ಮಾಯಾ ಜತೆಗೆ ಮಾತಾಡುವೆ: ಸಿಎಂ ಕಮಲ್ನಾಥ್
Team Udayavani, May 3, 2019, 6:20 AM IST
ಮಧ್ಯಪ್ರದೇಶದ ಗುಣ ಲೋಕಸಭೆ ಕ್ಷೇತ್ರದಲ್ಲಿ ಬಹುಜನ ಸಮಾಜವಾದಿ ಪಕ್ಷದಿಂದ ಕಾಂಗ್ರೆಸ್ಗೆ ಲೋಕೇಂದ್ರ ಸಿಂಗ್ ರಜಪೂತ್ ಪಕ್ಷಾಂತರ ಮಾಡಿದ್ದಕ್ಕೆ ಸಿಟ್ಟಾಗಿರುವ ಮತ್ತು ಬೆಂಬಲ ಹಿಂಪಡೆಯುವ ಮಾತನಾಡಿರುವ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಜೊತೆಗೆ ಇರುವ ಎಲ್ಲ ಭಿನ್ನಾಭಿಪ್ರಾಯಗಳನ್ನೂ ಬಗೆಹರಿಸಿಕೊಳ್ಳುವುದಾಗಿ ಮಧ್ಯಪ್ರದೇಶ ಸಿಎಂ ಕಮಲ್ನಾಥ್ ಹೇಳಿದ್ದಾರೆ. ಬಿಜೆಪಿಯನ್ನು ದೂರ ವಿಡುವ ಉದ್ದೇಶವನ್ನು ಮಾಯಾವತಿ ಹಾಗೂ ಕಾಂಗ್ರೆಸ್ ಹೊಂದಿದೆ. ಬಿಜೆಪಿಯನ್ನು ದೂರವಿಡಲು ನಾವು ಒಂದಾಗಬೇಕಿದೆ. ತಪ್ಪು ತಿಳಿವಳಿಕೆಗಳಿದ್ದರೆ ನಾವು ಪರಿಹರಿಸಿಕೊಳ್ಳುತ್ತೇವೆ ಎಂದು ಕಮಲ್ನಾಥ್ ಹೇಳಿದ್ದಾರೆ. ಕಾಂಗ್ರೆಸ್ನಿಂದ ಈ ಕ್ಷೇತ್ರದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಸ್ಪರ್ಧಿಸಿದ್ದು, ಇವರಿಗೆ ನೆರವಾಗುವ ಉದ್ದೇಶದಿಂದ ಕಾಂಗ್ರೆಸ್ ಸೇರಿದ್ದೇನೆ ಎಂದು ಲೋಕೇಂದ್ರ ಸಿಂಗ್ ಹೇಳಿಕೊಂಡಿದ್ದಾರೆ.