ವಿಭಿನ್ನ ಜಾತಿಯ ಸಸಿಗಳಿಂದ ನಳನಳಿಸುತ್ತಿದೆ ಬೈಕಾಡಿ ಸಸ್ಯಕ್ಷೇತ್ರ


Team Udayavani, May 7, 2019, 6:20 AM IST

sasyakashi

ಬ್ರಹ್ಮಾವರ: ಕಡುಬೇಸಗೆಯಲ್ಲೂ ಅರಣ್ಯ ಇಲಾಖೆಯ ಬೈಕಾಡಿ ಸಸ್ಯಕ್ಷೇತ್ರದಲ್ಲಿ ವಿಭಿನ್ನ ಜಾತಿಯ ಸಸಿಗಳು ನಳನಳಿಸುತ್ತಿವೆ. ಮಳೆಗಾಲದ ನಾಟಿಗಾಗಿ ಈಗಾಗಲೇ 50,000ಕ್ಕೂ ಮಿಕ್ಕಿ ಗಿಡಗಳನ್ನು ಸಿದ್ಧಗೊಳಿಸಲಾಗಿದೆ.
ಆರ್‌.ಎಸ್‌.ಪಿ.ಡಿ., ಮಗುವಿಗೊಂದು ಮರ ಶಾಲೆಗೊಂದು ವನ, ಕೆ.ಎಫ್‌.ಡಿ.ಎಫ್‌., ನಗರ ಹಸುರೀಕರಣ, ಹಸಿರು ಕರ್ನಾಟಕ, ರಸ್ತೆ ಬದಿ ನಡುತೋಪು ಮೊದಲಾದ ಯೋಜನೆಗಳಿಗೆ ಸಸಿ ತಯಾರಿಸಲಾಗಿದೆ.

ಮುಖ್ಯವಾಗಿ ಮಹಾಘನಿ, ಬೇಂಗ, ಹಲಸು, ಹೆಬ್ಬಲಸು, ಪುನರ್ಪುಳಿ, ಕಕ್ಕೆ, ಬಿಲ್ವಪತ್ರೆ, ರೆಂಜ, ವಾಟೆಹುಳಿ, ಸಾಗುವಾನಿ, ಶ್ರೀಗಂಧ, ಶಿವಾನಿ, ನಾಗಲಿಂಗಪುಷ್ಪ, ಸಂಪಿಗೆ, ಕಹಿಬೇವು, ದೂಪ, ನೇರಳೆ, ಬಾದಾಮಿ ಹೀಗೆ ಸುಮಾರು 30 ಬಗೆಯ ಗಿಡಗಳನ್ನು ಮಳೆಗಾಲದ ನಾಟಿಗೆ ತಯಾರುಗೊಳಿಸಲಾಗಿದೆ.

ಸಾರ್ವಜನಿಕರಿಗೆ ಲಭ್ಯ
ಬೈಕಾಡಿ ಸಸ್ಯಕ್ಷೇತ್ರದಲ್ಲಿ ಸಸಿಗಳು ಕನಿಷ್ಠ ದರದಲ್ಲಿ ಸಾರ್ವಜನಿಕರಿಗೆ ದೊರೆಯಲಿದೆ. ಜೂನ್‌ ಪ್ರಥಮ ವಾರದಿಂದ ವಿತರಣೆ ಆರಂಭವಾಗಲಿದೆ.

ಪ್ರೋತ್ಸಾಹಧನ
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಪ್ರೋತ್ಸಾಹಧನವೂ ದೊರೆಯಲಿದೆ. ಪ್ರೋತ್ಸಾಹಧನ ಪಡೆಯಲು ಇಚ್ಚಿಸುವವರು ಭೂಮಿಯ ಆರ್‌.ಟಿ.ಸಿ. ಜತೆಗೆ ಬ್ಯಾಂಕ್‌ ಪಾಸ್‌ಬುಕ್‌ ಪ್ರತಿ, ಭಾವಚಿತ್ರ, ಆಧಾರ್‌ಕಾರ್ಡ್‌ ನೀಡಬೇಕು.

ಬದುಕುಳಿದ ಸಸಿಗಳಿಗೆ ಮುಂದಿನ ಮೊದಲ ವರ್ಷ ತಲಾ ರೂ. 30, ಮುಂದಿನ ವರ್ಷ ಮತ್ತೆ ರೂ. 30 ಹಾಗೂ 3ನೇ ವರ್ಷ ರೂ. 40 ಸಹಾಯಧನ ಬ್ಯಾಂಕ್‌ ಖಾತೆಗೆ ಜಮೆಯಾಗಲಿದೆ. ಒಂದು ಎಕ್ರೆ ವಿಸ್ತೀರ್ಣ ಹೊಂದಿರುವವರು ವಿಭಿನ್ನ ತಳಿಯ 500 ಸಸಿ ಪಡೆಯಬಹುದು.

ಇತರ ಸಸ್ಯಕ್ಷೇತ್ರಗಳು
ಉಡುಪಿ ಜಿಲ್ಲೆಯಲ್ಲಿ ಬೈಂದೂರಿನ ಸರ್ಪನಕಟ್ಟೆ, ಕುಂದಾಪುರದ ಮಾವಿನಗುಳಿ ನೇರಳಕಟ್ಟೆ, ಶಂಕರನಾರಾಯಣ, ಹೆಬ್ರಿಯ ಮಡಾಮಕ್ಕಿ, ಕಾರ್ಕಳದ ಶಿರ್ಲಾಲಿನಲ್ಲಿ ಸಸ್ಯ ಕ್ಷೇತ್ರಗಳಿವೆ.

ಸಸಿಗಳ ಪೋಷಣೆ
ಹೊಸ ಮಣ್ಣು ಹಾಗೂ ಗೊಬ್ಬರವನ್ನು ಮಿಶ್ರಣ ಮಾಡಲಾಗುತ್ತದೆ. ಪ್ಲಾಸ್ಟಿಕ್‌ ಲಕೋಟೆಯಲ್ಲಿ ಗಿಡವನ್ನು ಮಾಡಿ ಪ್ರತಿನಿತ್ಯ ನಿರುಣಿಸಿ ಜೋಪಾನ ಮಾಡಲಾಗುತ್ತದೆ. ಕೆಲವು ತಳಿಯ ಸಸಿಗಳಿಗೆ ಒಂದು ವರ್ಷದ ಮೊದಲೇ ಬೀಜ ಹಾಕಿ ಆರೈಕೆ ಪ್ರಾರಂಭಿಸಲಾಗುತ್ತದೆ. ಆಗಸ್ಟ್‌ ಅನಂತರ ನಿರಂತರ ಅಭಿವೃದ್ದಿ ಪಡಿಸಿ ಜೂನ್‌ನಲ್ಲಿ ನಾಟಿಗೆ ಸಿದ್ಧಗೊಳ್ಳುತ್ತದೆ. ಕಡು ಬೇಸಗೆಯಾದ್ದರಿಂದ ನೀರಿನ ಅಭಾವವಿದ್ದರೂ ನಿಭಾಯಿಸಲಾಗುತ್ತಿದೆ.

ಮಾರ್ಗಸೂಚಿ
ಬ್ರಹ್ಮಾವರ ದೂಪದಕಟ್ಟೆಯಿಂದ ಹಾರಾಡಿ ಮಾರ್ಗದಲ್ಲಿ ಕೇವಲ 200 ಮೀ. ತೆರಳಿದರೆ ಬೈಕಾಡಿ ಸಸ್ಯಕ್ಷೇತ್ರ ಸಿಗುತ್ತದೆ. ರಾ.ಹೆ. 66ರ ಸಮೀಪ ದಲ್ಲಿರುವುದರಿಂದ ಗಿಡಗಳನ್ನು ಕೊಂಡುಹೋಗಲು ಸಾರ್ವಜನಿಕರಿಗೆ ಸಹಕಾರಿಯಾಗಿದೆ.

ಕಾಳಜಿ ವಹಿಸಿ
ಸಾರ್ವಜನಿಕರು ಬೆರಳೆಣಿಕೆಯ ಗಿಡಗಳನ್ನು ನಾಟಿ ಮಾಡಿದರೂ ಮುತುವರ್ಜಿ ವಹಿಸಿ ಸಾಕಾಣಿಕೆ ಮಾಡಿದರೆ ಸಾರ್ಥಕವಾಗುತ್ತದೆ. ಸಂಘ ಸಂಸ್ಥೆಗಳು ಆಸಕ್ತಿ ವಹಿಸಿ ಖಾಲಿ ಇರುವ ಜಾಗದಲ್ಲಿ ಗಿಡಗಳನ್ನು ನಾಟಿ ಮಾಡಿದರೆ ಹಸಿರು ಹೊದಿಕೆ ರಚನೆಗೆ ಅರಣ್ಯ ಇಲಾಖೆಯೊಂದಿಗೆ ಕೈ ಜೋಡಿಸಿದಂತಾಗುತ್ತದೆ.
-ಜೀವನ್‌ದಾಸ್‌ ಶೆಟ್ಟಿ, ಉಪವಲಯ ಅರಣ್ಯಾಧಿಕಾರಿ, ಬ್ರಹ್ಮಾವರ

– ಪ್ರವೀಣ್‌ ಮುದ್ದೂರು

ಟಾಪ್ ನ್ಯೂಸ್

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.