ಅವರ್ ಲೇಡಿ ಆಫ್ ಲೂಡ್ಸ್ ಚರ್ಚ್ ಉದ್ಘಾಟನೆ
• ಪ್ರತಿಯೊಬ್ಬರಲ್ಲೂ ಕ್ರಿಸ್ತರನ್ನು ಕಾಣಬೇಕು •ಪ್ರತಿಯೊಬ್ಬರನ್ನೂ ಗೌರವಿಸಬೇಕು • ಭಗವಂತನ ಪ್ರಾರ್ಥಿಸಲು ಪ್ರಾರ್ಥನಾ ಮಂದಿರ ಬೇಕು
Team Udayavani, May 3, 2019, 10:23 AM IST
ಹುಬ್ಬಳ್ಳಿ: ಇಲ್ಲಿನ ಮಂಟೂರ ರಸ್ತೆಯಲ್ಲಿ ಕ್ಯಾಥೋಲಿಕ್ ಸಮುದಾಯದ ನೂತನ 'ಅವರ್ ಲೇಡಿ ಆಫ್ ಲೂಡ್ಸ್' ಚರ್ಚ್
ಹುಬ್ಬಳ್ಳಿ: ಇಲ್ಲಿನ ಮಂಟೂರ ರಸ್ತೆಯ ಮಿಲ್ಲತ್ ನಗರ ಸಮೀಪ ಕ್ಯಾಥೋಲಿಕ್ ಸಮುದಾಯದ ನೂತನ ‘ಅವರ್ ಲೇಡಿ ಆಫ್ ಲೂಡ್ಸ್’ ಚರ್ಚ್ ಉದ್ಘಾಟನೆ ಗುರುವಾರ ನಡೆಯಿತು.
ಕಾರವಾರ ಬಿಷಪ್ ಮೊಸ್ಟ್ ರೆವರೆಂಡ್ ಡೆರೆಕ್ ಫರ್ನಾಂಡಿಸ್ ಚರ್ಚ್ ಉದ್ಘಾಟಿಸಿ ಮಾತನಾಡಿ, ನಾವು ಪ್ರತಿಯೊಬ್ಬರಲ್ಲೂ ಕ್ರಿಸ್ತರನ್ನು ಕಾಣಬೇಕು. ಪ್ರತಿಯೊಬ್ಬರನ್ನೂ ಗೌರವಿಸಬೇಕು ಎಂದರು.
ಭಗವಂತನ ಪ್ರಾರ್ಥನೆ ಮಾಡಲು ಪ್ರಾರ್ಥನಾ ಮಂದಿರ ಅವಶ್ಯಕತೆಯಿದೆ. ನಮ್ಮ ಮನಸ್ಸಿನ ದುಃಖಗಳನ್ನು ದೇವನ ಮುಂದೆ ಹೇಳಿಕೊಳ್ಳಲು ಪಾಪಗಳನ್ನು ಪ್ರಾಯಶ್ಚಿತ್ತ ಮಾಡಿಕೊಳ್ಳಲು ಪ್ರಾರ್ಥನಾ ಮಂದಿರಗಳು ಬೇಕು ಎಂದರು.
ಕೆಲವರು ದೇವರನ್ನು ಗುಡ್ಡಗಳಲ್ಲಿ ಹುಡುಕಿದರು, ಇನ್ನೂ ಕೆಲವರು ಗುಡುಗು-ಮಿಂಚುಗಳಲ್ಲಿ ಹುಡುಕಿದರು. ಹಲವರು ದಟ್ಟ ಕಾಡಿನಲ್ಲಿ ಹುಡುಕಿದರು. ಆದರೆ ಎಲ್ಲೂ ದೇವರು ಸಿಗಲಿಲ್ಲ. ಆದರೆ ಮನೆಯ ಕೋಣೆಯಲ್ಲಿ ಏಕಾಂಗಿಯಾಗಿ ಕುಳಿತು ಕೈಜೋಡಿಸಿ ತಲೆ ತಗ್ಗಿಸಿ ಕುಳಿತರೆ ದಯಾಮಯ ದೇವರು ನಮ್ಮೊಂದಿಗೆ ಮಾತನಾಡುತ್ತಾನೆ ಎಂದರು.
ಕ್ರಿಸ್ತನ ಪವಿತ್ರ ಪೆಟ್ಟಿಗೆ ಹಾಗೂ ಕ್ರಿಸ್ತ ಪ್ರಾಣ ತ್ಯಾಗ ಮಾಡಿದ ಶಿಲುಬೆ ನಮಗೆ ಪವಿತ್ರ. ಶಿಲುಬೆಯ ಮೇಲೆ ತಮ್ಮನ್ನು ಸಮರ್ಪಿಸಿಕೊಂಡ ಸಂದರ್ಭದಲ್ಲಿಯೂ ಏಸು ಕ್ರಿಸ್ತ, ಎಲ್ಲರ ಒಳಿತನ್ನು ಬಯಸಿದಂಥ ಮಹಾನುಭಾವರು ಎಂದು ಅಭಿಪ್ರಾಯಪಟ್ಟರು.
ನಾವೆಲ್ಲರೂ ಪವಿತ್ರಾತ್ಮನ ದೇಗುಲಗಳು. ನಮ್ಮೆಲ್ಲರ ಹೃದಯಗಳಲ್ಲಿ ಪರಮಾತ್ಮ ವಾಸ ಮಾಡುತ್ತಿದ್ದಾರೆಂಬ ನಂಬಿಕೆ ನಮ್ಮಲ್ಲಿರಬೇಕು. ನಾವೆಲ್ಲರೂ ಪವಿತ್ರಾತ್ಮರಾಗಿದ್ದರೆ, ನಮ್ಮದು ಪವಿತ್ರಾತ್ಮಭರಿತ ಸಮುದಾಯವಾಗುತ್ತದೆ ಎಂದರು.
ದೇವರು ನಮ್ಮೆಲ್ಲರಲ್ಲಿಯೂ ಇದ್ದಾರೆ. ಪ್ರಾರ್ಥನೆ ಇದ್ದಲ್ಲಿ ವಾಸ ಮಾಡುವುದಾಗಿ ಏಸುಕ್ರಿಸ್ತರೇ ಹೇಳಿದ್ದಾರೆ. ದೇವರ ಬಗ್ಗೆ ನಂಬಿಕೆ ಇದ್ದರೆ ಮಾತ್ರ ದೇವಾಲಯ ಕಟ್ಟಿದ್ದು ಸಾರ್ಥಕವಾಗುತ್ತದೆ ಎಂದು ನುಡಿದರು.
ಬೆಳಗಾವಿ ಡಯಾಸಿಸ್ ಆಡಳಿತಾಧಿಕಾರಿ ಇಜಿಬಿಯಾ ಫರ್ನಾಂಡಿಸ್, ರೆ.ಫಾ. ಹೆನ್ರಿ ಥಾಮಸ್ ಸೇರಿದಂತೆ ಹಲವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ
Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ
Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ
MUST WATCH
ಹೊಸ ಸೇರ್ಪಡೆ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ