ಜ್ಯೋತಿಷಿ ದ್ವಾರಕನಾಥ್ ಜೊತೆ ಸಿಎಂ ಗುಪ್ತ ಮಾತುಕತೆ; ವಿಶೇಷ ಸಲಹೆ
ಕುಕ್ಕೆ ದೇಗುಲದ ಚಿನ್ನದ ರಥ ನಿರ್ಮಾಣದ ಕುರಿತೂ ಚರ್ಚೆ
Team Udayavani, May 10, 2019, 4:12 PM IST
ಬೆಂಗಳೂರು : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರೆಸಾರ್ಟ್ ವಾಸ್ತವ್ಯದಿಂದ ಬೆಂಗಳೂರಿಗೆ ವಾಪಾಸಾಗಿದ್ದು ಶುಕ್ರವಾರ ಖ್ಯಾತ ಜ್ಯೋತಿಷಿ ದ್ವಾರಕನಾಥ್ ಅವರ ನಿವಾಸದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಹತ್ವದ ಸಲಹೆ ಪಡೆದಿದ್ದಾರೆ.
ಮಡಿಕೇರಿಯ ಇಬ್ಬನಿ ರೆಸಾರ್ಟ್ನಲ್ಲಿ ತಂಗಿದ್ದ ಸಿಎಂ ಕುಮಾರಸ್ವಾಮಿ ಅವರು ಬೆಂಗಳೂರಿನ ಆರ್.ಟಿ.ನಗರದಲ್ಲಿರುವ ಗುರೂಜಿ ನಿವಾಸಕ್ಕೆ ಬಂದು 1 ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು.
ಮಹತ್ವದ ಸಲಹೆ
ಕುಕ್ಕೆ ಸುಬ್ರಹ್ಮಣ್ಯ ದೇಗುಲದಚಿನ್ನದ ರಥಕ್ಕೆ ಸರ್ಕಾರದ ಹಣ ಬಳಕೆ ಮಾಡಬೇಡಿ, ಬದಲಾಗಿ ಭಕ್ತರಿಂದ ದೇಣಿಗೆ ಮೂಲಕ ಪಡೆದು ರಥ ನಿರ್ಮಿಸಿ ಎಂದು ದ್ವಾರಕನಾಥ್ ಗುರೂಜಿ ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಚಿನ್ನದ ರಥ ಅರ್ಪಣೆಗೆ ಸಂಬಂಧಪಟ್ಟಂತೆ 80 ಕೋಟಿ ರೂ.ಪರಿಷ್ಕೃತ ಅಂದಾಜು ಪ್ರಸ್ತಾವಕ್ಕೆ ರಾಜ್ಯ ಸಚಿವ ಸಂಪುಟ ಸಭೆ ಗುರುವಾರಒಪ್ಪಿಗೆ ನೀಡಿದೆ.
ಮಾಧ್ಯಮಗಳನ್ನು ತಡೆದ ಪೊಲೀಸರು
ಸಿಎಂ ಎಚ್ಡಿಕೆ ಅವರು ಗುರೂಜಿ ಭೇಟಿಯಾಗುವ ವೇಳೆ ಮಾಧ್ಯಮ ಪ್ರತಿನಿಧಿಗಳನ್ನು ಪೊಲೀಸರು ತಡೆದಿದ್ದಾರೆ. ಈ ಬಗ್ಗೆ ದ್ವಾರಕನಾಥ್ ಗುರೂಜಿ ಸಿಎಂ ನಿರ್ಗಮನದ ಬಳಿಕ ಸುದ್ದಿಗೋಷ್ಠಿ ನಡೆಸಿ ಕ್ಷಮಾಪಣೆ ಕೇಳಿದ್ದಾರೆ. ನಿಮ್ಮನ್ನು ಧಿಕ್ಕರಿಸಬೇಕೆಂದು ಇರಲಿಲ್ಲ ಎಂದರು. ನಮ್ಮ ಕೈಯಲ್ಲಿ ಆದಷ್ಟು ಮಾರ್ಗದರ್ಶನ ಮಾಡುವವರು ನಾವು ಎಂದು ಗುರೂಜಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್ ತೀರ್ಪು