ವ್ಯಭಿಚಾರಕ್ಕೆ ಕಲ್ಲೇಟಿನ ಹತ್ಯೆ ಶಿಕ್ಷೆ
Team Udayavani, Apr 4, 2019, 6:00 AM IST
ಬಂದರ್ ಸೆರಿ ಬೆಗವಾನ್: ವ್ಯಭಿಚಾರ ಹಾಗೂ ಸಲಿಂಗಕಾಮದಲ್ಲಿ ಭಾಗಿಯಾದವರನ್ನು ಕಲ್ಲೇಟಿನಿಂದ ಹತ್ಯೆ ಮಾಡುವಂಥ ಅತ್ಯಂತ ಕಠಿಣ ಶರಿಯಾ ಕಾನೂನನ್ನು ಬ್ರೂನಿಯಲ್ಲಿ ಬುಧವಾರದಿಂದ ಜಾರಿಗೊಳಿಸಲಾಗಿದೆ. ಜಗತ್ತಿನಾದ್ಯಂತದ ರಾಜಕೀಯ ಗಣ್ಯರು, ಸೆಲೆಬ್ರಿಟಿಗಳು, ಮಾನವ ಹಕ್ಕುಗಳ ಸಂಘಟನೆಗಳು ಸೇರಿದಂತೆ ವಿವಿಧ ವಲಯಗಳಿಂದ ತೀವ್ರ ಆಕ್ಷೇಪ ವ್ಯಕ್ತ ವಾದ ಹೊರತಾಗಿಯೂ ಬ್ರೂನಿ ದೇಶ ಈ ಕಾನೂನು ಅನುಷ್ಠಾನಗೊಳಿಸಿದೆ.
ಬ್ರೂನಿ ದೊರೆ ಸುಲ್ತಾನ್ ಹಸ್ಸನಲ್ ಬೊಲ್ಕಿಯಾಹ್ ಈ ನಿಯಮ ಜಾರಿಗೊಳಿಸಿದ್ದಾರೆ. ಕಲ್ಲೇಟಿನಿಂದ ಕೊಲೆ ಮಾಡುವ ಶಿಕ್ಷೆಯ ಜೊತೆಗೆ ಕಳ್ಳತನ ಮಾಡಿದರೆ ಕೈ-ಕಾಲುಗಳನ್ನು ಕಡಿಯು ವುದು, ಅತ್ಯಾಚಾರ ಮತ್ತು ದರೋಡೆಗೆ ಮರಣದಂಡನೆ, ಪ್ರವಾದಿಯನ್ನು ಅವಮಾನಿಸಿದರೆ ಗಲ್ಲುಶಿಕ್ಷೆ… ಹೀಗೆ ವಿವಿಧ ಅಪರಾಧಗಳಿಗೆ ವಿವಿಧ ಕಠೊರ ಶಿಕ್ಷೆಗಳನ್ನು ವಿಧಿಸುವ ಬಗ್ಗೆ ಈ ಕಾನೂನಿನಲ್ಲಿ ಉಲ್ಲೇಖವಾಗಿದೆ. ಇದೊಂದು ಕ್ರೂರ, ಅಮಾನವೀಯ ಕಾನೂನು ಎಂದು ವಿಶ್ವಸಮುದಾಯ ಅಭಿಪ್ರಾಯಪಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ