ಹೊಸಬರ ಹಿಂದೆ ಹೊರಟ ಕಿರಣ್
ಈ ಬಾರಿ ಸಸ್ಪೆನ್ಸ್ ಕಥೆ ಹಿಡಿದ ಗೋವಿ
Team Udayavani, Apr 11, 2019, 3:00 AM IST
ನಿರ್ದೇಶಕ ಕಿರಣ್ ಗೋವಿ “ಯಾರಿಗೆ ಯಾರುಂಟು’ ಚಿತ್ರದ ನಂತರ ಯಾವ ಚಿತ್ರ ಕೈಗೆತ್ತಿಕೊಳ್ಳುತ್ತಾರೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಇತ್ತೀಚೆಗೆ ತೆರೆಕಂಡ ಅವರ “ಯಾರಿಗೆ ಯಾರುಂಟು’ ಚಿತ್ರಕ್ಕೆ ಒಳ್ಳೆಯ ಮೆಚ್ಚುಗೆ ಸಿಕ್ಕಿತ್ತು. ಅದೇ ಖುಷಿಯಲ್ಲಿರುವ ಕಿರಣ್ಗೋವಿ ಈಗ ಸಂಪೂರ್ಣ ಹೊಸ ಪ್ರತಿಭೆಗಳ ಹಿಂದೆ ಹೊರಟಿದ್ದಾರೆ.
ಹೌದು, ಈ ಬಾರಿ ಕಿರಣ್ಗೋವಿ ಹೊಸ ತಂಡದ ಜೊತೆಗೊಂದು ಹೊಸತರಹದ ಚಿತ್ರ ಕೊಡಲು ಅಣಿಯಾಗುತ್ತಿದ್ದಾರೆ. ಆ ಚಿತ್ರಕ್ಕಿನ್ನೂ ನಾಮಕರಣ ಮಾಡಿಲ್ಲ. ಪಕ್ಕಾ ಸ್ವಮೇಕ್ ಕಥೆ ಹೆಣೆದಿರುವ ಕಿರಣ್ಗೋವಿ, ಮೂವರು ಹೊಸ ಹೀರೋಗಳ ಜೊತೆಗೆ ಒಬ್ಬಳೇ ಹೊಸ ನಾಯಕಿಯನ್ನು ಇಟ್ಟುಕೊಂಡು ಚಿತ್ರ ಮಾಡಲು ಹೊರಟಿದ್ದಾರೆ.
ಸದ್ಯಕ್ಕೆ ಮೂವರು ಹೀರೋಗಳ ಆಯ್ಕೆ ಪ್ರಕ್ರಿಯೆಯಲ್ಲಿರುವ ಕಿರಣ್ಗೋವಿ, ಈಗಿನ ಟ್ರೆಂಡ್ಗೆ ತಕ್ಕಂತಹ ಸಿನಿಮಾ ಕೊಡಲು ಉತ್ಸಾಹದಲ್ಲಿದ್ದಾರೆ. ಈ ಬಾರಿಯೂ ಸಹ ಹೊಸ ಆಯಾಮದೊಂದಿಗೆ ಕಥೆ ಕಟ್ಟಿಕೊಡುವ ಪ್ರಯತ್ನ ಅವರದು.
ಕಿರಣ್ಗೋವಿ ಅವರ ಹಿಂದಿನ ಎಲ್ಲಾ ಸಿನಿಮಾಗಳನ್ನು ಸೂಕ್ಷ್ಮವಾಗಿ ಗಮನಿಸಿಕೊಂಡು ಬಂದರೆ, ಅಲ್ಲಿ ಸಂಗೀತ ಮತ್ತು ಹಾಡುಗಳಿಗೆ ಪ್ರಾಧಾನ್ಯತೆ ಇರುತ್ತಿತ್ತು. ಅದು ಈ ಚಿತ್ರದಲ್ಲೂ ಮುಂದುವರೆಯಲಿದೆ ಎಂಬುದು ಕಿರಣ್ಗೋವಿ ಅವರ ಮಾತು.
ಇನ್ನು, ಇದು ಕನ್ನಡ ಮಾತ್ರವಲ್ಲ, ತೆಲುಗು ಹಾಗು ತಮಿಳು ಭಾಷೆಯಲ್ಲೂ ಸಿದ್ಧಗೊಳ್ಳುತ್ತದೆ ಎಂದು ವಿವರ ಕೊಡುವ ಕಿರಣ್ಗೋವಿ, ತನ್ನ ಗೆಳೆಯರ ಜೊತೆ ಸೇರಿ ಚಿತ್ರವನ್ನು ನಿರ್ಮಾಣ ಮಾಡಲು ಹೊರಟಿದ್ದಾರೆ. ಈಗ ಹೊಸಬರ ಚಿತ್ರಗಳು ಅದರಲ್ಲೂ ಕಂಟೆಂಟ್ ಇರುವ ಸಿನಿಮಾಗಳನ್ನು ಜನರು ಇಷ್ಟಪಡುತ್ತಿದ್ದಾರೆ.
ಆ ಸಾಲಿಗೆ ಸೇರುವಂತಹ ಚಿತ್ರ ಕೊಡುವ ನಿಟ್ಟಿನಲ್ಲಿ ಹೊಸದೊಂದು ಕಥೆ ಮಾಡಿ ಚಿತ್ರ ಮಾಡಲು ಹೊರಟಿರುವ ಅವರ ಕಥೆ ಹಾಗು ಹೊಸ ಯೋಚನೆ ಮೆಚ್ಚಿಕೊಂಡ ಗೆಳೆಯರು ನಿರ್ಮಾಣಕ್ಕೆ ಸಾಥ್ ಕೊಡುತ್ತಿದ್ದಾರೆ. ಅಂದಹಾಗೆ, ಚಿತ್ರಕ್ಕೆ ಇಷ್ಟರಲ್ಲೇ ಪೂಜೆ ನೆರವೇರಲಿದ್ದು, ಚಿತ್ರೀಕರಣಕ್ಕೆ ಹೊರಡಲು ತಯಾರಿ ನಡೆಸುವುದಾಗಿ ಹೇಳುತ್ತಾರೆ ಕಿರಣ್ಗೋವಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
MUST WATCH
ಹೊಸ ಸೇರ್ಪಡೆ
IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್
Devanahalli: ಬೇಸಿಗೆ ಬಿಸಿ; ಹುರುಳಿಕಾಯಿ ದರ ದುಬಾರಿ
PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್
Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ