ಸೌಲಭ್ಯ ವಂಚಿತ ಈರಣ್ಣಯ್ಯನ ಕಟ್ಟೆ ಪೋಡು


Team Udayavani, Mar 28, 2019, 5:26 PM IST

cha
ಸಂತೆಮರಹಳ್ಳಿ: ಯಳಂದೂರು ತಾಲೂಕಿನ ಗೌಡಹಳ್ಳಿ ಗ್ರಾಮದ ಬಳಿ ಇರುವ ಬಿಳಿಗಿರಿ ರಂಗನಬೆಟ್ಟದ ತಪ್ಪಲಿನಲ್ಲಿರುವ ಈರಣ್ಣಯ್ಯನ ಕಟ್ಟೆ ಪೋಡಿನಲ್ಲಿ ಕಾಡಪ್ರಾಣಿಗಳ ಉಪಟಳ ಒಂದು ಕಡೆಯಾದರೆ. ಮತ್ತೂಂಡೆದೆ ಕುಡಿಯುವ ನೀರಿಗೆ ಜನರು ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ.
ಬುಡಕಟ್ಟು ಸೋಲಿಗ ಜನಾಂಗ ವಾಸ ಮಾಡುವ ಈ ಪೋಡಿನಲ್ಲಿ 20 ಕುಟುಂಬಳಿವೆ. ಅಲ್ಲದೆ ಇದರ ಬಳಿಯಲ್ಲೇ ಜಮೀನುಗಳಿದ್ದು ಇಲ್ಲೂ ಕೂಡ ಅನೇಕ ಕುಟುಂಬಗಳು ವಾಸವಾಗಿವೆ. ಇಲ್ಲಿಗೆ ವಿದ್ಯುತ್‌ ಸಂಪರ್ಕ ಇದ್ದರೂ ವಿದ್ಯುತ್‌ ಮಾತ್ರ ಇರುವುದಿಲ್ಲ. ಹಾಗಾಗಿ ಇರುವ ಒಂದೇ ಒಂದು ತೊಂಬೆಗೆ ಕೊಳವೆ ಬಾವಿಯಿಂದ ನೀರು ತುಂಬಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಇಲ್ಲಿನ ನಾಗರಿಕರು ಸಮೀಪದ ಗೌಡಹಳ್ಳಿ ಡ್ಯಾಂನ ನೀರನ್ನೇ ಆಶ್ರಯಿಸುವ ಸ್ಥಿತಿ ಇದೆ.
ಕಾಡು ಪ್ರಾಣಿಗಳ ಕಾಟ: ಇದು ಕಾಡಿಗೆ ಅಂಟಿ ಕೊಂಡಂತಿರುವ ಗ್ರಾಮವಾಗಿದ್ದು ಸಂಜೆಯಾದರೆ ಆನೆ, ಕರಡಿ, ಚಿರತೆ, ಹುಲಿಗಳು ಇಲ್ಲೇ ಸಂಚರಿಸುತ್ತವೆ. ವಿದ್ಯುತ್‌ ಇಲ್ಲದ ಕಾರಣದಿಂದ ಇಡೀ ಪೋಡು ಕತ್ತಲಿನಲ್ಲಿ ಮುಳುಗುವುದರಿಂದ ರಾತ್ರಿ ಇಡೀ ಮನೆಯಿಂದ ಯಾರೂ ಹೊರಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ. ಕೆಲವು ಕುಟುಂಬಗಳು ತಮ್ಮ ಮನೆಗಳನ್ನೇ ಬಿಟ್ಟು ಬೆಟ್ಟದ ಪುರಾಣಿ ಪೋಡು, ಯರಕನಗದ್ದೆ ಪೋಡು, ಕಲ್ಯಾಣಿ ಪೋಡು ಸೇರಿ ದಂತೆ ಇತರೆ ಪೋಡುಗಳ ತಮ್ಮ ಸಂಬಂಧಿಕರ ಮನೆ ಯಲ್ಲಿ ವಾಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಇಲ್ಲಿನ ವಾಸಿ ಜಡೇಗೌಡ ಉದಯವಾಣಿಗೆ ತಿಳಿಸಿದರು.
ಜಮೀನುಗಳ ಫ‌ಸಲು ರಕ್ಷಣೆಯಾಗುತ್ತಿಲ್ಲ: ಇಲ್ಲಿ ವಾಸಿಸುವ ಕುಟುಂಬಗಳಲ್ಲಿ ಬಹುಪಾಲು ಜನರು ವ್ಯವಸಾಯವನ್ನೇ ಆಶ್ರಯಿಸಿದ್ದಾರೆ. ಆದರೆ ವಿದ್ಯುತ್‌ ಇಲ್ಲದೆ ಜಮೀನುಗಳಿಗೆ ನೀರುಣಿಸಲೂ ಸಾಧ್ಯವಾಗುತ್ತಿಲ್ಲ. ಈ ಬಾರಿ ಮಳೆಯೂ ಕೈಕೊಟ್ಟಿದೆ. ವಿಪರೀತ ಬಿಸಿಲ ಧಗೆಯಿಂದ ಫ‌ಸಲು ಒಣಗುತ್ತಿದೆ. ರಾತ್ರಿ ವೇಳೆ ಫ‌ಸಲು ರಕ್ಷಣೆಗೆ ವಿದ್ಯುತ್‌ ದೀಪ ಹಾಕಿ ಕಾಡು ಪ್ರಾಣಿಗಳ ಮೇಲೆ ಕಣ್ಣಿಡಲು ಸಾಧ್ಯವಾಗುತ್ತಿಲ್ಲ.
ಪ್ರಾಣಿಗಳು ಅರಣ್ಯ ಇಲಾಖೆಯ ಸೋಲಾರ್‌ ವಿದ್ಯುತ್‌ ಬೇಲಿ ಕಿತ್ತು ಬಂದಿದೆ. ಇದರಲ್ಲಿ ವಿದ್ಯುತ್‌ ಪ್ರವಹಿಸುವುದೇ ಇಲ್ಲ. ಇದನ್ನು ಕಾಡು ಪ್ರಾಣಿಗಳು ನಿರಾಯಸವಾಗಿ ದಾಟಿ ಈಚೆ ಬರುತ್ತವೆ. ಅರಣ್ಯ ಇಲಾಖೆ ಸಿಬ್ಬಂದಿ ಇದನ್ನು ಕಾಡಿಗಟ್ಟಲು ಯಾವುದೇ ಕ್ರಮ ವಹಿಸುವುದಿಲ್ಲ. ಇವರ ಬೇಜಬ್ದಾರಿಯಿಂದ ಇಡೀ ಬೆಳೆ ನಾಶವಾಗುತ್ತಿದೆ ಎಂದು ಪೋಡಿನ ವಾಸಿಗಳಾದ ರಂಗಸ್ವಾಮಿ, ಸೋಮೇಶ ದೂರಿದರು.

ಟಾಪ್ ನ್ಯೂಸ್

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.