ಭಾರತದಿಂದಲೇ ಉತ್ತರಾಧಿಕಾರಿ ಆಯ್ಕೆ: ದಲೈಲಾಮಾ
Team Udayavani, Mar 19, 2019, 5:39 AM IST
ಧರ್ಮಶಾಲಾ: ಬೌದ್ಧರ ಧರ್ಮಗುರು ಟಿಬೇಟಿನ ದಲೈಲಾಮಾ ತನ್ನ ಉತ್ತರಾಧಿಕಾರಿಯ ಬಗ್ಗೆ ಮಾತನಾಡಿದ್ದು, ನನ್ನ ಮುಂದಿನ ಅವತಾರ ಅಥವಾ ಉತ್ತರಾಧಿಕಾರಿ ಆಯ್ಕೆ ಭಾರತದಿಂದಲೇ ಆಗಬಹುದು ಎಂದಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ದಲೈಲಾಮಾ, ಬೌದ್ಧರ ಮುಂದಿನ ಧರ್ಮಗುರು ಅಂದರೆ ದಲೈಲಾಮಾ ಭಾರತದಿಂದಲೇ ಆಯ್ಕೆಯಾಗಬಹುದು. ಟಿಬೇಟ್ ಮೇಲಿನ ಹಿಡಿತದಿಂದ ಚೀನಾ ಮುಂದಿನ ದಲೈಲಾಮಾರನ್ನು ಆಯ್ಕೆ ಮಾಡಬಹುದು. ಆದರೆ ಅದನ್ನು ಯಾರೂ ಗೌರವಿಸುವುದಿಲ್ಲ ಎಂದಿದ್ದಾರೆ.
ಚೀನಾ ದೇಶ ದಲೈಲಾಮಾರ ಪುನರ್ಜನ್ಮದ ಬಗ್ಗೆ ಈಗಲೇ ಆಲೋಚನೆ ಮಾಡುತ್ತಿದೆ. ಅವರಿಗೆ ನನಗಿಂತ ನನ್ನ ಮುಂದಿನ ದಲೈಲಾಮಾರ ಬಗ್ಗೆ ಜಾಸ್ತಿ ಕಳವಳ ಇದೆ. ಮುಂದಿನ ದಿನಗಳಲ್ಲಿ ಇಬ್ಬರು ದಲೈಲಾಮಾರು ಬಂದರೂ ಅಚ್ಚರಿ ಪಡಬೇಕಿಲ್ಲ. ಒಬ್ಬರು ಟಿಬೇಟ್ ಸಂಪ್ರದಾಯದ ಆಯ್ಕೆ, ಮತ್ತೊಬ್ಬರನ್ನು ಚೀನಾ ಆಯ್ಕೆ ಮಾಡಬಹುದು. ಆದರೆ ಚೀನಾ ಆಯ್ಕೆ ಮಾಡಿದ ದಲೈಲಾಮಾರಿಗೆ ಯಾರೂ ಗೌರವ ಕೊಡುವುದಿಲ್ಲ ಎಂದರು.
ಮುಂದಿನ ದಲೈಲಾಮಾರನ್ನು ಆಯ್ಕೆ ಮಾಡಲು ತನಗೂ ಹಕ್ಕು ಇದೆ ಎಂದು ಚೀನಾ ವಾದಿಸುತ್ತಿದೆ. ಆದರೆ ಚೀನಾಗೆ ಯಾವುದೇ ಹಕ್ಕು ಇಲ್ಲ. ಟಿಬೇಟ್ ನ ಸಂಪ್ರದಾಯದಂತೆ ದಲೈಲಾಮಾರು ಮರಣ ಹೊಂದಿದ ನಂತರ ಅವರ ಆತ್ಮ ಮುಂದಿನ ಅವತಾರಕ್ಕಾಗಿ ಪುಟ್ಟ ಬಾಲಕನ ಆತ್ಮವನ್ನು ಸೇರುತ್ತದೆ. ಆ ಬಗ್ಗೆ ಬಾಲಕನನ್ನು ಧರ್ಮಗುರುಗಳು ಮಾತ್ರ ಗುರುತಿಸುತ್ತಾರೆ ಎಂದು 83ರ ಹರೆಯದ ನೋಬೆಲ್ ಶಾಂತಿ ಪುರಸ್ಕಾರ ವಿಜೇತ 14ನೇ ದಲೈಲಾಮಾ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ
MUST WATCH
ಹೊಸ ಸೇರ್ಪಡೆ
PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್
Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’