ಬೇಟೆನಾಯಿಗಳಿಂದ ವನ್ಯಜೀವಿಗಳಿಗೆ ಆಪತ್ತು


Team Udayavani, Apr 29, 2019, 3:00 AM IST

betenayi

ಸಕಲೇಶಪುರ: ತಾಲೂಕಿನಲ್ಲಿ ಬೇಟೆಗಾರರ ಹಾವಳಿ ನಿಯಂತ್ರಕ್ಕೆ ಬಂದರೂ ಬೇಟೆನಾಯಿಗಳು ಹಾಗೂ ನಾಯಿಗಳ ಹಾವಳಿ ನಿಲ್ಲದಾಗಿದೆ.

ಅರಣ್ಯ ಇಲಾಖೆಯ ಕಟ್ಟುನಿಟ್ಟಿನ ಕ್ರಮದಿಂದಾಗಿ ತಾಲೂಕಿನಲ್ಲಿ ಬೇಟೆಗಾರರ ಹಾವಳಿ ಕಡಿಮೆಯಾಗಿದ್ದರಿಂದ ಕಾಫಿ ತೋಟಗಳಲ್ಲಿ ಕಾಟಿ, ಜಿಂಕೆ, ನವಿಲು, ಕಾಡುಕುರಿ, ಕಾಡುಬೆಕ್ಕುಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ.

ಆದರೆ ತಾಲೂಕಿನಲ್ಲಿ ಬೇಟೆಗಾರಿಕೆ ನಿಯಂತ್ರಣಕ್ಕೆ ಬಂದಿದ್ದರೂ ಬೇಟೆಗೆ ಕರೆದೊಯ್ಯುತ್ತಿದ್ದ ಬೇಟೆನಾಯಿಗಳಿಗೆ ಮಾತ್ರ ಬೇಟೆಯ ರುಚಿ ಮರೆಯದಾಗಿದೆ. ಬೇಟೆ ನಾಯಿಗಳ ಜೊತೆಗೆ ಇತರೆ ಬೀದಿನಾಯಿಗಳು ಸಹ ಕಾಡುಪ್ರಾಣಿಗಳ ಮೇಲೆ ದಾಂಧಲೆ ನಡೆಸುತ್ತಿದ್ದು ಕೆಲವೊಂದು ಪ್ರಾಣಿಗಳಿಗೆ ಇದರಿಂದ ರಕ್ಷಣೆ ಇಲ್ಲದಂತಾಗಿದೆ.

ಬೀದಿ ನಾಯಿಗಳ ಹಾವಳಿ: ಪಟ್ಟಣ ವ್ಯಾಪ್ತಿಯಲ್ಲಿ ಕೆಲವು ಹೋರಾಟಗಾರರ ಕಿರುಕುಳದಿಂದ ಬೀದಿ ನಾಯಿಗಳನ್ನು ಹಿಡಿಯಲು ಪುರಸಭೆ ನಿಲ್ಲಿಸಿದ್ದು ಇದರಿಂದ ತಾಲೂಕಿನಲ್ಲೆಡೆ ನಾಯಿಗಳ ಹಾವಳಿ ಹೆಚ್ಚಿದೆ. ಕಾಡು, ಕಾಫಿತೋಟಗಳಲ್ಲಿ ಕಾಡುಪ್ರಾಣಿಗಳನ್ನು ಹುಡುಕಿ ಅಲೆಯುವ ಈ ಬೇಟೆನಾಯಿಗಳಿಗೆ ಕಾಡುಪ್ರಾಣಿಗಳು,

ಜನ,ಜಾನುವಾರುಗಳ ಪಾಲಿಗೆ ಮೃತ್ಯುಸ್ವರೂಪವಾಗಿದ್ದು. ಕಳೆದ ಒಂದು ತಿಂಗಳ ಅವಧಿಯಲ್ಲಿ ಈ ಬೇಟೆನಾಯಿಗಳು ಒಂದು ಮಗುವನ್ನು ಕಚ್ಚಿಗಾಯಗೊಳಿಸಿದ್ದರೆ, ನಾಲ್ಕು ಜಿಂಕೆಗಳು , ಒಂದು ನವಿಲು ಹಾಗೂ ಒಂದು ಜಾನುವಾರು ಬಲಿಯಾಗಿರುವುದು ಬೆಳಕಿಗೆ ಬಂದಿದೆ.

ವನ್ಯ ಜೀವಿಗಳು ಬಲಿ: ತಾಲೂಕಿನ ಮಠಸಾಗರ ಗ್ರಾಮ ಸಮೀಪ ಕಾಫಿ ತೋಟದಲ್ಲಿ ಜಿಂಕೆಯನ್ನು ಬೇಟಿಯಾಡಿದ್ದ ನಾಯಿಗಳನ್ನು ತೋಟದ ಮಾಲೀಕರು ಗುಂಡುಹಾರಿಸಿ ಓಡಿಸಿ ಜಿಂಕೆ ರಕ್ಷಿಸಿದರೂ ತೀವ್ರವಾಗಿ ಗಾಯಗೊಂಡಿದ್ದ ಜಿಂಕೆ ಸಾವಿಗೀಡಾಗಿತ್ತು. ಇದಾದ ಎರಡು ದಿನಗಳಲ್ಲಿ ಕಿರೆಹಳ್ಳಿ ಕೃಷ್ಣಪ್ಪ ಎಂಬುವವರ ಕಾಫಿ ತೋಟದಲ್ಲಿ ಜಿಂಕೆಯನ್ನು ಬೇಟೆಯಾಡಿ ಭಾಗಶಃ ತಿಂದು ಹಾಕಿದ್ದವು.

ಬೆಳಗೋಡು ಹೋಬಳಿ ಗೊಳಗೊಂಡೆ ಗ್ರಾಮದ ಕಾಫಿ ಎಸ್ಟೇಟ್‌ನಲ್ಲಿ ಬೀದಿನಾಯಿಗಳ ಗುಂಪಿಗೆ ಜಿಂಕೆ ಸಿಲುಕಿದ್ದು ತಕ್ಷಣವೇ ಕಾರ್ಮಿಕರು ಜಿಂಕೆ ರಕ್ಷಿಸಿ ಪಶು ವೈದ್ಯಶಾಲೆಗೆ ಕರೆತಂದರೂ ಯಾವುದೇ ಪ್ರಯೋಜವಾಗಲಿಲ್ಲ. ಇದಾಗಿ ಎರಡು ದಿನಗಳಲ್ಲಿ ರಾಟೇಮನೆ ಗ್ರಾಮ ಸಮೀಪದ ಐಬಿಸಿ ಕಾಫಿ ತೋಟದಲ್ಲಿ ಬೀದಿನಾಯಿಗಳಿಂದ ತಪ್ಪಿಸಿಕೊಳ್ಳುವ ಭರದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಬಂದ ಜಿಂಕೆ ವಾಹನಕ್ಕೆ ಸಿಲುಕಿ ಗಾಯಗೊಂಡಿತ್ತು.

ಈ ಜಿಂಕೆಯನ್ನು ರಕ್ಷಿಸಿ ಹಾಸನ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಕೊಂಡೊಯ್ಯಲಾಗಿದೆ. ಇದೆ ಐಬಿಸಿ ಕಾಫಿ ತೋಟದಲ್ಲಿ ನವೀಲು ಬೇಟೆಯಾಡಿದ್ದ ನಾಯಿಗಳು ತಿಂದು ಮುಗಿಸಿವೆ. ಇದಲ್ಲದೇ ತಾಲೂಕಿನ ಬನ್ನಹಳ್ಳಿ ಗ್ರಾಮದ ರಮೇಶ್‌ ಎಂಬುವವರ ಮೇಯಲು ಕಟ್ಟಿಹಾಕಿದ್ದ ಜಾನುವಾರುಗಳ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ್ದು ಜಾನುವಾರು ಸ್ಥಳದಲ್ಲೇ ಮೃತಪಟ್ಟಿದೆ.

ಮಕ್ಕಳ ಮೇಲೆ ನಾಯಿಗಳ ದಾಳಿ: ಕೋಗರವಳ್ಳಿ ಗ್ರಾಮದಲ್ಲಿ ತೋಟದಲ್ಲಿ ಆಟವಾಡುತ್ತಿದ್ದ ಕಾರ್ಮಿಕರ ಮಗುವಿನ ಮೇಲೆ ದಾಳಿ ಮಾಡಿದ ನಾಯಿಗಳ ಗುಂಪು ಕಚ್ಚಿಗಾಯಗೊಳಿಸಿದೆ ಅದೃಷ್ಟವಶಾತ್‌ ಕುಟುಂಬಸ್ಥರು ಸಕಾಲಕ್ಕೆ ಗಮನಿಸಿದ್ದರಿಂದ ಮಗುವಿನ ಜೀವ ಉಳಿದಿದೆ.

ಕಾಫಿ ಗಿಡಗಳ ಮದ್ಯೆ ಉದ್ದ ಕೋಡಿನ ಜಿಂಕೆಗಳು ಓಡಲು ಸಾಧ್ಯವಿಲ್ಲ ಇದರಿಂದ ಸುಲುಭವಾಗಿ ನಾಯಿಗಳಿಗೆ ತುತ್ತಾಗುತ್ತಿವೆ.
-ರವೀಂದ್ರ, ವಲಯ ಅರಣ್ಯಾಧಿಕಾರಿ.

ಕೂಡಲೇ ನಾಯಿಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜಿಂಕೆ, ನವಿಲಿನಂತಹ ಪ್ರಾಣಿ ಪಕ್ಷಿಗಳು ಉಳಿಯುವುದು ಸಾಧ್ಯವಿಲ್ಲ.
-ಕೃಷ್ಣಪ್ಪ, ಕಾಫಿ ಬೆಳೆಗಾರರು, ಕಿರೇಹಳ್ಳಿ

* ಸುಧೀರ್‌ ಎಸ್‌.ಎಲ್‌

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

Mekedatu Dam ನಿರ್ಮಾಣಕ್ಕೆ ಕೇಂದ್ರMekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡಯುವೆ: ದೇವೇಗೌಡ

Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.