೆಯುವ ಮೂರು ದಿನಗಳ ಬಣ್ಣದಾಟದ ವೇಳೆ, ನಗರದ ವ್ಯಾಪಾರ ವಹಿವಾಟು ಸ್ವಯಂ ಪ್ರೇರಿತ ಬಂದ್‌ ಆಗಿರುತ್ತದೆ. ಹೀಗಾಗಿ ಬಹುತೇಕ ವ್ಯಾಪಾರಸ್ಥರು, ಆ ಮೂರು ದಿನಗಳ ಕಾಲ ಪ್ರವಾಸದ ನೆಪದಲ್ಲಿ ಊರು ಬಿಡುತ್ತಾರೆ. ವ್ಯಾಪಾರಸ್ಥರು, ಯುವಕರು ಊರು ಬಿಡದೇ, ನಗರದಲ್ಲೇ ಇದ್ದುಕೊಂಡು ಬಣ್ಣದಾಟದ ಸಂಭ್ರಮದಲ್ಲಿ ಪಾಲ್ಗೊಳ್ಳಬೇಕು.
 ಶಿವಾನಂದ, ನಗರದ ಯುವಕ

ವಿಶೇಷ ವರದಿ

ಟಾಪ್ ನ್ಯೂಸ್

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ…? ಸಂಸದನ ವಿವಾದಾತ್ಮಕ ಹೇಳಿಕೆ

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ…? ಸಂಸದನ ವಿವಾದಾತ್ಮಕ ಹೇಳಿಕೆ

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.