ಧರ್ಮದಲ್ಲಿ ರಾಜಕೀಯ ಬೇಡ: ಸುಭುದೇಂದ್ರ ಶ್ರೀ
Team Udayavani, May 4, 2019, 3:01 AM IST
ಲಿಂಗಸುಗೂರು: “ಇಂದಿನ ರಾಜಕೀಯ ಗಮನಿಸಿದರೆ ಒಂದು ಪಕ್ಷದ ಮೇಲೆ ಮತ್ತೂಂದು ಪಕ್ಷ, ಒಬ್ಬ ವ್ಯಕ್ತಿ ಮೇಲೆ ಮತ್ತೂಬ್ಬ ವ್ಯಕ್ತಿ ಕೆಸರೆರಚಾಟ ನಡೆಸಿದ್ದು, ಇದು ದೇಶದ ಅಭಿವೃದ್ಧಿ, ಸಮಗ್ರತೆ, ಪ್ರಗತಿಗೆ ಪ್ರತಿಬಂಧಕವಾಗಿದೆ’ ಎಂದು ಮಂತ್ರಾಲಯ ರಾಘವೇಂದ್ರಸ್ವಾಮಿ ಮಠದ ಪೀಠಾಧಿ ಪತಿ ಶ್ರೀ ಸುಭುದೇಂದ್ರತೀರ್ಥ ಶ್ರೀಪಾದಂಗಳು ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ನ್ಯಾಯವಾದಿ ರಾಘವೇಂದ್ರ ಮುತಾಲಿಕ ಏರ್ಪಡಿಸಿದ್ದ ತುಲಾಭಾರ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, “ಸರ್ಕಾರಗಳು ವ್ಯವಸ್ಥಿತವಾದ ರೀತಿಯಲ್ಲಿ ಜನರಿಗೆ ಸುಭದ್ರ ಸರ್ಕಾರ ಒದಗಿಸುವ ಆಶ್ವಾಸನೆ ಮುಂದಿಟ್ಟು ಹೋಗಬೇಕೇ ಹೊರತು ಒಬ್ಬರ ಮೇಲೆ ಕೆಸರೆರಚಾಟ,
ಕೇವಲ ರಾಜಕೀಯವಾಗಿ ಸ್ಥಾನಮಾನ ಗಳಿಸಬೇಕೆಂಬ ಸ್ವಾರ್ಥ ಭಾವನೆ ಇಟ್ಟುಕೊಳ್ಳಬಾರದು. ರಾಜಕೀಯದಲ್ಲಿ ಧರ್ಮ ಬಂದಾಗ ಅದರ ಮೌಲ್ಯ, ಗುಣಮಟ್ಟ ಬೆಳೆಯುತ್ತದೆ. ಧರ್ಮದಲ್ಲಿ ರಾಜಕೀಯ ಬಂದಾಗ ಧರ್ಮದ ಪಾವಿತ್ರ್ಯತೆ ಮತ್ತು ಮಹತ್ವಕ್ಕೆ ಧಕ್ಕೆ ಉಂಟಾಗುತ್ತಿದೆ. ಹೀಗಾಗಿ ಧರ್ಮದಲ್ಲಿ ರಾಜಕೀಯ ಮಾಡಬಾರದು’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ
ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ
MUST WATCH
ಹೊಸ ಸೇರ್ಪಡೆ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ