ಕೊಲ್ಲೂರು – ನಾಗೋಡಿ ಘಾಟಿ ದುರಸ್ತಿಗಿನ್ನೂ ಕೂಡಿ ಬಂದಿಲ್ಲ ಸಮಯ!
Team Udayavani, May 13, 2019, 6:30 AM IST
ಕುಂದಾಪುರ : ಆಗುಂಬೆ ಹಾಗೂ ಹುಲಿಕಲ್ ಘಾಟಿ ಬಳಿಕ ಮಲೆನಾಡು ಶಿವಮೊಗ್ಗವನ್ನು ಸಂಪರ್ಕಿಸುವ ನಾಗೋಡಿ ಘಾಟಿಯ ಹಲವೆಡೆಗಳಲ್ಲಿ ಹೊಂಡ – ಗುಂಡಿಗಳು ಕಾಣಿಸಿಕೊಂಡಿದ್ದು, ಮಳೆ ಗಾಲಕ್ಕೂ ಮುನ್ನ ಎಚ್ಚೆತ್ತುಕೊಳ್ಳದಿದ್ದರೆ, ಅನಾಹುತ ಆಹ್ವಾನಿಸುವಂತಿದೆ.
4 ವರ್ಷಗಳ ಹಿಂದೆ ಈ ಘಾಟಿಯಲ್ಲಿ 10 ಕೋ.ರೂ. ವೆಚ್ಚದಲ್ಲಿ ಸುಮಾರು 7 ಕಿ.ಮೀ. ರಸ್ತೆ ಕಾಂಕ್ರೀಟಿಕರಣಗೊಂಡಿತ್ತು. ಈ ಘಾಟಿ ಒಟ್ಟು 14 ಕಿ.ಮೀ. ಇದೆ. ಆದರೆ ಈಗ ಹಲವೆಡೆಗಳಲ್ಲಿ ಮಾರ್ಗ ಮಧ್ಯೆಯೇ ದೊಡ್ಡ ಹೊಂಡ, ಗುಂಡಿಗಳು ಕಾಣಿಸಿಕೊಂಡಿದೆ. ಮತ್ತೆ ಕೆಲವೆಡೆಗಳಲ್ಲಿ ತಡೆಗೋಡೆ ಗಳಿಗೆ ವಾಹನಗಳು ಢಿಕ್ಕಿಯಾಗಿ ಮುರಿದು ಬಿದ್ದಿದೆ.
ಹೆಚ್ಚಿದ ವಾಹನಗಳ ಒತ್ತಡ
ಆಗುಂಬೆ ಘಾಟಿ ದುರಸ್ತಿ ಕಾಮಗಾರಿ ನಡೆಯುತ್ತಿದೆ. ಇದರಿಂದ ಉಡುಪಿಯಿಂದ ಶಿವಮೊಗ್ಗ ಕಡೆಗೆ ತೆರಳುವ ಎಲ್ಲ ವಾಹನಗಳು ಹೊಸಂಗಡಿ ಮೂಲಕ ಬಾಳೇಬರೆ ಘಾಟಿ ಅಥವಾ ಕೊಲ್ಲೂರು ಮೂಲಕನಾಗೋಡಿ ಘಾಟಿಯಾಗಿ ಸಂಚರಿ ಸುತ್ತಿದ್ದು ವಾಹನ ದಟ್ಟನೆ ಹೆಚ್ಚಿದೆ. ಘಾಟಿಯ ತಿರುವುಗಳಲ್ಲಿ ಮರಗಳ ಕೊಂಬೆ ಗಳು ರಸ್ತೆಗೆ ತಾಗಿ ಕೊಂಡಂತಿದ್ದು, ಸವಾರರು ಎಚ್ಚರಿಕೆ ಯಿಂದ ವಾಹನ ಚಲಾಯಿಸುವಂತಾಗಿದೆ.
ಅಲ್ಲಲ್ಲಿ ಪೊದೆಗಳು ಬೆಳೆದು ನಿಂತಿದ್ದು, ಇದು ರಾತ್ರಿ ವೇಳೆ ವಾಹನ ಸಂಚಾರಕ್ಕೆ ಅಪಾಯವನ್ನು ತರುವಂತಿದೆ.
ಕೊಲ್ಲೂರು – ಸಿಗಂದೂರು ಸಂಪರ್ಕ ಸೇತು
ಕೊಲ್ಲೂರು ದೇವಸ್ಥಾನಕ್ಕೆ ತೆರಳಲು ಶಿವಮೊಗ್ಗಕ್ಕಿರುವ ಹತ್ತಿರದ ಮಾರ್ಗ ನಾಗೋಡಿ ಘಾಟಿ. ಹೊನ್ನಾಳಿ – ಬೈಂದೂರು ರಾಜ್ಯ ಹೆದ್ದಾರಿಯಲ್ಲಿರುವ ಬರುವ ಈ ಘಾಟಿ ಮೂಲಕವೇ ಕೊಲ್ಲೂರು ಮಾತ್ರವಲ್ಲದೆ, ಕೊಡಚಾದ್ರಿಗೂ ಸಂಪರ್ಕ ಸಾಧ್ಯ. ರಾ.ಹೆದ್ದಾರಿಯಾಗಿಯೂ ಮೇಲ್ದರ್ಜೆಗೇರಿದೆ.
ಕೊಲ್ಲೂರಿನಿಂದ ಸಿಗಂದೂರಿಗೂ ಇದೇ ಹತ್ತಿರದ ಮಾರ್ಗ. ಕೊಲ್ಲೂರಿನಿಂದ ಶಿವಮೊಗ್ಗ, ಬೆಂಗಳೂರಿಗೆ ಇದೇ ಘಾಟಿ ಮೂಲಕವಾಗಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ.
ಯೋಜನೆ ಸಿದ್ಧಪಡಿಸಲಾಗುವುದು
ಘಾಟಿಯ ಸೈಡ್ವಾಲ್ಗಳು ಕುಸಿದಿರುವ ಬಗ್ಗೆ, ರಸ್ತೆಯ ಮಧ್ಯೆ ಬಿದ್ದಿರುವ ಹೊಂಡ – ಗುಂಡಿಗಳ ಬಗ್ಗೆ ಪರಿಶೀಲಿಸಿ, ಅದರ ದುರಸ್ತಿ ಅಥವಾ ಈ ಬಾರಿಯ ಮಳೆಗಾಲಕ್ಕೂ ಮುನ್ನ ತೇಪೆ ಹಾಕುವ ಕಾಮಗಾರಿ ಕುರಿತಂತೆ ಯೋಜನೆ ರೂಪಿಸಲಾಗುವುದು.
-ರವಿ ಬಿ., ಎಇಇ, ರಾಷ್ಟಿÅàಯ ಹೆದ್ದಾರಿ ಶೃಂಗೇರಿ ಉಪ ವಿಭಾಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Water scarcity; ಮಂಗಳೂರು ನಗರಕ್ಕೆ ಎರಡು ದಿನಕ್ಕೊಮ್ಮೆ ನೀರು
Prajwal Case; ಮೊದಲು ರಾಹುಲ್ ಗಾಂಧಿಗೆ ನೋಟಿಸ್ ಕೊಡಬೇಕು: ಎಚ್ ಡಿಕೆ ಆಗ್ರಹ
Pakistan ಜಿಂದಾಬಾದ್ ಅಂದವರನ್ನು ಡಿಶ್ಯುಂ ಡಿಶ್ಯುಂ ಎಂದು ಶೂಟ್ ಮಾಡಬೇಕು: ಜಮೀರ್
Chikkodi:ಅಮಿತ್ ಶಾ ಸಮ್ಮುಖದಲ್ಲಿ ವಿವೇಕರಾವ್ ಪಾಟೀಲ ಬಿಜೆಪಿ ಸೇರ್ಪಡೆ
Bommai Interview: “ನೀರಾವರಿ-ಕೈಗಾರಿಕಾ ಬೆಳವಣಿಗೆ ಜೊತೆ ಆರ್ಥಿಕಾಭಿವೃದ್ಧಿಗೆ ಆದ್ಯತೆ’