ನಿರ್ಭಯ್ ಯಶಸ್ವಿ ಪರೀಕ್ಷೆ
Team Udayavani, Apr 16, 2019, 6:00 AM IST
ಬಾಲಸೋರ್: ಭಾರತದಲ್ಲೇ ತಯಾರಿಸಿದ ದೂರಗಾಮಿ ಸಬ್ ಸೋನಿಕ್ ಕ್ರೂಸ್ ಕ್ಷಿಪಣಿ ನಿರ್ಭಯ್ ಅನ್ನು ಒಡಿಶಾದ ಬಾಲಸೋರ್ನಲ್ಲಿ ಸೋಮವಾರ ಯಶಸ್ವಿಯಾಗಿ ಪ್ರಯೋಗಿಸಲಾಗಿದೆ. ಈ ಕ್ಷಿಪಣಿಯನ್ನು ಹಲವು ಫ್ಲಾಟ್ಫಾರಂಗಳಲ್ಲಿ ಅಳವಡಿಸಿ ಉಡಾವಣೆ ಮಾಡಬಹುದಾಗಿದ್ದು, ಮಧ್ಯಾಹ್ನ 11.44ಕ್ಕೆ ಉಡಾವಣೆ ಮಾಡಲಾಯಿತು. ಇದು 1000 ಕಿ.ಮೀ ದೂರದ ವರೆಗೆ ಸಾಗುವ ಸಾಮರ್ಥ್ಯ ಹೊಂದಿದೆ ಮತ್ತು 300 ಕಿಲೋ ತೂಕದ ಶಸ್ತ್ರವನ್ನು ಹೊತ್ತೂಯ್ಯುವ ಶಕ್ತಿಯನ್ನೂ ಒಳಗೊಂಡಿದೆ.
4ನೇ ಹಂತದ ಜಿಎಸ್ಎಲ್ವಿ ಅಭಿವೃದ್ಧಿಗೆ ಸಮ್ಮತಿ: ನಾಲ್ಕನೇ ಹಂತದ ಜಿಎಸ್ಎಲ್ವಿ ಅಭಿವೃದ್ಧಿಗೊಳಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. 2021-24ರ ಅವಧಿಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗುತ್ತದೆ. ಜಿಯೋ ಇಮೇಜಿಂಗ್, ನ್ಯಾವಿಗೇಶನ್, ಡೇಟಾ ಸಂವಹನ ಮತ್ತು ಬಾಹ್ಯಾಕಾಶ ವಿಜ್ಞಾನದ ಉದ್ದೇಶಕ್ಕೆ ಎರಡು ಟನ್ ಸಾಮರ್ಥ್ಯದ ಉಪಗ್ರಹಗಳನ್ನು ಈ ಜಿಎಸ್ಎಲ್ವಿ ಬಳಸಿ ಉಡಾವಣೆ ಮಾಡಲಾಗುತ್ತದೆ. ಇದಕ್ಕಾಗಿ ಸರ್ಕಾರ 2729 ಕೋಟಿ ರೂ. ಮೀಸಲಿಟ್ಟಿದೆ. ಈ ಐದು ಹಂತದ ರಾಕೆಟ್ ಒಳಗೊಂಡಿರುವ ಜಿಎಸ್ಎಲ್ವಿ ಇಂದ ಮುಂದಿನ ಮಂಗಳಯಾನಕ್ಕೆ ಅಗತ್ಯ ಪೂರ್ವ ಸಿದ್ಧತೆಗೂ ಸಹಾಯವಾಗಲಿದೆ. ಸದ್ಯ ಜಿಎಸ್ಎಲ್ವಿ ಅಭಿವೃದ್ಧಿ ಯೋಜನೆಗಳ ಪೈಕಿ ಎರಡು ಹಂತ ಮುಗಿದಿದ್ದು, ಮೂರನೇ ಹಂತ ಚಾಲ್ತಿಯಲ್ಲಿದ್ದು, 2021 ರ ವೇಳೆಗೆ ಮುಗಿಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಂಗಾಲ ಶಿಕ್ಷಕರ ನೇಮಕ ಸಿಬಿಐ ತನಿಖೆಗೆ ಮಾತ್ರ ತಡೆ: ಸುಪ್ರೀಂ ಕೋರ್ಟ್
NEET; ಕೋಟಾದಲ್ಲಿ ಮತ್ತೊಬ್ಬ ಆಕಾಂಕ್ಷಿ ಆತ್ಮಹತ್ಯೆ: ಇದು 8ನೇ ಪ್ರಕರಣ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ