ಉತ್ತರ ಕನ್ನಡದಲ್ಲಿ  ಮಂಗನ ಕಾಯಿಲೆ ಇಳಿಕೆ 

ಇನ್ನೂ ಎರಡು ತಿಂಗಳು ವಿಶೇಷ ಕಾಳಜಿ ಅನಿವಾರ್ಯ ಹಳ್ಳಿಗಳಲ್ಲಿ ಔಷಧ ವಿತರಣೆಗೆ ಬೇಕಿದೆ ಸಿಬ್ಬಂದಿ-ವಾಹನ 

Team Udayavani, Mar 29, 2019, 5:21 PM IST

29-March-17

ಹೊನ್ನಾವರ: ಐವತ್ತು ವರ್ಷಗಳಷ್ಟು ಹಳೆಯದಾದ ಮಂಗನ ಕಾಯಿಲೆ ಜಿಲ್ಲಾ ಘಟಕದ ಕಟ್ಟಡ.

ಹೊನ್ನಾವರ: ಸಾಗರದ ಮಂಗನ ಕಾಯಿಲೆ ಹಾವಳಿಯಿಂದ ಎಚ್ಚೆತ್ತ ಉತ್ತರ ಕನ್ನಡದ ಜನ ಮತ್ತು ಆರೋಗ್ಯ ಇಲಾಖೆ ಕಾಳಜಿ ವಹಿಸಿದ ಕಾರಣ ನಿಯಂತ್ರಣಕ್ಕೆ ಬಂದು ಇಳಿಮುಖವಾಗಿದೆ. ಇನ್ನೂ ಎರಡು ತಿಂಗಳು ವಿಶೇಷ ಕಾಳಜಿ ಅನಿವಾರ್ಯ.
ಈ ಸೀಜನ್‌ನಲ್ಲಿ ಹೊನ್ನಾವರ 11, ಸಿದ್ದಾಪುರ 12, ಕುಮಟಾ 6, ಅಂಕೋಲಾ 1, ಭಟ್ಕಳ 1 ಹೀಗೆ 31ಜನರಲ್ಲಿ ಮಂಗನ ಕಾಯಿಲೆ ವೈರಾಣು ಕಾಣಿಸಿಕೊಂಡಿತ್ತು. ಎಲ್ಲರೂ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.
ಮಂಗನ ಕಾಯಿಲೆ ಪ್ರದೇಶದ ಆರೋಗ್ಯ ಕೇಂದ್ರಗಳು, ಜಿಲ್ಲಾ ಮಂಗನ ಕಾಯಿಲೆ ವಿಭಾಗ ಈವರೆಗೆ 20 ಸಾವಿರ ಡೋಸ್‌ ಕಾಯಿಲೆ ನಿರೋಧಕ ಚುಚ್ಚುಮದ್ದು ನೀಡಿದೆ. 38 ಸಾವಿರ ಬಾಟಲ್‌ ಡಿಎಂಪಿ ತೈಲ ವಿತರಿಸಿದೆ. 53 ಮಂಗಗಳ ಶವ ಪರೀಕ್ಷೆ ಮಾಡಿದೆ. ಜನ ಸಾಕಷ್ಟು ಸ್ಪಂದಿಸಿದ್ದಾರೆ. ಅಧಿಕೃತವಾಗಿ ರಕ್ತ ಪಡೆದು ಸರ್ಕಾರಿ ಪ್ರಯೋಗಾಲಯದಲ್ಲಿ ಪರೀಕ್ಷಿಸಿ, ಖಚಿತಪಟ್ಟರೆ ಮಾತ್ರ ಮಂಗನ ಕಾಯಿಲೆ ಎಂದು ಒಪ್ಪುವುದಾಗಿ ಆರೋಗ್ಯ ಇಲಾಖೆ ಹೇಳುತ್ತಿದೆ. ರಕ್ತ ನೀಡದೆ ಸಿದ್ದಾಪುರದ ಇಬ್ಬರು ಮಂಗಳೂರು ಆಸ್ಪತ್ರೆಯಲ್ಲಿ, ಇನ್ನಿಬ್ಬರು ಸೂಕ್ತ ಚಿಕಿತ್ಸೆ ಪಡೆಯದೆ ಮನೆಯಲ್ಲಿ ಮೃತಪಟ್ಟಿರುವುದಾಗಿ ಸಾರ್ವಜನಿಕರು ಹೇಳುತ್ತಿದ್ದಾರೆ. ಸರ್ಕಾರಿ ಲೆಕ್ಕದಲ್ಲಿ ಜಿಲ್ಲೆಯಲ್ಲಿ ಮಂಗನ ಕಾಯಿಲೆಯಿಂದ ಸಾವು ಸಂಭವಿಸಿಲ್ಲ.
ಮಣಿಪಾಲ ವರದಿ: ಸಾಗರ ಆಸುಪಾಸಿನ 314ಜನ ಶಂಕಿತ ಮಂಗನ ಕಾಯಿಲೆ ಪೀಡಿತರು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು. ಇದರಲ್ಲಿ 12ಜನ 2ನೇ ಬಾರಿ ದಾಖಲಾಗಿದ್ದಾರೆ. ಇದರಲ್ಲಿ 185ಜನರಿಗೆ ಮಂಗನ ಕಾಯಿಲೆ ಇರಲಿಲ್ಲ. 129ಜನರಿಗೆ ಕಾಯಿಲೆ ಇರುವುದು ಖಚಿತಪಟ್ಟಿತ್ತು. ಇವರಲ್ಲಿ 283ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು
ಬಿಡುಗಡೆ ಹೊಂದಿದ್ದಾರೆ. 31ಜನ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾ.27 ರಂದು ಸಾಗರ ತಾಲೂಕಿನ 60 ವರ್ಷದ ಕಾಣಮ್ಮ ಎಂಬ ಮಹಿಳೆ ಮೃತಪಡುವುದರೊಂದಿಗೆ ಈವರೆಗೆ 9ಜನ ಮೃತಪಟ್ಟಿದ್ದಾರೆ. ಹೊನ್ನಾವರದಲ್ಲಿರುವ ಜಿಲ್ಲಾ ಮಂಗನ ಕಾಯಿಲೆ ಘಟಕಕ್ಕೆ ಡಾ| ಸತೀಶ ಶೇಟ್‌ ಪೂರ್ಣಾವಧಿ ವೈದ್ಯರಾಗಿ ವರ್ಗಾವಣೆ ಗೊಂಡಿದ್ದಾರೆ. ಪೂರ್ಣಪ್ರಮಾಣದಲ್ಲಿ ಈ ಘಟಕ ಕೆಲಸ ಮಾಡಲು ಸುಸಜ್ಜಿತ ಕಟ್ಟಡ, ಪ್ರಯೋಗಾಲಯ, ಪೆಥೋಲಜಿಸ್ಟ್‌, ಉಣ್ಣಿ ಸಂಗ್ರಹ ಮತ್ತು ಗ್ರಾಮೀಣ ಭಾಗದಲ್ಲಿ ಔಷಧ ವಿತರಣೆಗೆ ಸಿಬ್ಬಂದಿ ಮತ್ತು ವಾಹನ ಅಗತ್ಯವಿದೆ. ಮುಂದಿನ ವರ್ಷಕ್ಕಾಗಿ 80ಸಾವಿರ ಡೋಸ್‌ ಲಸಿಕೆಗೆ ಬೇಡಿಕೆ ಸಲ್ಲಿಸಲಾಗಿದೆ. 1965ರಲ್ಲಿ ನಿರ್ಮಾಣವಾದ ಅಂದಿನ ಅಡಕೆ ವ್ಯಾಪಾರಿ ಬಿಕ್ಕು ವಾಸುದೇವ ಕಾಮತ್‌ ತಮ್ಮ ಮಗ ಮಾಧವ ಕಾಮತ್‌ ನೆನಪಿನಲ್ಲಿ ಕೊಟ್ಟ 15000 ರೂ. ದೇಣಿಗೆಯಿಂದ ನಿರ್ಮಾಣವಾದ 50ವರ್ಷ ಹಳೆಯ ಪುರಾತನ ಹಂಚಿನ ಕಟ್ಟಡದ ಒಂದು ಕೋಣೆಯಲ್ಲಿ ಕಾರ್ಯಾಲಯ ನಡೆಯುತ್ತಿದೆ.
ಮಳೆಗಾಲದಲ್ಲಿ ಸೋರುತ್ತದೆ, ರೀಪುಗಳು ಮುರಿದು ಹೋಗಿವೆ. ಮಂಗನ ಕಾಯಿಲೆ ಸಂಪೂರ್ಣ ನಿವಾರಣೆಯಾಗಲು ಮಳೆಗಾಲದಲ್ಲಿಯೇ ಕಾರ್ಯಾಚರಣೆ ಆರಂಭವಾಗಬೇಕು. ಹಳ್ಳಿಯ ಮನೆಮನೆಗೆ ತೆರಳಿ ದನಗಳ ಮೇಲಿರುವ ಉಣ್ಣಿ ನಿವಾರಣೆಗೆ ಔಷಧ ನೀಡಿ, ಕಾರ್ಯರೂಪಕ್ಕೆ ಬರುವಂತೆ ನೋಡಿಕೊಳ್ಳಬೇಕು. ಪೂರ್ತಿ ಉಣ್ಣಿ ನಿವಾರಣೆ ಅಸಾಧ್ಯ. ಆದ್ದರಿಂದ ಮಳೆಗಾಲ ಮುಗಿದೊಡನೆ ಚುಚ್ಚುಮದ್ದು ನೀಡಲು ಆರಂಭಿಸಬೇಕು. ಬೇಸಿಗೆಯಲ್ಲಿ ಕಾಳಜಿ ವಹಿಸಬೇಕು. ಕಾಯಿಲೆ ಕಾಡುವುದು ಬೇಸಿಗೆಗಾದರೂ ವರ್ಷವಿಡೀ ಕೆಲಸ ನಡೆಸಬೇಕಾಗುತ್ತದೆ. ಆದ್ದರಿಂದ ಸರ್ಕಾರ ಮಂಗನ ಕಾಯಿಲೆಗೆ ಬಿಡುಗಡೆ ಮಾಡಿದ 10ಕೋಟಿ ರೂಪಾಯಿಗಳಲ್ಲಿ 2ಕೋಟಿ ರೂ.ಗಳನ್ನಾದರೂ ತುರ್ತು ಉ.ಕ. ಜಿಲ್ಲಾಸ್ಪತ್ರೆಗೆ ಬಿಡುಗಡೆ ಮಾಡಬೇಕು. ಇಲ್ಲವಾದರೆ ಮುಂದಿನವರ್ಷವೂ ಇದೇ ಹಾಡು, ಇದೇ ಪಾಡು.

ಟಾಪ್ ನ್ಯೂಸ್

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

11-

Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Suvendu Adhikari

W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

11-

Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.