ಸಾಯುತ್ತೇನೆಂದು ಹೋಗಿ ರೈಲೇರಿ ಸುಟ್ಟು ಹೋದ ಯುವಕ
ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ನಡೆದ ಬೆಚ್ಚಿ ಬೀಳಿಸುವ ಘಟನೆ
Team Udayavani, Apr 25, 2019, 12:42 PM IST
ಬೆಂಗಳೂರು: ಯುವಕನೊಬ್ಬ ಸಾಯುತ್ತೇನೆಂದು ರೈಲನ್ನೇ ರಿ ವಿದ್ಯುಕ್ ಶಾಕ್ಗೆ ಗುರಿಯಾಗಿ ಸಾವನ್ನಪ್ಪಿರುವ ಘಟನೆ ಮೂರು ದಿನಗಳ ಹಿಂದೆ ನಡೆದಿದ್ದು ತಡವಾಗಿ ಗುರುವಾರ ಬೆಳಕಿಗೆ ಬಂದಿದೆ.
ಮಾನಸಿಕಅಸ್ವಸ್ಥನಂತೆ ಕಂಡು ಬಂದಿದ್ದ ಯುವಕ ಸಾಯುತ್ತೇನೆ ಎಂದು ರೈಲನ್ನೇರಿದ್ದು, ಬಳಿಕ ಕೈ ಎತ್ತಿದಾಗ ವಿದ್ಯುತ್ ತಂತಿಗೆ ತಗುಲಿ ದ ಪರಿಣಾಮ ಸುಟ್ಟು ಕರಕಲಾಗಿ ಬಿದ್ದಿದ್ದಾನೆ.
ಮೆಜೆಸ್ಟಿಕ್ ರೈಲ್ವೇ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಯುವಕನಗುರುತು ಪತ್ತೆಯಾಗಿರುವ ಬಗ್ಗೆ ವರದಿಯಾಗಿಲ್ಲ.
ಘಟನೆಯನ್ನು ಕೆಲವರು ಮೊಬೈಲ್ಕ್ಯಾಮರಾಗಳ ಮೂಲಕ ಸೇರೆ ಹಿಡಿದಿದ್ದಾರೆ.