ಬಳ್ಕೂರು: ಉಪಯೋಗಕ್ಕಿಲ್ಲದೆ ನೆನಪಿನಂಚಿಗೆ ಸರಿದ ಗೋಮಾಳ
Team Udayavani, May 7, 2019, 6:10 AM IST
ಬಸ್ರೂರು: ಕುಂದಾಪುರ ತಾಲೂಕಿನ ಬಳ್ಕೂರಿನ ಸ. ನಂ.66/2 ರಲ್ಲಿ ವಿಸ್ತಾರವಾಗಿ ಹಚ್ಚ ಹಸಿರಿನಿಂದ ಹರಡಿಕೊಂಡಿದ್ದ ಗೋಮಾಳ ಈಗ ಒಣಗಿ, ಹುಲ್ಲು ಸಹ ಇಲ್ಲದೆ ಕೇವಲ ನೆನಪಿನಲ್ಲಿ ಮಾತ್ರ ಉಳಿಯುವ ಸ್ಥಿತಿಗೆ ಬಂದು ತಲುಪಿದೆ. ಈ ಪ್ರದೇಶ ಮತ್ತೆ ಮರುಜೀವ ಪಡೆಯುವುದೇ ಎಂಬ ಕಾತರ ಗ್ರಾಮಸ್ಥರದ್ದು.
ಸಾಕ್ಷಿಗಲ್ಲು
ಸುಮಾರು 90 ವರ್ಷಗಳ ಹಿಂದೆ 30 ಎಕರೆಗಳಿಗೂ ಹೆಚ್ಚು ವಿಸ್ತಾರವಾಗಿದ್ದ ಈ ಗೋಮಾಳದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಗಾಂಧಿ ರಾಮಣ್ಣ ಶೆಟ್ಟಿ ಅವರು ದನ ಕರುಗಳ ಮೈಯುಜ್ಜಲು ಹಾಕಿದ್ದ ಒಂದು ಎತ್ತರದ ಶಿಲೆಗಲ್ಲು ಮಾತ್ರ ಇಲ್ಲಿ ಉಳಿದಿದೆ.
ಉಳಿದದ್ದು 3 ಎಕರೆ
ಗೋಮಾಳ ಜಾಗದ ಬಹುತೇಕ ಕಡೆಗಳಲ್ಲಿ ಮನೆ ನಿರ್ಮಾಣವಾಗಿ ಅವರಿಗೆ ವಾಸಸ್ಥಳದ ಹಕ್ಕು ಪತ್ರವೂ ಸಿಕ್ಕಿದೆ. ಪ್ರಸ್ತುತ ಈ ಗೋಮಾಳದಲ್ಲಿ ಉಳಿದುಕೊಂಡಿರುವುದು ಕೇವಲ ಮೂರು ಎಕರೆ ಜಾಗ! ಈ ಜಾಗ ಕಂದಾಯ ಇಲಾಖೆಗೆ ಒಳಪಟ್ಟಿದೆ.
ಆಟದ ಮೈದಾನ
ಇಲ್ಲೊಂದು ವಾಲಿಬಾಲ್ ಕ್ರೀಡಾಂಗಣವಿದೆ. ಹುಡುಗರು ಸಂಜೆ ವೇಳೆ ವಾಲಿಬಾಲ್ ಆಡುತ್ತಾರೆ. ಈ ಮೈದಾನವನ್ನು ಒಂದು ಉತ್ತಮ ಕ್ರೀಡಾಂಗಣವನ್ನಾಗಿಸಬಹುದು. ಈ ಬಗೆಗೆ ಪಿಡಿಒ ಅವರಲ್ಲಿ ಮಾತನಾಡಿದರೆ ಅವರು ಈಗಾಗಲೇ ಬೇರೊಂದು ಮೈದಾನಕ್ಕೆ ಕ್ರೀಡಾಂಗಣದ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. ಇದನ್ನು ಕ್ರೀಡಾಂಗಣ ಮಾಡಲು ಅನುದಾನ ಸಾಲದು ಎನ್ನುತ್ತಾರೆ.
ಮರುಜೀವ ಸಾಧ್ಯ
ಇಲಾಖೆ ಮನಸ್ಸು ಮಾಡಿದರೆ ಈ ಜಾಗವನ್ನು ಪುನ: ಗೋಮಾಳವನ್ನಾಗಿ ಮಾಡಲು ಸಾಧ್ಯ.ಇಲ್ಲಿನ ಒಣಗಿದ ನೆಲದ ಮೇಲೆ ಉತ್ತಮವಾದ ಹುಲ್ಲಿನ ಬೀಜವನ್ನು ಹಾಕಿ ನೀರು ಬಿಟ್ಟರೆ ಅಲ್ಲಿ ಹುಲ್ಲು ಹುಟ್ಟಿ ಅವನ್ನು ಮೇಯಲು ದನ ಕರುಗಳು ಬರುತ್ತವೆ. ಸ್ಥಳೀಯಾಡಳಿತ ಈ ಬಗ್ಗೆ ಮನಸ್ಸು ಮಾಡಬೇಕು ಅಷ್ಟೆ
-ನಾಗರಾಜ ಪೂಜಾರಿ, ಸ್ಥಳೀಯ ನಿವಾಸಿ
ಕ್ರೀಡಾಂಗಣ ನಿರ್ಮಿಸಿ
ಬಳ್ಕೂರಿನಲ್ಲಿ ಈಗಾಗಲೇ 90 ದನಕರುಗಳಿವೆ. ಪ್ರತಿದಿನ 600 ಲೀಟರ್ ಹಾಲನ್ನು ಡೇರಿಯಲ್ಲಿ ತೆಗೆದುಕೊಳ್ಳುತ್ತಿದ್ದೇವೆ. ಉಳಿದಂತೆ ನೋಡಿದರೆ ಈ ಗೋಮಾಳ ಹಳೆ ಕುರುಹಿನ ನೆನಪು ಮಾತ್ರವಾಗಿ ಉಳಿದುಕೊಳ್ಳುತ್ತದೆ. ಒಂದು ಉತ್ತಮ ವಾಲಿಬಾಲ್ ಕ್ರೀಡಾಂಗಣ ನಿರ್ಮಿಸಿದರೆ ಗ್ರಾಮೀಣ ಪ್ರದೇಶದ ಉತ್ತಮ ಕ್ರೀಡಾ ಪ್ರತಿಭೆಗಳು ಬೆಳಕಿಗೆ ಬರಬಹುದು
-ನಾಗೇಶ್ ಎಸ್., ಅಧ್ಯಕ್ಷರು, ಬಳ್ಕೂರು ಹಾ.ಉ. ಸಂಘ, ಬಳ್ಕೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ
Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್ ಪಂತ್
Amruthapura: ಅಮೃತಪುರವೆಂಬ ಅದ್ಭುತ ತಾಣ