ಬಣ್ಣದ ಬದಲು ಭಜನೆ-ನಾಮಸ್ಮರಣೆ 


Team Udayavani, Mar 20, 2019, 10:41 AM IST

20-march-15.jpg

ಮಹಾಲಿಂಗಪುರ: ಇಲ್ಲಿ ಬಣ್ಣದಾಟದ ಬದಲು ಭಜನೆ, ಹಲಗೆಯ ನಾದದ ಬದಲು ಭಗವಂತನ ನಾಮಸ್ಮರಣೆ, ಕೂಗಾಟ-ಚೀರಾಟ ಬದಲು ನಡೆಯುತ್ತೆ ಸತ್ಸಂಗ-ಶಿವಾನುಭವಗೋಷ್ಠಿ. ಹೌದು. ಹೋಳಿ ಹಬ್ಬದಂಗವಾಗಿ ಇಲ್ಲಿಯ ತೋಟವೊಂದರಲ್ಲಿ ಬಣ್ಣದ ಬದಲು ಪಾರಮಾರ್ಥ ನಡೆಯುತ್ತದೆ. ಸುಮಾರು ಎರಡು ಸಾವಿರಕ್ಕೂ ಅಧಿಕ ಜನ ಪಾಲ್ಗೊಳ್ಳುತ್ತಾರೆ. ಶಿವನಾಮಸ್ಮರಣೆಯಲ್ಲಿ ತೊಡಗುತ್ತಾರೆ,  ವಚನ ಕೇಳುತ್ತಾರೆ. ಭಜನೆ ಮಾಡುತ್ತಾರೆ. ಸತ್ಸಂಗ ನಡೆಸುತ್ತಾರೆ.

ಹೋಳಿ ಹಬ್ಬದಂಗವಾಗಿ ಬಣ್ಣದ ಎರಚಾಟದಲ್ಲಿ ಭಾಗಿಗಳಾಗಿ ಬಟ್ಟೆ ಹಾಗೂ ಮೈ ಹೊಲಸು ಮಾಡಿಕೊಂಡು ಖನ್ನರಾಗುವುದಕ್ಕಿಂತ ಶಿವಾನುಭವ ಗೋಷ್ಠಿ ನಡೆಸುವುದು ಶ್ರೇಷ್ಠವೆಂದು ತಿಳಿದು ಶರಣ ಸಾತ್ವಿಕ ದಿ| ಮಹಾಲಿಂಗಪ್ಪ ಢಪಳಾಪೂರ ಅವರು 1982 ಮಾರ್ಚ್‌ನಲ್ಲಿ ಆರಂಭಿಸಿದ್ದಾರೆ. ಅಂದು ಕೇವಲ 15 ಜನರಿಂದ ಆರಂಭವಾದ ಈ ಸತ್ಸಂಗ-ಗೋಷ್ಠಿಯಲ್ಲಿ ಇಂದು ಸಾವಿರಾರು ಜನರು ಪಾಲ್ಗೊಂಡು ಪುನೀತರಾಗುತ್ತಾರೆ. ದಿ| ಮಹಾಲಿಂಗಪ್ಪ ಢಪಳಾಪೂರ ಅವರ ತೋಟದಲ್ಲಿ ಕಳೆದ 37 ವರ್ಷಗಳಿಂದ ಪ್ರತಿವರ್ಷ ತಪ್ಪದೇ ಹೋಳಿ ಹಣ್ಣಿಮೆಯಂದು ಇದು ಜರುಗುತ್ತ ಬಂದಿದೆ. ಬಸವರಾಜ ಢಪಳಾಪೂರ ಸಹೋದರರು ತಮ್ಮ ತಂದೆ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಪ್ರತಿ ವರ್ಷ ಅವರ ಸ್ಮರಣಾರ್ಥ ಈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಗೋಷ್ಠಿಯಲ್ಲಿ ಭಾಗವಹಿಸಲಿರುವ ಅತಿಥಿ, ಉಪನ್ಯಾಸಕ, ಶರಣು ಮಹೋದರಿಯರಿಗೆ ಮೊದಲೇ ಆಮಂತ್ರಣ ನೀಡಲಾಗಿರುತ್ತದೆ.

ಬಣ್ಣ ಬೇಡವೆಂದವರು: ಪಟ್ಟಣದಿಂದ ಪೂರ್ವಕ್ಕೆ ಒಂದೂವರೆ ಕಿ.ಮೀ.ಅಂತರದಲ್ಲಿರುವ ಢಪಳಾಪೂರ ಅವರ ತೋಟಕ್ಕೆ ಹೋಳಿ ಹುಣ್ಣಿಮೆಯಂದು ಬೆಳಿಗ್ಗೆ 5 ಗಂಟೆಯಿಂದಲೇ ಜನ ತಂಡೋಪತಂಡವಾಗಿ ಹೋಗುತ್ತಾರೆ. ಅವರೆಲ್ಲರೂ ಬಣ್ಣ ಬೇಡವೆಂದು ತಪ್ಪಿಸಿಕೊಂಡು ಬಂದವರೇ. ಅಲ್ಲಿ ಚಹಾ, ಅಲ್ಪೋಪಹಾರದ ವ್ಯವಸ್ಥೆಯೊಂದಿಗೆ ಢಪಳಾಪೂರ ಸಹೋದರರ ಆದರಾತಿಥ್ಯ ಇದ್ದೇ ಇರುತ್ತದೆ. ಊರಲ್ಲಿ ಹಲಗೆಗಳ ಶಬ್ದ ಕೇಳಿ ಬಂದರೆ ಈ ತೋಟದಲ್ಲಿ ವಚನಗಳ ನಿನಾದ ಕೇಳಿ ಬರುತ್ತದೆ. ಅಂದು ಬೆಳಿಗ್ಗೆ ಆಹ್ಲಾದಕರ ವಾತಾವರಣ ನಿರ್ಮಾಣಗೊಂಡಿರುತ್ತದೆ.

ನಾಳೆ ಕಾರ್ಯಕ್ರಮ: ಈ ವರ್ಷದ ಶಿವಾನುಭವವು ಮಾ.21ರಂದು ಬೆಳಿಗ್ಗೆ 9 ಗಂಟೆಯಿಂದ ಆರಂಭಗೊಳ್ಳುತ್ತದೆ. ಸಿದ್ಧಾರೂಢರ, ಯಲ್ಲಾಲಿಂಗ ಮಹಾರಾಜರ ಭಾವಚಿತ್ರ ಜತೆಗೆ ಕಾರ್ಯಕ್ರಮದ ಕಾರಣೀಭೂತರಾದ ದಿ|ಮಹಾಲಿಂಗಪ್ಪ ಢಪಳಾಪೂರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ನಂತರ ಸಾಮೂಹಿಕ ಪ್ರಾರ್ಥನೆ, ಜಪಯಜ್ಞ ನಡೆಯುತ್ತದೆ. ಬೆಳಿಗ್ಗೆ 10 ಗಂಟೆಗೆ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದ ಶ್ರೀ ಸಹಜಾನಂದ ಸ್ವಾಮೀಜಿ, ಕನ್ನಡ ಕಬೀರ ಇಬ್ರಾಹಿಂ ಸುತಾರ, ಶರಣ ಮಲ್ಲೇಶಪ್ಪ ಕಟಗಿ ಇವರಿಂದ ಪ್ರವಚನ ಜರುಗುತ್ತದೆ. 11:30ಕ್ಕೆ ವಿವಿಧ ಊರುಗಳಿಂದ ಆಗಮಿಸಿದವರಿಂದ ಭಜನೆ-ಕೀರ್ತನೆ ನಂತರ 12:30 ಗಂಟೆಗೆ ಇಬ್ರಾಹಿಂ ಸುತಾರ ತಂಡದಿಂದ ಸಂವಾದ ಕಾರ್ಯಕ್ರಮ ಜರುಗುತ್ತದೆ. ಮಧ್ಯಾಹ್ನ ಮಹಾಪ್ರಸಾದದೊಂದಿಗೆ ಶಿವಾನುಭವ ಗೋಷ್ಠಿ ಮಂಗಲಗೊಳ್ಳುತ್ತದೆ.

ಚಿಕ್ಕಾಲಗುಂಡಿ: ಹಬ್ಬದಂದು ಸತ್ಸಂಗ ಸಂಭ್ರಮ!
ಬೀಳಗಿ:
ಹೋಳಿ ಹಬ್ಬದಂದು ಎಲ್ಲೆಡೆ ತರಹೇವಾರಿ ಬಣ್ಣದಲ್ಲಿ ಮಿಂದೇಳುವ ಮೂಲಕ ಹೋಳಿ ಸಂಭ್ರಮದಲ್ಲಿ ತೊಡಗಿದರೆ, ತಾಲೂಕಿನ ಚಿಕ್ಕಾಲಗುಂಡಿ ಗ್ರಾಮದಲ್ಲಿ ಮಾತ್ರ ಸತ್ಸಂಗ ಸಂಭ್ರಮ ನಡೆಯುತ್ತದೆ. ಕಳೆದ 39 ವರ್ಷಗಳಿಂದ ಈ ಪರಿಪಾಠ ರೂಢಿಸಿಕೊಂಡು ಬಂದಿರುವ ಗ್ರಾಮಸ್ಥರು ಬಾಗೇವಾಡಿ ಅಜ್ಜನವರ ಪುಣ್ಯಾರಾಧನೆ ಹಾಗೂ ಹೋಳಿ ಹಬ್ಬದ ನಿಮಿತ್ತ ಮಾ. 20 ರಿಂದ 23 ರವರೆಗೆ ಗ್ರಾಮದ ಸಿದ್ಧಾರೂಢ ಮಠದ ಆವರಣದಲ್ಲಿ ಸತ್ಸಂಗ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಚಿದಂಬರಾಶ್ರಮ ಸಿದ್ಧಾರೂಢ ಮಠದ ವೇದಾಂತ ವಾಗೀಶ ಶಿವಕುಮಾರ ಸ್ವಾಮೀಜಿ, ಕನ್ಹೆàರಿ ಸಿದ್ಧಗಿರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜರುಗುವ ಸತ್ಸಂಗದಲ್ಲಿ ಮಹಾಲಿಂಗಪುರದ ಸಹಜಾನಂದ ಸ್ವಾಮೀಜಿ, ಮಂಟೂರ ಸದಾನಂದ ಸ್ವಾಮೀಜಿ, ಕನ್ಹೇರಿ ಮುಪ್ಪಿನ ಕಾಡಸಿದ್ದೇಶ್ವರ ಸ್ವಾಮೀಜಿ, ರನ್ನ ಬೆಳಗಲಿಯ ಸಿದ್ಧರಾಮ ಸ್ವಾಮೀಜಿ, ಮಲ್ಲಿಕಾರ್ಜುನ ಮಠದ ಬಸವರಾಜ ಸ್ವಾಮೀಜಿ, ಮಹಾಂತ ದೇವರು, ಗುಲಬುರ್ಗಾದ ಮಾತೋಶ್ರೀ ಲಕ್ಷ್ಮೀದೇವಿ, ಮಾತೋಶ್ರೀ ವಿದ್ಯಾದೇವಿ, ಕೊಪ್ಪ ಎಸ್‌ಕೆ ಗ್ರಾಮದ ಮಾತೋಶ್ರೀ ಜ್ಞಾನೇಶ್ವರಿ, ಆಳೂರಿನ ಶಂಕರಾನಂದ ಸ್ವಾಮೀಜಿ ಭಾಗವಹಿಸಲಿದ್ದಾರೆ. ಮಾ. 23 ರಂದು ಪೂರ್ಣಕುಂಭ, ಆರತಿ ಹಾಗೂ ಮುತ್ತೈದೆಯರ ಉಡಿ ತುಂಬುವುದು ಮತ್ತು ಸಕಲ ವಾದ್ಯ-ವೈಭವದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಿದ್ಧಾರೂಢರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಲಿದೆ. ನಂತರ ಶಿವಕುಮಾರ ಸ್ವಾಮಿಗಳ ತುಲಾಭಾರ ಜರುಗಲಿದೆ. ಅಂದು ಸಂಜೆ 4 ಗಂಟೆಗೆ ಬಾದಾಮಿ ತಾಲೂಕಿನ ಸುಳ್ಳದ ಕಾಷ್ಠ ಕಲಾವಿದರಾದ ಮಂಜುನಾಥ ಬಡಿಗೇರ, ಮಹಾಂತೇಶ ಬಡಿಗೇರ ನೂತನವಾಗಿ ನಿರ್ಮಿಸಲ್ಪಟ್ಟ ರಥದ ಉತ್ಸವ ನಡೆಯಲಿದೆ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಂದ್ರಶೇಖರ ಮೋರೆ

ಟಾಪ್ ನ್ಯೂಸ್

Kodaikanal – Ooty ಪ್ರವಾಸಕ್ಕೆ ಇ-ಪಾಸ್‌ ಕಡ್ಡಾಯ: ಹೈಕೋರ್ಟ್‌

Kodaikanal – Ooty ಪ್ರವಾಸಕ್ಕೆ ಇ-ಪಾಸ್‌ ಕಡ್ಡಾಯ: ಹೈಕೋರ್ಟ್‌

Implementation of secular law for Muslim succession: Supreme Court debate

Muslim ಉತ್ತರಾಧಿಕಾರಕ್ಕೆ ಜಾತ್ಯತೀತ ಕಾಯ್ದೆ ಜಾರಿ: ಸುಪ್ರೀಂಕೋರ್ಟ್‌ ಚರ್ಚೆ

“Siddaramaiah- H.D. Revanna ನಡುವೆ ಒಪ್ಪಂದಕ್ಕೆ ಎಫ್‌ಐಆರ್‌ ಹಾಕಲಿಲ್ಲವೇ?’

“Siddaramaiah- H.D. Revanna ನಡುವೆ ಒಪ್ಪಂದಕ್ಕೆ ಎಫ್‌ಐಆರ್‌ ಹಾಕಲಿಲ್ಲವೇ?’

Maulana Fazlur Rahman praises India in Pakistan

Fazal ur Rehman; ಭಾರತ ಸೂಪರ್‌ಪವರ್‌, ನಾವು ಭಿಕ್ಷೆ ಬೇಡುತ್ತಿದ್ದೇವೆ: ಪಾಕಿಸ್ಥಾನ ಸಂಸದ

Home Minister ಅಮಿತ್‌ ಶಾಗೆ ವಕೀಲ ದೇವರಾಜೇಗೌಡ ಪತ್ರ: ವೈರಲ್‌

Home Minister ಅಮಿತ್‌ ಶಾಗೆ ವಕೀಲ ದೇವರಾಜೇಗೌಡ ಪತ್ರ: ವೈರಲ್‌

H. D. Kumaraswamy ನನ್ನ ಬಳಿ ಇರುವುದು ಡಿಕೆಶಿ ಭ್ರಷ್ಟಾಚಾರದ ಮಾಹಿತಿ

H. D. Kumaraswamy ನನ್ನ ಬಳಿ ಇರುವುದು ಡಿಕೆಶಿ ಭ್ರಷ್ಟಾಚಾರದ ಮಾಹಿತಿ

uber cup badminton; India lost against china

Uber Cup Badminton: ಚೀನಾ ವಿರುದ್ಧ ಭಾರತಕ್ಕೆ 5-0 ಸೋಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kodaikanal – Ooty ಪ್ರವಾಸಕ್ಕೆ ಇ-ಪಾಸ್‌ ಕಡ್ಡಾಯ: ಹೈಕೋರ್ಟ್‌

Kodaikanal – Ooty ಪ್ರವಾಸಕ್ಕೆ ಇ-ಪಾಸ್‌ ಕಡ್ಡಾಯ: ಹೈಕೋರ್ಟ್‌

Implementation of secular law for Muslim succession: Supreme Court debate

Muslim ಉತ್ತರಾಧಿಕಾರಕ್ಕೆ ಜಾತ್ಯತೀತ ಕಾಯ್ದೆ ಜಾರಿ: ಸುಪ್ರೀಂಕೋರ್ಟ್‌ ಚರ್ಚೆ

“Siddaramaiah- H.D. Revanna ನಡುವೆ ಒಪ್ಪಂದಕ್ಕೆ ಎಫ್‌ಐಆರ್‌ ಹಾಕಲಿಲ್ಲವೇ?’

“Siddaramaiah- H.D. Revanna ನಡುವೆ ಒಪ್ಪಂದಕ್ಕೆ ಎಫ್‌ಐಆರ್‌ ಹಾಕಲಿಲ್ಲವೇ?’

Maulana Fazlur Rahman praises India in Pakistan

Fazal ur Rehman; ಭಾರತ ಸೂಪರ್‌ಪವರ್‌, ನಾವು ಭಿಕ್ಷೆ ಬೇಡುತ್ತಿದ್ದೇವೆ: ಪಾಕಿಸ್ಥಾನ ಸಂಸದ

Home Minister ಅಮಿತ್‌ ಶಾಗೆ ವಕೀಲ ದೇವರಾಜೇಗೌಡ ಪತ್ರ: ವೈರಲ್‌

Home Minister ಅಮಿತ್‌ ಶಾಗೆ ವಕೀಲ ದೇವರಾಜೇಗೌಡ ಪತ್ರ: ವೈರಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.