ಕಡಲ ತಡಿಯಲ್ಲೂ ಪಾತಾಳ ಸೇರಿದ ಬಾವಿ ನೀರು: ಆತಂಕ
Team Udayavani, Apr 30, 2019, 4:02 PM IST
ಕಾರವಾರ: ನೀರಿನ ಮೂಲಗಳು ಒಣಗಲು ಆರಂಭ ಆಗಿರುವುದರಿಂದ, ತಾಲೂಕಿನ ವಿವಿಧೆಡೆ ಶುದ್ಧ ಕುಡಿಯುವ ನೀರಿನ ಸಮಸ್ಯೆ ತಾಂಡವವಾಡುತ್ತಿದೆ. ನಗರ ವ್ಯಾಪ್ತಿಯ ಬಿಣಗಾ, ಬೈತಖೋಲ್, ಸೀತಾನಗರ, ಜೈಲ್ವಾಡಾ, ನ್ಯೂ ಕೆಎಚ್ಬಿ ಕಾಲೊನಿ, ಗುನಗಿವಾಡಾ, ನಂದನಗದ್ದಾ, ಕೋಡಿಬಾಗ ಮುಂತಾದೆಡೆ ಬಾವಿ, ಬೋರ್ವೆಲ್ಗಳ ನೀರು ತಳಮಟ್ಟ ತಲುಪಿದ್ದು, ನೀರಿನ ಬವಣೆ ಏಪ್ರಿಲ್ ಅಂತ್ಯದಲ್ಲೇ ಶುರುವಾಗಿದೆ.
ನಗರಸಭೆ ಗಂಗಾವಳಿ ನದಿಯ ನೀರನ್ನು ಪೈಪ್ಲೈನ್ ಮೂಲಕ ನಗರದ ಸಾರ್ವಜನಿಕರಿಗೆ ದಿನ ಬಿಟ್ಟು ದಿನಕ್ಕೊಮ್ಮೆ ಪೂರೈಸುತ್ತಿತ್ತು. ಈಗ ಗಂಗಾವಳಿ ನದಿಯಲ್ಲಿ ನೀರಿನ ಸಂಗ್ರಹ 1 ಮೀಟರ್ಗೆ ಇಳಿದಿದೆ. ಕಾರವಾರ ನಗರವಲ್ಲದೇ, ಸೀಬರ್ಡ್ ಯೋಜನಾ ವಸತಿ ಪ್ರದೇಶ, ಬಿಣಗಾದ ಆದಿತ್ಯ ಬಿರ್ಲಾ ಕೆಮಿಕಲ್ಸ್ ಲಿಮಿಟೆಡ್ ಕಂಪನಿ ನೌಕರರ ವಸತಿ ಪ್ರದೇಶ, ಅಂಕೋಲಾ ಪಟ್ಟಣ ಗಂಗಾವಳಿ ನದಿ ನೀರು ಅವಲಂಬಿಸಿವೆ.
ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಬಾವಿ ಮತ್ತು ಬೋರ್ವೆಲ್ ನೀರು ಅವಲಂಬಿಸಿವೆ. ಅಲ್ಲಿನ ಕೆಲ ವಾಡಾಗಳಿಗೆ ಟ್ಯಾಂಕರ್ ನೀರು ಪೂರೈಸಲಾಗುತ್ತಿದೆ. ಕಾರವಾರ-ಅಂಕೋಲಾ ನೀರು ಸರಬರಾಜು ಮಂಡಳಿ ಈಗಾಗಲೇ ಪ್ರಕಟಣೆ ಹೊರಡಿಸಿ, ಇನ್ನು ಮುಂದೆ ನಗರ, ಪಟ್ಟಣಗಳಲ್ಲಿ 2 ದಿನಗಳಿಗೊಮ್ಮೆ ಮಾತ್ರ ನೀರು ಸರಬರಾಜು ಮಾಡಲಾಗುವುದು ಎಂದು ತಿಳಿಸಿದೆ.
ಕಾಳಿನದಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಪೈಕಿ ಕೆರವಡಿ ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬದಿಂದ ತಾಲೂಕಿನ ಕಾಳಿ ನದಿ ಎಡ-ಬಲ ದಂಡೆಯಲ್ಲಿ ವಾಸಿಸುವ ಜನರಂತೂ ನೀರಿನ ಹಾಹಾಕಾರದಿಂದ ಒದ್ದಾಡುತ್ತಿದ್ದಾರೆ. ಬಲ ದಂಡೆಯ ಸದಾಶಿವಗಡ, ಚಿತ್ತಾಕುಲ, ಅಸ್ನೋಟಿ, ಹಣಕೋಣ, ಗೋಪಶಿಟ್ಟಾ, ಬಾಳ್ನಿ ಮುಂತಾದ ಗ್ರಾಮಗಳ ಬಾವಿ, ಬೋರ್ವೆಲ್ಗಳಿಗೆ ಉಪ್ಪು ನೀರು ಸೇರಿಕೊಳ್ಳುವುದರಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಭಣಗೊಂಡಿದೆ. ಅದೇ ರೀತಿ ನದಿಯ ಎಡ ದಂಡೆಯ ಮಖೇರಿ, ಕಡವಾಡ, ಕಿನ್ನರ್, ವೈಲ್ವಾಡಾ, ಖಾರ್ಗಾ, ಸಿದ್ಧರ್ ಮುಂತಾದ ಪ್ರದೇಶಗಳ ಪರಿಸ್ಥಿತಿ ಕೂಡ ಭಿನ್ನವಾಗಿಲ್ಲ. ಕಾಳಿ ನದಿಯ ಉಪ್ಪು ನೀರು ದಡದ ಮೇಲಿನ ಸಿಹಿ ನೀರಿನ ಬಾವಿ,ಬೋರ್ವೆಲ್ಗಳ ಜಲಮೂಲಗಳಿಗೆ ಸಂಗ್ರಹವಾಗಿ ಭಾರಿ ಸಮಸ್ಯೆ ತಂದೊಡ್ಡಿದೆ.
ಇದಲ್ಲದೇ ಪಶ್ಚಿಮ ಘಟ್ಟದ ಸೆರಗಿನಿಂದ ಪಶ್ಚಿಮಾಭಿಮುಖವಾಗಿ ಹರಿಯುವ ಕಾಳಿ ನದಿಯ ಎಡ, ಬಲ ದಂಡೆಯ ಜನರು ಹೆಚ್ಚಾಗಿ ಗುಡ್ಡಗಾಡಿನ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಅವರ ಸಮಸ್ಯೆಯಂತೂ ಹೇಳತೀರದು. ಹೆಚ್ಚಿನ ಜನರು ಗ್ರಾಪಂ ನೀರನ್ನು ಅವಲಂಬಿಸಿದ್ದು, ನೀರಿನ ಪೂರೈಕೆ ಇಲ್ಲದೇ ಒದ್ದಾಡುವಂತಾಗಿದೆ. ಪಂಚಾಯತಿನವರು ಟ್ಯಾಂಕರ್ ಮೂಲಕ ನೀರು ಪೂರೈಸುವ ವ್ಯವಸ್ಥೆ ಮಾಡಿದ್ದರೂ ಕೊಡ ಹಿಡಿದು ಸರತಿ ಸಾಲಿನಲ್ಲಿ ನಿಂತು ಸೀಮಿತ ಪ್ರಮಾಣದ ನೀರು ಪಡೆಯುವ ಪರಿಸ್ಥಿತಿ ಗ್ರಾಮೀಣ ಜನರದ್ದಾಗಿದೆ.
ಕೆಎಚ್ಬಿ ಬವಣೆ: ನಗರದ ನ್ಯೂ ಕೆಎಚ್ಬಿ ಕಾಲೊನಿಯಲ್ಲಿ ವರ್ಷದ 365 ದಿನವೂ ಜನರು ನೀರಿನ ಸಮಸ್ಯೆಯಿಂದ ಒದ್ದಾಡುತ್ತಿದ್ದಾರೆ. ಇಲ್ಲಿ ನಿರ್ಮಿಸಲಾಗಿರುವ ಮನೆಗಳು ಇಕ್ಕಟ್ಟಿನಲ್ಲಿರುವುದರಿಂದ ಬಹುತೇಕ ಮನೆಗಳ ನೀರಿನ ಬಾವಿ, ಬೋರ್ವೆಲ್ಗಳು ಚರಂಡಿ ಪಕ್ಕದಲ್ಲೇ ಇವೆ. ಹೀಗಾಗಿ ಇವುಗಳ ನೀರು ಕುಡಿಯುವ ಗಣಮಟ್ಟದಲ್ಲಿರುವುದಿಲ್ಲ. ಈ ಕಾರಣದಿಂದ ಇಲ್ಲಿನ ಜನರು ನಗರಸಭೆ ನಳದ ನೀರನ್ನೇ ಅವಲಂಬಿಸಿದ್ದಾರೆ. ಕಡು ಬೇಸಿಗೆ ಕಾರಣದಿಂದ ಗಂಗಾವಳಿ ನೀರು ಪೂರೈಕೆಯು 2 ದಿನಗಳಿಗೊಮ್ಮೆ ಆಗುವುದರಿಂದ ಇಲ್ಲಿನ ಜನರು ಕುಡಿಯುವ ನೀರಿಗಾಗಿ ಪರದಾಡಬೇಕಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ
MUST WATCH
ಹೊಸ ಸೇರ್ಪಡೆ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ