ಪಾರೀಕರ್ ಕೊನೆಯುಸಿರಿಗೆ ಬಿಜೆಪಿ ಕಾಯುತ್ತಿತ್ತು : ಸಂಜಯ್ ನಿರುಪಮ್
Team Udayavani, Mar 19, 2019, 5:55 AM IST
ಹೊಸದಿಲ್ಲಿ : ಗೋವೆಯಲ್ಲಿ ಬಿಜೆಪಿಯ ಹೊಸ ಮುಖ್ಯಮಂತ್ರಿಯ ಪ್ರಮಾಣ ವಚನ ಸ್ವೀಕಾರ ನಸುಕಿನ 1.50ರ ವೇಳೆಯೊಳಗೆ ಅತ್ಯಂತ ತರಾತುರಿಯಿಂದ ನಡೆದಿರುವುದನ್ನು ಪ್ರಶ್ನಿಸುವ ಮೂಲಕ ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್ ವಿವಾದ ಸೃಷ್ಟಿಸಿದ್ದಾರೆ.
ಮುಂಬಯಿ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿರುವ ಸಂಜಯ್ ನಿರುಪಮ್ ಇಂದು ಮಂಗಳವಾರ ಬೆಳಗ್ಗೆ ಮಾಡಿರುವ ವಿವಾದಾತ್ಮಕ ಟ್ವೀಟ್ ಹೀಗಿದೆ :
ಗೋವೆಯಲ್ಲಿ ನಸುಕಿನ 1.30ರ ಹೊತ್ತಿಗೆ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸಿರುವುದು ಗೊತ್ತಾಯಿತು. ಇದರಲ್ಲಿನ ತರಾತುರಿಯನ್ನು ಕಂಡಾಗ ಮನೋಹರ್ ಪಾರೀಕರ್ ಕೊನೆಯುಸಿರೆಳುವುದನ್ನೇ ಬಿಜೆಪಿ ಕಾಯುತ್ತಿತ್ತೇನೋ ಎಂದನ್ನಿಸಿತು. ಕನಿಷ್ಠ ಪಾರೀಕರ್ ಅವರ ಚಿತಾ ಭಸ್ಮವನ್ನು ಮುಳುಗಿಸುವ ತನಕವಾದರೂ ಅವರು (ಬಿಜೆಪಿ) ಕಾಯಬಹುದಿತ್ತು’.
ಸಂಜಯ್ ನಿರುಪಮ್ ಅವರು ತಮ್ಮ ಟ್ವೀಟ್ ನಲ್ಲಿ ನೂತನ ಮುಖ್ಯಮಂತ್ರಿಯ ತರಾತುರಿಯ ಪ್ರಮಾಣ ವಚನವನ್ನು ಟೀಕಿಸಿರುವರಾದರೂ ಗೋವೆಯಲ್ಲಿ ಸರಕಾರ ರಚಿಸುವ ಹಕ್ಕನ್ನು ತಮ್ಮ ಪಕ್ಷ ಕಾಂಗ್ರೆಸ್ ಮಂಡಿಸಿದ್ದುದರ ಬಗ್ಗೆ ಚಕಾರ ಎತ್ತದಿರುವುದು ಅಚ್ಚರಿಯ ವಿಷಯವಾಗಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ