ಗ್ರಾಮ ಮುಖ್ಯಸ್ಥೆಯನ್ನು ನೆಲದಲ್ಲಿ ಕೂರಿಸಿದ ರಾಜಸ್ಥಾನದ ಕೈ ಶಾಸಕಿ
Team Udayavani, Mar 20, 2019, 5:45 AM IST
ಜೋಧ್ಪುರ : ಗ್ರಾಮ ಸಭೆಯೊಂದರಲ್ಲಿ ಗ್ರಾಮ ಮುಖ್ಯಸ್ಥೆಯನ್ನು (ಮಹಿಳಾ ಸರಪಂಚ್ಳನ್ನು) ಕುರ್ಚಿಯಲ್ಲಿ ಕೂರಿಸುವ ಬದಲು ನೆಲದಲ್ಲಿ ಕೂರಿಸಿದುದಕ್ಕೆ ಕಾಂಗ್ರೆಸ್ ಶಾಸಕಿ ದಿವ್ಯಾ ಮಡೇರ್ನಾ ಕ್ಷಮೆ ಕೇಳಬೇಕು ಇಲ್ಲವೇ ನಮ್ಮ ಆಕ್ರೋಶವನ್ನು ಆಕೆ ಎದುರಿಸಬೇಕು ಎಂದು ರಾಜಸ್ಥಾನದ ಸರಪಂಚ್ ಸಂಘ ಎಚ್ಚರಿಕೆ ನೀಡಿದೆ.
ಕಳೆದ ಶನಿವಾರ ಜೋಧ್ಪುರ ಜಿಲ್ಲೆಯ ಓಸಿಯನ್ ಪ್ರದೇಶದಲ್ಲಿನ ಗ್ರಾಮ ಸಭೆಯೊಂದರಲ್ಲಿ ಖೇತಸಾರ್ ಗ್ರಾಮ ಮುಖ್ಯಸ್ಥೆಯನ್ನು ಶಾಸಕಿ ದಿವ್ಯಾ ಮಡೇರ್ನಾ ಅವರು ನೆಲದಲ್ಲಿ ಕೂರುವಂತೆ ಹೇಳಿ ಆಕೆಯನ್ನು ಅವಮಾನಿಸಿದ್ದರು ಎಂದು ರಾಜಸ್ಥಾನ ಸರಪಂಚ್ ಸಂಘ ಆರೋಪಿಸಿದೆ.
“ಶಾಸಕಿ ದಿವ್ಯಾ ಅವರು ತಾವು ಮಹಿಳಾ ಸರಪಂಚ್ಗೆ ಗೈದಿರುವ ಅವಮಾನಕ್ಕಾಗಿ ಕ್ಷಮೆ ಕೇಳಬೇಕು; ಇಲ್ಲದಿದ್ದರೆ ಆಕೆ ನಮ್ಮ ಆಕ್ರೋಶವನ್ನು ಎದುರಿಸಬೇಕಾದೀತು ಎಂದು ರಾಜಸ್ಥಾನ ಸರಪಂಚ್ ಸಂಘದ ಅಧ್ಯಕ್ಷ ಭಂವರ್ಲಾಲ್ ಹೇಳಿದ್ದಾರೆ.
ನಾನೊಬ್ಬ ಮಹಿಳೆಯಾಗಿ, ಅದೂ ಸರಪಂಚಳಾಗಿ, ನನ್ನ ವಿರುದ್ಧ ಒಬ್ಬ ಮಹಿಳಾ ಜನಪ್ರತಿನಿಧಿಯಿಂದ ಈ ರೀತಿಯ ವರ್ತನೆಯನ್ನು ನಾನು ನಿರೀಕ್ಷಿಸಿರಲಿಲ್ಲ; ನನಗೆ ತುಂಬಾ ದುಃಖ, ನೋವು, ಅವಮಾನವಾಗಿದೆ’ ಎಂದು ಗ್ರಾಮ ಮುಖ್ಯಸ್ಥೆ ಚಂದು ದೇವಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
W.Bengal; ಮುಸ್ಲಿಂ ಮುನಿಸಿಗೆ ಮಂದಿರಕ್ಕೆ ಬಾರದ ಮಮತಾ: ಅಮಿತ್ ಶಾ
1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್ಡಿಎ ಗ್ಯಾರಂಟಿ
Election; ಮೊಹಬ್ಬತ್ ಕೀ ದುಕಾನ್ನಲ್ಲಿ ಫೇಕ್ ವೀಡಿಯೋಗಳು ಮಾರಾಟ: ಮೋದಿ
Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್ ಗರಂ
Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ
MUST WATCH
ಹೊಸ ಸೇರ್ಪಡೆ
LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್ಗೆ ನಡುಕ: ಗಾಯತ್ರಿ
ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ
Tulu Movie ಮೇ 3: “ಗಬ್ಬರ್ ಸಿಂಗ್’ ತುಳು ಸಿನೆಮಾ ತೆರೆಗೆ
IPL 2024; ಚೆನ್ನೈ ಕಿಂಗ್ಸ್ಗೆ ಚೇಸಿಂಗ್ ಕಿಂಗ್ ಸವಾಲು
Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ