ಶಂಕರರಾಯನ ಕೆರೆಯಲ್ಲಿ ವಿಹರಿಸುತ್ತಿದ್ದ ಪಕ್ಷಗಳಿಗೂ ತಟ್ಟಿದೆ ಬರ ಬಿಸಿ

ಕೃಷ್ಣಾ ಕಾಲುವೆ ಮೂಲಕ ನೀರು ತುಂಬುವ ಯೋಜನೆ ರೂಪಿಸಲು ಆಗ್ರಹ

Team Udayavani, May 12, 2019, 11:35 AM IST

11-March-11

ಶಹಾಪುರ: ಸಂಪೂರ್ಣ ಬತ್ತಿದ ಶಂಕರರಾಯನ ಕೆರೆ.

ಶಹಾಪುರ: ಚಳಿಗಾಲ ಮುಗಿಯುತ್ತಿದ್ದಂತೆ ಬೇಸಿಗೆ ಆರಂಭದಲ್ಲಿ ಸಗರ ಗ್ರಾಮದ ಶಂಕರರಾಯನ ಕೆರೆಗೆ ಆಗಮಿಸಿ ವಿಹರಿಸುತ್ತಿದ್ದ ವಿವಿಧ ಪಕ್ಷಿಗಳಿಗೆ ಈಗ ಬರದ ಬಿಸಿ ತಟ್ಟಿದೆ.

ಪ್ರತಿ ವರ್ಷ ವಿವಿಧ ತಳಿಯ ರಂಗು ರಂಗಿನ ಪಕ್ಷಿಗಳು ಸಾಲು ಸಾಲಾಗಿ ಆಗಮಿಸುತ್ತಿದ್ದವು. ಕೆರೆ ದಡದಲ್ಲಿ ಪಕ್ಷಿಗಳ ಕಲರವ, ಅವುಗಳ ಸ್ವಚ್ಛಂದ ಹಾರಾಟ ನೋಡಲು ಎರಡು ಕಣ್ಣು ಸಾಲದಾಗುತ್ತಿತ್ತು. ಆದರೆ ಈಗ ಅಂತಹ ಸುಂದರ ದೃಶ್ಯ ಕಾಣಸಿಗುತ್ತಿಲ್ಲ.

ಬಿಸಿಲ ಬೇಗೆಗೆ ಇಡೀ ಕೆರೆ ಬಾಯ್ತೆರೆದು ನಿಂತಿದೆ. ಹನಿ ನೀರಿಲ್ಲದೆ ಜೀವ ಸಂಕುಲ ಪರದಾಡುವಂತಾಗಿದೆ.

ಜಲಚರ ಪ್ರಾಣಿಗಳು, ಕೀಟಗಳು ನೀರಿಲ್ಲದೆ ಬಿಸಿಲಿಗೆ ಸಾವನ್ನಪ್ಪಿವೆ. ಪಕ್ಷಿ ಸಂಕುಲ ಕಣ್ಮರೆಯಾಗಿದೆ. ಕೆಲವು ಪಕ್ಷಿಗಳು ಸಹ ನೀರು ಆಹಾರವಿಲ್ಲದೆ ಸತ್ವ ಕಳೆದುಕೊಂಡು ಮೃತಪಟ್ಟಿವೆ ಎನ್ನುತ್ತಾರೆ ಗ್ರಾಮಸ್ಥರು. ಇದೇ ಪ್ರಥಮ ಬಾರಿಗೆ ಇಂತಹ ಬರ ಆವರಿಸಿದೆ. ಇದಕ್ಕೂ ಮೊದಲು ಶಂಕರರಾಯನ ಕೆರೆಯಲ್ಲಿ ನೀರು ಇರುತ್ತಿತ್ತು. ಜಲಚರಗಳು ಮತ್ತು ಪ್ರಾಣಿ ಪಕ್ಷಿಗಳಿಗೆ ಇದು ರಮಣೀಯ ತಾಣವಾಗಿದೆ. ಬೇರಡೆಯಿಂದ ಬರುವ ವಿವಿಧ ತಳಿಯ ಸಾವಿರಾರು ಪಕ್ಷಿಗಳಿಗೆ ಬೇಸಿಗೆ ಮುಗಿಯವವರಿಗೆ ವಾಸಿಸುವ ಮತ್ತು ಸಂತಾನೋತ್ಪತ್ತಿಗೆ ಶಂಕರರಾಯನ ಕೆರೆ ಉತ್ತಮ ವಾತಾವರಣ ಹೊಂದಿದ ತಾಣವಾಗಿತ್ತು. ಸುರಪುರ ತಾಲೂಕಿನಲ್ಲಿರುವ ಬೋನಾಳ ಪಕ್ಷಿಧಾಮಕ್ಕಿಂತಲೂ ಇಲ್ಲಿ ಹೆಚ್ಚಿನ ವಿವಿಧ ತಳಿಯ ಸುಂದರ ಪಕ್ಷಗಳು ವಾಸವಿದ್ದವು. ಪಕ್ಷಧಾಮವಾಗಿ ಇದನ್ನು ರೂಪಿಸಬೇಕು ಎಂದು ಹಲವರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರು. ಸದ್ಯ ಕೆರೆ ಸಂಪೂರ್ಣ ಬತ್ತಿದ್ದು, ಹನಿ ನೀರು ಇಲ್ಲದೆ ಜೀವ ಸಂಕುಲ ಕಂಗಲಾಗಿದೆ. ಜಿಲ್ಲಾಡಳಿತ ಕೆರೆ ಹೂಳು ತೆಗೆಸಬೇಕು. ನಂತರ ಕೃಷ್ಣಾ ಕಾಲುವೆ ಮೂಲಕ ಕೆರೆಗೆ ನೀರು ತುಂಬುವ ಯೋಜನೆ ರೂಪಿಸುವ ಮೂಲಕ ಜೀವ ಸಂಕುಲ ಉಳಿವಿಗೆ ಅನುಕೂಲ ಕಲ್ಪಿಸಬೇಕು. ಪ್ರತಿ ವರ್ಷ ವಲಸೆ ಬರುವ ಪಕ್ಷಿಗಳು ವಾಸಿಸಲು ನೀರು ತುಂಬುವ ಮೂಲಕ ಅನುಕೂಲ ಕಲ್ಪಿಸಬೇಕು ಎಂದು ಗ್ರಾಮದ ಮಂಜುನಾಥ ಬಿರಾದಾರ ಮನವಿ ಮಾಡಿದ್ದಾರೆ.

ಗೋವಿಂದರಾಜು ಕಳವಳ: ಸಗರ ಶಂಕರರಾಯನ ಕೆರೆಗೆ ಪ್ರತಿ ವರ್ಷ ಬಣ್ಣ ಬಣ್ಣದ ಪಕ್ಷಿಗಳು ಬರುತ್ತವೆ ಎಂಬ ಮಾಹಿತಿ ಪಡೆದು ಎರಡು ವರ್ಷದಿಂದ ಹಿಂದೆ ಇಲ್ಲಿಗೆ ಆಗಮಿಸಿ ಸುಂದರ ಚಿತ್ರಗಳನ್ನು ಸೆರೆ ಹಿಡಿದಿದ್ದ ಮತ್ತು ಕರ್ನಾಟಕದ ಪ್ರಸಿದ್ಧ ಛಾಯಾಚಿತ್ರಗಾರರಲ್ಲಿ ಒಬ್ಬರಾದ ಚಿತ್ರದುರ್ಗದ ನಿಸರ್ಗ ಗೋವಿಂದರಾಜು ಸಗರ ಶಂಕರರಾಯನ ಕೆರೆ ಬತ್ತಿರುವ ಸುದ್ದಿ ಕೇಳಿ ಪಕ್ಷಿಗಳ ಕಣ್ಮರೆ ವಿಷಯ ತಿಳಿದು ಕಳವಳ ವ್ಯಕ್ತಪಡಿಸಿದರು. ಎಲ್ಲೂ ಸಿಗದ ಪಕ್ಷಿಗಳ ಛಾಯಚಿತ್ರಗಳನ್ನು ತೆಗೆದುಕೊಂಡು ಬಂದಿದ್ದೆ. ನನ್ನ ಕ್ಯಾಮೆರಾದಲ್ಲಿ ಹಲವು ಪಕ್ಷಿಗಳು ಸೆರೆಯಾಗಿವೆ. ಪಕ್ಷಿಗಳ ಕಲರವ ಅಲ್ಲಿತ್ತು. ಈಗ ಕೆರೆ ಸಂಪೂರ್ಣ ಬತ್ತಿರುವ ಸುದ್ದಿ ಕೇಳಿ ಮನಸ್ಸು ತಳಮಳಗೊಂಡಿದೆ. ಅಲ್ಲಿದ್ದ ಸುಂದರ ರೂಪದ ಪಕ್ಷಿ ಸಂಕುಲ ಎಲ್ಲಿಗೆ ತೆರಳಿತು. ಬದುಕಿದವೋ ಏನಾದವು ಎಂಬ ಯೋಚನೆ ತಲೆಯಲ್ಲಿ ಗಿರಿಕಿ ಹೊಡೆಯುತ್ತಿದೆ. ಬತ್ತಿದ ಕೆರೆ ಚಿತ್ರ ನೋಡಿ ದಂಗಾದೆ ಎಂದು ಕಳವಳ ವ್ಯಕ್ತಪಡಿಸಿದರು.

ಟಾಪ್ ನ್ಯೂಸ್

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Voters: ಮತ್ತೆ ದಾಖಲೆ ಬರೆದ ಹೊಸಕೋಟೆ ಕ್ಷೇತ್ರದ ಮತದಾರರು

Voters: ಮತ್ತೆ ದಾಖಲೆ ಬರೆದ ಹೊಸಕೋಟೆ ಕ್ಷೇತ್ರದ ಮತದಾರರು

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

4

ವಿಚ್ಛೇದನ ನೀಡದಿದ್ದರೆ ತಲೆಯನ್ನು ಕಡಿದು ಕುಕ್ಕರ್‌ನಲ್ಲಿ ಬೇಯಿಸುವೆ ಎಂದ ಪತಿ ವಿರುದ್ಧ FIR

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

MP Tejaswi Surya: ಸಂಸದ ತೇಜಸ್ವಿ ಸೂರ್ಯ ವಿರುದ್ಧ ದೂರು

MP Tejaswi Surya: ಸಂಸದ ತೇಜಸ್ವಿ ಸೂರ್ಯ ವಿರುದ್ಧ ದೂರು

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Voters: ಮತ್ತೆ ದಾಖಲೆ ಬರೆದ ಹೊಸಕೋಟೆ ಕ್ಷೇತ್ರದ ಮತದಾರರು

Voters: ಮತ್ತೆ ದಾಖಲೆ ಬರೆದ ಹೊಸಕೋಟೆ ಕ್ಷೇತ್ರದ ಮತದಾರರು

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.