ಭಾರತ ಮೂಲದ ಪತ್ರಕರ್ತ ಗೊವೇಂದರ್ಗೆ 2019ರ ವಿ ಕೆ ಕೃಷ್ಣ ಮೆನನ್ ಪ್ರಶಸ್ತಿ
Team Udayavani, May 6, 2019, 4:21 PM IST
ಚಿತ್ರದಲ್ಲಿ ನಡುವಿನಲ್ಲಿ ಇರುವವರು ಭಾರತೀಯ ರಾಯಭಾರಿ ಮತ್ತು ರಾಜಕಾರಣಿ ಕೃಷ್ಣ ಮೆನನ್
ಲಂಡನ್ : ದಕ್ಷಿಣ ಆಫ್ರಿಕದಲ್ಲಿನ ಭಾರತೀಯ ಮೂಲದ ಪತ್ರಕರ್ತ ಜಿ ಡಿ ‘ರಾಬರ್ಟ್’ ಗೊವೇಂದರ್ ಅವರಿಗೆ ಬ್ರಿಟನ್ ನಲ್ಲಿ 2019ರ ವಿ ಕೆ ಕೃಷ್ಣ ಮೆನನ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಗೊವೇಂದರ್ ಅವರು ನಿರ್ವಸಾಹತೀಕೃತ ಪತ್ರಿಕೋದ್ಯಮದ ಹರಿಕಾರರಾಗಿ ನೀಡಿರುವ ಅದ್ಭುತ ಕಾಣಿಕೆಯನ್ನು ಪರಿಗಣಿಸಿ ಅವರಿಗೆ ಈ ಪ್ರಶಸ್ತಿ ಸಂದಿದೆ.
ಭಾರತೀಯ ರಾಯಭಾರಿ ಮತ್ತು ರಾಜಕಾರಣಿ ವಿ ಕೆ ಕೃಷ್ಣ ಮೆನನ್ ಅವರ 123ನೇ ಜನ್ಮ ವರ್ಷಾಚರಣೆ ಸಂದರ್ಭದಲ್ಲಿ ದಕ್ಷಿಣ ಆಫ್ರಿಕ ಸಂಜಾತ ಗೊವೇಂದರ್ ಅವರಿಗೆ ಈ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲಾಗಿದೆ.
ಪತ್ರಕರ್ತನಾಗಿ 60 ದಶಕಗಳ ಸುದೀರ್ಘ ಸೇವೆಗೈದಿರುವ ಗೊವೇಂದರ್ ಅವರು ಅಭಿಯಾನ-ಪತ್ರಕರ್ತನಾಗಿ ಪ್ರತಿಷ್ಠಿತರಾಗಿದ್ದರು. ದಕ್ಷಿಣ ಆಫ್ರಿಕದ ಬಿಳಿಯರು ಮಾತ್ರವೇ ಇರುವ ಕ್ರೀಡಾ ತಂಡಗಳಿಗೆ ಅಂತಾರಾಷ್ಟ್ರೀಯ ಬಹಿಷ್ಕಾರ ಹಾಕಬೇಕೆಂದು ಕರೆ ನೀಡಿದ್ದ ಮೊದಲ ಪತ್ರಕರ್ತ ಅವರಾಗಿದ್ದರು.