ವಿದೇಶದಲ್ಲಿಯೂ ಕುಡ್ಲದ ಕಟ್ಟಪ್ಪ ಹವಾ !


Team Udayavani, Mar 28, 2019, 1:10 PM IST

28-March-9
ಇತ್ತೀಚೆಗೆ ಕೆಜಿಎಫ್‌ ಸಿನೆಮಾ ದೇಶ- ವಿದೇಶದಲ್ಲಿ ರಿಲೀಸ್‌ ಆಗುವ ಮೂಲಕ ಸ್ಯಾಂಡಲ್‌ವುಡ್‌ ಸಿನೆಮಾ ಜಾಗತಿಕ ಮಟ್ಟದಲ್ಲಿ ಸುದ್ದಿ ಪಡೆದಿತ್ತು. ಸಿನೆಮಾ ಹವಾ ಅಂದರೆ ಹೀಗಿರಬೇಕು ಎಂದು ಎಲ್ಲರೂ ಮಾತನಾಡುವಂತಾಗಿದೆ. ವಿಶೇಷವೆಂದರೆ, ನಿಗದಿತ ಆಜುಬಾಜಿನಲ್ಲಿ ಮಾತ್ರ ತೆರೆಕಾಣುತ್ತಿರುವ ತುಳು ಸಿನೆಮಾ ಈಗ ಇಂತಹುದೇ ದೊಡ್ಡ ಸಾಹಸಕ್ಕೆ ಕೈಹಾಕಿದೆ. ಕೋಸ್ಟಲ್‌ವುಡ್‌ನ‌ಲ್ಲಿ ಮಾತ್ರವಲ್ಲ; ಸ್ಯಾಂಡಲ್‌ವುಡ್‌ನ‌ಲ್ಲಿಯೇ ಒಂದು ಕ್ರೇಜ್‌ ಹುಟ್ಟಿಸುವ ಹಾಗೆ ಮಾಡಿದ ಸಿನೆಮಾ ‘ಕಟಪಾಡಿ ಕಟ್ಟಪ್ಪೆ’.
ಹೇಗೆಂದರೆ ಈ ಸಿನೆಮಾ ದೇಶ- ವಿದೇಶದ 200ಕ್ಕೂ ಅಧಿಕ ಸೆಂಟರ್‌ ನಲ್ಲಿ ಮಾ. 29ಕ್ಕೆ ರಿಲೀಸ್‌ ಆಗುವ ಹುಮ್ಮಸ್ಸಿನಲ್ಲಿದೆ. ಇದು ಕೋಸ್ಟಲ್‌ ವುಡ್‌ನ‌ಲ್ಲಿಯೇ ಅಚ್ಚರಿ ಹಾಗೂ ಕುತೂಹಲದ ಸಂಗತಿ. ಅದರಲ್ಲೂ ಕಟ್ಟಪ್ಪ ಶ್ರೀಲಂಕಾದಲ್ಲಿಯೂ ರಿಲೀಸ್‌ ಆಗಲಿದೆ. ಜತೆಗೆ ಸಿಂಗಾಪುರ, ಮಲೇಶಿಯಾ, ದುಬಾಯಿ, ಅಬುಧಾಬಿ, ಶಾರ್ಜಾ, ಬಹ್ರೈನ್‌ ನಲ್ಲಿಯೂ ಕಟಪಾಡಿ ಕಟ್ಟಪ್ಪ ಸಿನೆಮಾ ಅದೇ ದಿನ ರಿಲೀಸ್‌ ಆಗಲಿದೆ ದಿಲ್ಲಿ, ಸೂರತ್‌, ಗುಜರಾತ್‌,
ಉತ್ತರಪ್ರದೇಶ, ಮಧ್ಯಪ್ರದೇಶ, ಹೈದರಾಬಾದ್‌, ಮಹಾರಾಷ್ಟ್ರ, ಗೋವಾ, ಪಶ್ಚಿಮ ಬಂಗಾಲಸಹಿತ ಹೊರರಾಜ್ಯದಲ್ಲಿಯೂ ಸಿನೆಮಾ ರಿಲೀಸ್‌ ಆಗಲಿದೆ. ಕರ್ನಾಟಕದ ಮೂವತ್ತೂ ಜಿಲ್ಲೆಗಳಲ್ಲಿ ಬಿಡುಗಡೆ ಕಾಣುವ ಈ ಸಿನೆಮಾ ಬೆಂಗಳೂರಿನ 24 ಸೆಂಟರ್‌ಗಳಲ್ಲಿ ರಿಲೀಸ್‌ ಮಾಡಲು ಸಿನೆಮಾ ತಂಡ ನಿರ್ಧರಿಸಿದೆ. ಇದೆಲ್ಲವೂ ಕೋಸ್ಟಲ್‌ವುಡ್‌ ಪಾಲಿಗೆ ಮೊದಲ ಅನುಭವ.
ರಾಜೇಶ್‌ ಬ್ರಹ್ಮಾವರ್‌ ನಿರ್ಮಿಸಿರುವ ಈ ಚಿತ್ರ ಯುವ ನಿರ್ದೇಶಕ ಜೆ.ಪಿ. ತೂಮಿನಾಡ್‌ ಅವರ ನಿರ್ದೇಶನದ ಮೊದಲ ಚೊಚ್ಚಲ ಚಿತ್ರವಾಗಿದ್ದು, ಛಾಯಾಚಿತ್ರಗ್ರಾಹಕರಾಗಿ ರುದ್ರಮುನಿ ಅವರು ಕೈಚಳಕ ತೋರಿಸಿದ್ದಾರೆ. ಸಂಕಲನದಲ್ಲಿ ಗಣೇಶ್‌ ನೀರ್ಚಾಲ್‌, ಸಂಗೀತ ಪ್ರಕಾಶ್‌ ನೀಡಿದ್ದಾರೆ. ಜತೆಗೆ ತುಳುರಂಗ ಭೂಮಿಯ ದಿಗ್ಗಜರ ದಂಡು ಚಿತ್ರದಲ್ಲಿ ಅಭಿನಯಿಸಿದೆ. ಪ್ರಥಮ ಬಾರಿಗೆ ಉದಯ ಪೂಜಾರಿ ಬಲ್ಲಾಳ್‌ಬಾಗ್‌ ನಾಯಕ ನಟರಾಗಿ, ಚರೀಶ್ಮಾ ಅಮೀನ್‌ ಪರಂಗಿಪೇಟೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಯಜ್ಞೆಶ್ವರ್‌ ಬರ್ಕೆ, ವಿಜಯ್‌ ಕುಮಾರ್‌ ಕೊಡಿಯಾಲಬೈಲ್‌, ಪಮ್ಮಿ ಕೊಡಿಯಾಲಬೈಲ್‌, ಅರವಿಂದ್‌ ಬೋಳಾರ್‌, ಭೋಜರಾಜ್‌ ವಾಮಂಜೂರ್‌, ದೀಪಕ್‌ ರೈ ಪಾಣಾಜೆ, ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಸೂರಜ್‌ ಪಾಂಡೇಶ್ವರ, ಧೀರಜ್‌ ನೀರುಮಾರ್ಗ, ಪ್ರಶಾಂತ್‌ ಅಂಚನ್‌ ಸಹಿತ ಹಲವು ಕಲಾವಿದರು ಸಿನೆಮಾದಲ್ಲಿ ಅಭಿನಯಿಸಿದ್ದಾರೆ.

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

8-uv-fusion

UV Fusion: ಅತಿಯಾದ ಒಲವು ಒಳಿತಲ್ಲ

7-uv-fusion

UV Fusion: ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಲಿ ಕೊಡೆ ಹಿಡಿದ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.