ತುಕ್ಕು ಹಿಡಿದ ಶತಾಯುಷಿ ಸೇತುವೆ
Team Udayavani, May 5, 2019, 4:56 AM IST
ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 75ರ ಉಪ್ಪಿನಂಗಡಿ ಹಾಗೂ 34ನೇ ನೆಕ್ಕಿಲಾಡಿ ನಡುವಿನ ಗತಕಾಲದ ವೈಭವದ ಸೇತುವೆಯ ಸಲಕರಣೆ ತುಕ್ಕು ಹಿಡಿದು ಕಳ್ಳರ ಪಾಲಾಗುವ ಲಕ್ಷಣ ಕಾಣುತ್ತಿದೆ.
ಸುಮಾರು ನೂರು ವರ್ಷಗಳಿಂದ ಅವಧಿ ಮುಗಿದ ಮೇಲೂ ಸೇವೆ ನೀಡಿದ ಹೆಗ್ಗಳಿಕೆ ಇರುವ ಈ ಸೇತುವೆ ಬ್ರಿಟಿಷ್ ಕಾಲದ ಗ್ರಾಂಗ್ನ್ ಡೆಕಂಬಿ ಸಂಸ್ಥೆಯಿಂದ ನಿರ್ಮಾಣಗೊಂಡಿತ್ತು. ಆದರೆ ಅವಧಿ ಮುಗಿದ ಸೇವೆಯಿಂದ ಶಿಥಿಲಗೊಂಡಿರುವ ಈ ಸೇತುವೆಯಿಂದ ಘನ ವಾಹನಗಳು ಸಂಚರಿಸಲು ಅಸಾಧ್ಯವಾಗಿದೆ. ಕೇಂದ್ರ ಸರಕಾರ 20 ವರ್ಷಗಳ ಹಿಂದೆ ಬದಲಿ ನೂತನ ಸೇತುವೆ ನಿರ್ಮಾಣಗೊಳಿಸಿತ್ತು. ಇದರಿಂದ ಹಳೇ ಸೇತುವೆಯ ಸಲಕರಣೆಗಳು ಹಾಗೆಯೇ ಉಳಿದು ಸುಣ್ಣ ಬಣ್ಣವಿಲ್ಲದೆ ತುಕ್ಕು ಹಿಡಿದಿದೆ. ಇದೇ ಸೇತುವೆಯು ಬಳಕೆಯಲ್ಲಿರುವಾಗ ಪ್ರತಿ ವರ್ಷ ನಿರ್ವಹಣೆ ಮಾಡಲಾಗುತ್ತಿತ್ತು.
ಇಲಾಖೆ ಅಧಿಕಾರಿಗಳು ಈ ಶತಾಯುಷಿ ಸೇತುವೆಯನ್ನು ಉಳಿಸಿಕೊಳ್ಳಲು ಮುತುವರ್ಜಿ ವಹಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ