ಪ್ರಸಾದ ಸೇವನೆ: 120 ಮಂದಿ ಅಸ್ವಸ್ಥ
Team Udayavani, Apr 29, 2019, 6:30 AM IST
ಸಾಂದರ್ಭಿಕ ಚಿತ್ರ
ಶಿರಾ: ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಚಿನ್ನಪ್ಪನಹಳ್ಳಿ ಗ್ರಾಮದಲ್ಲಿ ಹರಸೇವೆ ಊಟ ಮಾಡಿದ 8-10 ಮಕ್ಕಳ ಸಹಿತ 120ಕ್ಕೂ ಹೆಚ್ಚು ಗ್ರಾಮಸ್ಥರು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ.
ಗ್ರಾಮದ ಆಂಜನೇಯ ಸ್ವಾಮಿಗೆ ಶನಿವಾರ ಹರಸೇವೆ ನಡೆದಿದ್ದು, ರಾತ್ರಿ ಗ್ರಾಮಸ್ಥರು ಪ್ರಸಾದವಾಗಿ ಅನ್ನ- ಸಾರು, ಪಾಯಸ, ಸಿಹಿ ಮತ್ತು ಖಾರಾ ಬೂಂದಿ ಊಟ ಮಾಡಿದ್ದರು. ರವಿವಾರ ಬೆಳಗಾಗುತ್ತಿದ್ದಂತೆ, ಹಲವರಿಗೆ ವಾಂತಿ, ಭೇದಿ, ತಲೆಭಾರ, ಜ್ವರ ತೊಂದರೆಗಳು ಕಾಣಿಸಿಕೊಂಡಿವೆ.
ಆಶಾ ಕಾರ್ಯಕರ್ತೆಯರು ಹಲವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದರು. 40 ಮಂದಿಯನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು
Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ