ಉಗ್ರ ಅಜರ್ ವಿರುದ್ಧ ಆಡಿಯೋ ಸಾಕ್ಷ್ಯ
Team Udayavani, Mar 13, 2019, 12:30 AM IST
ಹೊಸದಿಲ್ಲಿ: ಜೈಶ್ ಉಗ್ರ ಮಸೂದ್ ಅಜರ್ ಕಾಶ್ಮೀರದಲ್ಲಿ ಜಿಹಾದ್ಗೆ ಪ್ರಚೋದಿಸುವ ಮತ್ತು ವಿಧ್ವಂಸಕ ಕೃತ್ಯಕ್ಕೆ ಪ್ರೇರಣೆ ನೀಡುತ್ತಿರುವುದಕ್ಕೆ ಪುರಾವೆಯಾಗಿ ಆಡಿಯೋ ರೆಕಾರ್ಡಿಂಗ್ ಒಂದನ್ನು ಇದೇ ಮೊದಲ ಬಾರಿಗೆ ಭಾರತವು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳ ಮುಂದಿಟ್ಟಿದೆ. ಈ ಮೂಲಕ ಅಜರ್ನನ್ನು ಭಯೋತ್ಪಾದಕರ ಪಟ್ಟಿಗೆ ಸೇರ್ಪಡೆ ಮಾಡುವ ಯತ್ನವನ್ನು ಮುಂದುವರಿಸಿದೆ.
ಈ ಹಿಂದೆ 3 ಬಾರಿ ಇದೇ ಪ್ರಸ್ತಾವವನ್ನು ವಿಶ್ವಸಂಸ್ಥೆಯ ಮುಂದಿಡಲಾಗಿತ್ತಾದರೂ ಚೀನದ ವಿರೋಧದಿಂದಾಗಿ ಪ್ರತಿ ಬಾರಿ ಭಾರತದ ಯತ್ನ ವಿಫಲವಾಗುತ್ತಿತ್ತು. ಈ ಬಾರಿ, ಅಮೆರಿಕ, ಫ್ರಾನ್ಸ್ ಮತ್ತು ಯುಕೆ ಕೂಡ ಜೈಶ್ ಉಗ್ರನನ್ನು ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿದೆ. ಬುಧವಾರ (ಮಾ. 13) ಮಧ್ಯಾಹ್ನದ ವರೆಗೆ ಸದಸ್ಯ ರಾಷ್ಟ್ರಗಳು ಈ ಕುರಿತು ನಿರ್ಧಾರ ಪ್ರಕಟಿಸಬೇಕು. ಯಾವುದೇ ಆಕ್ಷೇಪ ಎದುರಾಗದಿದ್ದರೆ ಅಜರ್ನನ್ನು ಭಯೋತ್ಪಾದಕ ಪಟ್ಟಿಗೆ ಸೇರಿಸಲಾಗುತ್ತದೆ.
ಅಜರ್ ಹಾಗೂ ಜೈಶ್ಗೆ ಸಂಬಂಧವಿಲ್ಲ ಎಂದೇ ಚೀನ ಹಾಗೂ ಪಾಕ್ ಹೇಳಿಕೊಂಡು ಬಂದಿವೆ. ಅದು ಸುಳ್ಳು ಎಂಬುದನ್ನು ಸಾಬೀತುಪಡಿಸುವಂಥ ಆಡಿಯೋ ಸಾಕ್ಷಿಯನ್ನು ನಾವು ನೀಡಿದ್ದೇವೆ ಎಂದು ಭಾರತದ ಹಿರಿಯ ರಾಜತಾಂತ್ರಿಕ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆಡಿಯೋದಲ್ಲಿ ಅಜರ್, “ಕಣಿವೆ ರಾಜ್ಯಕ್ಕೆ ಹೋಗಿ ಅಲ್ಲೇ ಹುತಾತ್ಮರಾಗಿ, ಕಾಶ್ಮೀರಿಗರು ಒಗ್ಗಟ್ಟಾಗಿ ಬಂದರೆ ಭಾರತ ಒಂದೇ ತಿಂಗಳಲ್ಲಿ ನಿರ್ನಾಮವಾಗುತ್ತದೆ’ ಎಂಬಿತ್ಯಾದಿ ಹೇಳಿಕೆಗಳನ್ನು ನೀಡಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?
ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ
MUST WATCH
ಹೊಸ ಸೇರ್ಪಡೆ
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ