ನೀರಿಗೆ ದಾರಿ: ಮುಂದುವರಿದ ಶ್ರಮದಾನ
ಬಜೆ: ಸತತ ಮೂರನೇ ದಿನವೂ ತಡೆ ತೆರವು ಕಾರ್ಯ
Team Udayavani, May 12, 2019, 6:00 AM IST
ಹಿಟಾಚಿಯ ಮೂಲಕ ಬಂಡೆ ಒಡೆಯುತ್ತಿರುವುದು.
ಉಡುಪಿ: ಬಜೆ ಅಣೆಕಟ್ಟೆಗೆ ನೀರು ಹರಿಯಲು ತಡೆಯಾಗಿರುವ ಕಲ್ಲು, ಹೂಳನ್ನು ಶ್ರಮದಾನದ ಮೂಲಕ ತೆರವುಗೊಳಿಸುವ ಕೆಲಸ ಶನಿವಾರವೂ ನಡೆಯಿತು.
ಶಾಸಕ ಕೆ. ರಘುಪತಿ ಭಟ್ ಅವರ ನೇತೃತ್ವ ದಲ್ಲಿ ಮೇ 9ರಂದು ಆರಂಭಗೊಂಡಿರುವ ಶ್ರಮದಾನ ಶನಿವಾರ 3ನೇ ದಿನ ಪೂರೈಸಿತು. ಶಾಸಕರೇ ಸ್ವತಃ ಹಾರೆಯನ್ನು ಹಿಡಿದು ಶ್ರಮದಾನದಲ್ಲಿ ತೊಡಗಿಸಿಕೊಂಡಿದ್ದಾರೆ. ಸಾರ್ವಜನಿಕರು, ನಗರಸಭಾ ಸದಸ್ಯರು, ಪಕ್ಷದ ಕಾರ್ಯಕರ್ತರು ಕೂಡ ಕೈ ಜೋಡಿಸಿದ್ದು ನೀರು ಹರಿಸಲು ‘ಭಗೀರಥ’ ಪ್ರಯತ್ನ ಮುಂದುವರಿಸಿದ್ದಾರೆ.
2 ಕಿ.ಮೀ. ದೂರಕ್ಕೆ
ಕಲ್ಲುಗಳನ್ನು ಒಡೆಯಲು ಹಿಟಾಚಿ/ಕಂಪ್ರಸರ್ ಬಳಸಲಾಗುತ್ತಿದೆ. ಒಡೆದ ಸಣ್ಣ ಸಣ್ಣ ಬಂಡೆಕಲ್ಲುಗಳನ್ನು ಶ್ರಮದಾನದ ಮೂಲಕ ಬದಿಗೆ ಸರಿಸಲಾಗುತ್ತಿದೆ. ಶ್ರಮದಾನ ಬಜೆ ಡ್ಯಾಂನಿಂದ ಸುಮಾರು 2 ಕಿ.ಮೀ. ದೂರಕ್ಕೆ ಸಾಗಿದೆ. ಶನಿವಾರ ನೂರಕ್ಕೂ ಅಧಿಕ ಮಂದಿ ಪಾಲ್ಗೊಂಡರು.’ರವಿವಾರ ಕೂಡ ಶ್ರಮದಾನ ಮುಂದುವರಿಯಲಿದೆ’ ಎಂದು ಶಾಸಕರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ
Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್
Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ ಕೊಡುಗೆ
Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್ ವಾಹನ ಅಪಘಾತ
MUST WATCH
ಹೊಸ ಸೇರ್ಪಡೆ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ