ಮಂಗಳೂರು: ನಾಪತ್ತೆಯಾಗಿದ್ದ ವೃದ್ಧ ಸೇತುವೆಯಡಿ ಶವವಾಗಿ ಪತ್ತೆ
Team Udayavani, May 15, 2019, 4:24 PM IST
ಮಂಗಳೂರು: 2 ದಿನಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿತೊಕ್ಕೊಟ್ಟುವಿನ ನೇತ್ರಾವತಿ ನದಿಗೆ ಅಡ್ಡಲಾಗಿರುವ ಸೇತುವೆ ಬಳಿ ಶವವಾಗಿ ಪತ್ತೆಯಾಗಿದ್ದಾರೆ.
ಕೋಟೆಕಾರ್ ಬಳಿಯ ಮಾಡೂರಿನಸುಮಾರು 70 ರ ಹರೆಯದ ಲೋಕಯ್ಯ ಶವವಾಗಿ ಪತ್ತೆಯಾಗಿದ್ದಾರೆ.
ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗಿದೆ.
ಶವ ಕೊಳೆಯ ಸ್ಥಿತಿಯಲ್ಲಿ ಪತ್ತೆಯಾಗಿದ್ದುಮುಖದ ಗುರುತು ಪತ್ತೆಹಚ್ಚುವುದು ಕಷ್ಟವಾಗಿತ್ತು. ಶವವನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.