ಶರಾವತಿ ಹಿನ್ನೀರಲ್ಲಿ ಈಜಿದ ಪೋರಿ!


Team Udayavani, Mar 26, 2019, 5:04 PM IST

dvg-1
ಸಾಗರ: ಪೌಢ ವಯಸ್ಕರು ನೋಡಿದರೆ ಭಯ ಬೀಳುವ ಶರಾವತಿ ಹಿನ್ನೀರಿನಲ್ಲಿ ಕೇವಲ 3 ವರ್ಷ 8 ತಿಂಗಳಿನ ಕುವರಿಯೊಬ್ಬಳು ಒಂದು ತಾಸಿನಲ್ಲಿ ಒಂದು ಕಿ.ಮೀ. ಈಜಿ ಜನರನ್ನು ಬೆಕ್ಕಸ ಬೆರಗಾಗಿಸಿದ ಘಟನೆ ಭಾನುವಾರ ನಡೆದಿದ್ದು ತಡವಾಗಿ ಮಾಹಿತಿ ಲಭಿಸಿದೆ. ಶರಾವತಿ ಹಿನ್ನೀರಿನ ಹಸಿರುಮಕ್ಕಿಯಲ್ಲಿ ಬಾಲೆ ಮಿಥಿಲಾ ಈ ಸಾಹಸ ಮೆರೆದಿದ್ದಾಳೆ.
ಸಾಗರ- ಹೊಸನಗರ ದಡಕ್ಕೆ ಸಂಪರ್ಕವಾಗಿರುವ ಶರಾವತಿ ಹಿನ್ನೀರಿನಲ್ಲಿ ಭಾನುವಾರ ಬೆಳಗ್ಗೆ 7 ಗಂಟೆಗೆ ಈಜಲು ಆರಂಭಿಸಿದ ಕಿಪ್ಪಡಿಯ ಮಿಥಿಲಾ ಎಂಟು ಗಂಟೆಗೆ ಹಸಿರುಮಕ್ಕಿಯ ಮತ್ತೂಂದು ದಡವನ್ನು ಈಜಿ ಸೇರಿದಳು.
ಜಲಮೂಲ ಹಾಗೂ ಪರಿಸರ ಉಳಿಸಿ ಅಭಿಯಾನವನ್ನು ಸಾಗರದ ಜಲಯೋಗ ಸಂಸ್ಥೆ ಹಮ್ಮಿಕೊಂಡಿದ್ದು
ಅದಕ್ಕೆ ಕಿರೀಟವಿರಿಸುವ ರೀತಿಯಲ್ಲಿ ಮಿಥಿಲಾ ಈಜಿದ್ದಾಳೆ.
ಬರೀ ಈಜುವುದಷ್ಟೇ ಅಲ್ಲ, ಮಿಥಿಲಾ ಮಧ್ಯ ನೀರಿನಲ್ಲಿ ಪದ್ಮಾಸನ ಹಾಕಿ ಕುಳಿತಳು. ಜತೆಯಲ್ಲಿ ವಜ್ರಾಸನ, ಅಷ್ಟೂ ಸಾಲದಂತೆ ನೀರಿನಲ್ಲಿ ತೇಲುತ್ತಲೇ ಶವಾಸನದ ಭಂಗಿ ಪ್ರದರ್ಶಿಸಿ ಜನರ ಗಮನ ಸೆಳೆದಳು.
ಒಂದು ಘಂಟೆಯ ಈಜಿನ ನಂತರವೂ ಆಕೆ ಉಲ್ಲಸಿತಳಾಗಿಯೇ ಇದ್ದುದು ಅವಳನ್ನು ಹಿಂಬಾಲಿಸಿಕೊಂಡು ಬಂದಿದ್ದ ಜಲಯೋಗ ಸಂಸ್ಥೆಯ ಮುಖ್ಯಸ್ಥ ಹರೀಶ್‌ ನವಾಥೆ ಹಾಗೂ ಅವರ 20 ಜನರ ತಂಡವನ್ನು ಅಚ್ಚರಿಗೆ ತಳ್ಳಿತು. ಸಹ ಈಜುಗಾರರು ಬಣ್ಣ ಬಣ್ಣದ ಬಲೂನುಗಳನ್ನು ಆಕೆಗೆ ಕೊಟ್ಟು ಸ್ವಾಗತಿಸಿದರು.
ಇದೇ ಮೊದಲ ಬಾರಿ ಅಲ್ಲ!: ಎರಡೂವರೆ ವರ್ಷದಲ್ಲಿಯೇ ಈಜು ಕಲಿತ ಮಿಥಿಲಾಳಿಗೆ ಆವಿನಹಳ್ಳಿ ಹೋಬಳಿ ಕೋಳೂರು
ಗ್ರಾಪಂ ವ್ಯಾಪ್ತಿಯ ನಿವಾಸಿ ತಂದೆ ಗಿರೀಶ್‌, ತಾಯಿ ವಿನುತಾ ಮತ್ತು ಕುಟುಂಬದವರು, ಗ್ರಾಮಸ್ಥರು ಅವಳ ಜತೆಯಲ್ಲಿಯೆ ಕಿಪ್ಪಡಿಯ ಹಿನ್ನೀರಿನಲ್ಲಿ ಈಜುತ್ತಾ ತರಬೇತಿ ನೀಡಿದರು.
ಜಲಯೋಗ ಸಂಸ್ಥೆ ಆಕೆಗೆ ನೀಡಿದ ತರಬೇತಿ ಈಕೆಯ ಸಾಹಸದಲ್ಲಿ ಪ್ರತಿಫಲಿಸಿದೆ. ಮಿಥಿಲಾ ಕಳೆದ ವರ್ಷ ಕೂಡ
ಇದೇ ಹಿನ್ನೀರಿನಲ್ಲಿ ಈಜಿ ಗಮನ ಸೆಳೆದಿದ್ದಳು. ಆಗ ಈಕೆಗೆ ಕೇವಲ 2 ವರ್ಷ 11 ತಿಂಗಳಾಗಿತ್ತು.
ಕಳೆದ ಕೆಲವು ವರ್ಷಗಳಿಂದ ಸಾಗರ ಸುತ್ತಮುತ್ತಲಿನ ಹಳ್ಳಿಗಳಲ್ಲಿರುವ ಕೆರೆ, ಹಿನ್ನೀರು ಮುಂತಾದ ಪ್ರದೇಶಗಳಲ್ಲಿ ಊರಿನ ಜನರನ್ನು ನೀರಿಗಿಳಿಸಿ ಈಜು ಕಲಿಸಿ ಜಲಯೋಗ ಮಾಡುವ ಕಾರ್ಯಕ್ರಮವನ್ನು ಪ್ರಚುರಪಡಿಸುತ್ತಿದೆ. ಭೀಮನಕೋಣೆ, ನೀಚಡಿ ಮೊದಲಾದೆಡೆಯೂ ನಾವು ತರಬೇತಿ ನೀಡುತ್ತಿದ್ದೇವೆ. ನಮ್ಮ ಸಂಘಟನೆ ಇಂತಹ ಶಿಬಿರಗಳನ್ನು ನಡೆಸಿ ಯುವಜನರಲ್ಲಿ ಜಲಯೋಗದ ಬಗ್ಗೆ ಅರಿವು ಮೂಡಿಸುತ್ತಿದೆ ಎಂದು ಹರೀಶ್‌ ನವಾಥೆ ತಿಳಿಸುತ್ತಾರೆ.
ಶರಾವತಿ ಹಿನ್ನೀರಿನ ಪ್ರದೇಶದಲ್ಲಿ ಈ ಕಾರ್ಯಕ್ರಮದ ಆಯೋಜನೆಗೆ ಸಾಥ್‌ ನೀಡಿದ್ದ ಹಕ್ಕಲಳ್ಳಿ ಹೆರಿಟೇಜ್‌
ಹೋಮ್‌ ಮುಖ್ಯಸ್ಥ ಎಂ.ಸಿ. ಗಂಗಾಧರ ಗೌಡ, ಶರಾವತಿ ಹಿನ್ನೀರು ಒಂದು ಸುಂದರ ಪ್ರವಾಸಿ ತಾಣ. ಇಲ್ಲಿಯ ನಡುಗಡ್ಡೆಗಳು ಜನರನ್ನು ಆಕರ್ಷಿಸುತ್ತವೆ.
ಪ್ರವಾಸೋದ್ಯಮವನ್ನು ಪರಿಸರಕ್ಕೆ ಪೂರಕವಾಗಿ ನಡೆಸಬೇಕಾಗಿದೆ. ಶರಾವತಿ ಹಿನ್ನೀರಿನಲ್ಲಿ ಈಜುವುದು ಸುಲಭದ ಮಾತಲ್ಲ. ಆಳ ಅಗಲ ಗೊತ್ತಿದ್ದವರೆ ಇಲ್ಲಿ ಈಜಲು ಭಯ ಪಡುತ್ತಾರೆ. ಅಂತಹುದರಲ್ಲಿ ಹಸುಳೆ ಇಂತಹ ಸಾಧನೆ ಮಾಡಿರುವುದು ಭವಿಷ್ಯದಲ್ಲಿ ಒಳ್ಳೆಯ ದಿನಗಳು ಆಕೆಗೆ ಬರಲಿವೆ ಎಂದರು.

ಟಾಪ್ ನ್ಯೂಸ್

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-

Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.