ಕೆದಿಲ: ವೃದ್ಧ ದಂಪತಿಯನ್ನು ಹೊರದಬ್ಬಿ ಮನೆ ಕೆಡವಿದ ಮಕ್ಕಳು
Team Udayavani, May 13, 2019, 6:10 AM IST
ಕಬಕ: ವೃದ್ಧ ದಂಪತಿಯನ್ನು ಹೊರದಬ್ಬಿ, ಅವರು ವಾಸವಿದ್ದ ಮನೆಯನ್ನು ಮಕ್ಕಳೇ ಹಿಟಾಚಿ ಮೂಲಕ ಕೆಡವಿದ ಘಟನೆ ಕೆದಿಲ ಗ್ರಾಮದ ಬೀಟಿಗೆಯಲ್ಲಿ ನಡೆದಿದೆ.
ಮನೆಯಿಂದ ಹೊರದಬ್ಬಲ್ಪಟ್ಟು ಗಾಯಗೊಂಡಿರುವ ಕೆದಿಲ ಗ್ರಾಮದ ಬೀಟಿಗೆ ಆರ್.ಕೆ. ಮಂಝಿಲ್ ನಿವಾಸಿ ಮಹಮ್ಮದ್ (75) ಮತ್ತು ಅವರ ಪತ್ನಿ ಖತೀಜಮ್ಮ (72) ಅವರು ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿ¨ªಾರೆ.
ಘಟನೆ ವಿವರ
ಬೀಟಿಗೆಯ 22 ಸೆಂಟ್ಸ್ ಜಾಗದಲ್ಲಿ ಮಹಮ್ಮದ್ ದಂಪತಿ ವಾಸವಿದ್ದಾರೆ. ಅವರಿಗೆ ನಾಲ್ವರು ಪುತ್ರರು ಮತ್ತು ಐವರು ಪುತ್ರಿಯರು. ಇವರ 2ನೇ ಪುತ್ರ ಇಸ್ಮಾಯಿಲ್ ಕಾರ್ಯನಿಮಿತ್ತ ಹೊರಗೆ ಹೋಗಿದ್ದರು. ಈ ಸಂದರ್ಭದಲ್ಲಿ ದಂಪತಿಯ 3ನೇ ಪುತ್ರ, ಬುಡೋಳಿಯಲ್ಲಿರುವ ತಾಜುದ್ದೀನ್, ಆತನ ಪತ್ನಿ ಯಾಸೀರಾ, 4ನೇ ಪುತ್ರ ಕಬಕ ನಿವಾಸಿ ಸಂಶುದ್ದೀನ್, ಆತನ ಪತ್ನಿ ಫಾತಿಮಾ, ವೃದ್ಧ ದಂಪತಿಯ ಪುತ್ರಿ ಐಸಮ್ಮ ಮತ್ತು ಆಕೆಯ ಗಂಡ ಮಹಮ್ಮದ್ ಹಾಗೂ ಪುತ್ರ ಹಾರಿಸ್ ಅವರು 2 ಕಾರು ಮತ್ತು ಬೈಕ್ನಲ್ಲಿ ಏಕಾಏಕಿ ಬಂದು ಹಿಟಾಚಿಯಿಂದ ಮನೆಯನ್ನು ಕೆಡವಲು ಮುಂದಾದರು. ಆಗ ಮನೆಯಲ್ಲಿದ್ದ ವೃದ್ಧರನ್ನು ಬಲವಂತವಾಗಿ ಹೊರಗೆ ದಬ್ಬಿದರು. ಕೂಡಲೇ ವೃದ್ಧ ಮಹಮ್ಮದ್ ಅವರು ಘಟನೆ ಕುರಿತು ಪುತ್ರ ಇಸ್ಮಾಯಿಲ್ಗೆ ತಿಳಿಸಿದರು. ಬಳಿಕ ಪೊಲೀಸರು ಸ್ಥಳಕ್ಕೆ ಬಂದು ಹಿಟಾಚಿ ಕೆಲಸವನ್ನು ನಿಲ್ಲಿಸಿ¨ªಾರೆ.
ಜಾಗದ ವಿಚಾರಕ್ಕೆ ಸಂಬಂಧಿಸಿ ಒಡಹುಟ್ಟಿದವರು ಈ ರೀತಿ ಮಾಡಿªಾರೆಂದು ದಂಪತಿಯ ಪುತ್ರ ಇಸ್ಮಾಯಿಲ್ ಆರೋಪಿಸಿ¨ªಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
State Government ದಿವಾಳಿ, ಬರ ಪರಿಹಾರ ನೀಡಲು ಹಣ ಇಲ್ಲ: ಯಡಿಯೂರಪ್ಪ
Prajwal Case ಬಳಿಕ ಜೆಡಿಎಸ್ 15 ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಆಸಕ್ತಿ: ಎಂ.ಬಿ.ಪಾಟೀಲ್
Knee: ಮೊಣಗಂಟು ಸಮಸ್ಯೆ: ನಿಮ್ಮ ರೋಗಿಗಳಿಗೆ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವುದು ಹೇಗೆ?
ಪ್ರಜ್ವಲ್ ಪ್ರಕರಣವನ್ನು ವೈಯಕ್ತಿಕ ಎಂದ ಅಮಿತ್ ಶಾ ಕ್ಷಮೆ ಕೇಳಬೇಕು: ಸುಪ್ರಿಯಾ ಶ್ರಿನೇಟ್
Siddaramaiah ಚುನಾವಣೆ ನಂತರ ನಮ್ಮೊಂದಿಗೆ ಬರುತ್ತಾರೆ: ರಮೇಶ ಜಾರಕಿಹೊಳಿ