ತಂಪು ಬಾಟಲಿ ನೀರಿನ ಹೆಸರಲ್ಲಿ ಸುಲಿಗೆ ದಂಧೆ


Team Udayavani, May 16, 2019, 10:08 AM IST

Udayavani Kannada Newspaper

ವಾಡಿ: ಜಲ ಕ್ರಾಂತಿಯ ಕಾಲವೇ ಬೇಸಿಗೆಯಾದರೆ, ಜನರ ಬಾಯಾರಿಕೆಯೇ ಬಾಟಲಿ ನೀರಿನ ಕಂಪನಿಗಳಿಗೆ ಬಂಡವಾಳ. ಅಂತರ್ಜಲ ಬತ್ತಿದ್ದರಿಂದ ಉಂಟಾದ ನೀರಿನ ಬವಣೆ ಸಂದರ್ಭವನ್ನೇ ಬಳಸಿಕೊಳ್ಳುತ್ತಿರುವ ನೀರು ಮಾರಾಟಗಾರರು, ದುಪ್ಪಟ್ಟು ದರ ವಸೂಲಿ ಮಾಡುವ ಮೂಲಕ ಗ್ರಾಹಕರ ಸುಲುಗೆಗೆ ನಿಂತಿದ್ದಾರೆ.

ಕಾಲ ಬದಲಾಗುವುದನ್ನೇ ಕಾಯುತ್ತ ಕುಳಿತಿದ್ದ ನೀರು ದಂಧೆಕೋರರು, ಶುದ್ಧ ಮಿನಿರಲ್ ವಾಟರ್‌ ಹೆಸರಿನಲ್ಲಿ ಬಾಟಲಿಗೆ ನೀರು ತುಂಬಿ ಪಟ್ಟಣದ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದಾರೆ. ಪ್ರಸಕ್ತ ಸಾಲಿನ ಫೆಬ್ರುವರಿ, ಮಾರ್ಚ್‌, ಏಪ್ರಿಲ್ ಹಾಗೂ ಮೇ ತಿಂಗಳು ಪುರ್ತಿ ಮಾರುಕಟ್ಟೆಯಲ್ಲಿ ಅಸಲಿ ಕಂಪನಿಗಳ ಜತೆಗೆ ನಕಲಿ ನೀರಿನ ಕಂಪನಿಗಳ ನೀರು ಜನರ ಗಂಟಲಿಗೆ ಇಳಿದಿದೆ. 10ರೂ.ಗೆ (ಒಂದು ಲೀಟರ್‌) ಸಿಗುವ ಬಾಟಲಿ ನೀರು 20ರೂ.ಗೆ ಮತ್ತು 15ರೂ.ಗೆ ದೊರೆಯುವ ನೀರು 20ರೂ.ಗೆ ಮಾರಾಟವಾಗುತ್ತಿವೆ. ಎಳೆ ನೀರಿನ ಸ್ವಾದ ನೀಡುವ ಮಿನಿರಲ್ ವಾಟರ್‌ಗಳು ಒಂದೆಡೆಯಾದರೆ, ಗಟಾರದ ವಾಸನೆ ಬೀರುವ ನಕಲಿ ಕಂಪನಿಗಳ ಬಾಟಲಿಯ ಅಶುದ್ಧ ನೀರು ಮತ್ತೂಂದೆಡೆ. ಹೀಗೆ ಜನರ ಬಾಯಾರಿಕೆಯನ್ನೇ ಬಂಡವಾಳ ಮಾಡಿಕೊಂಡಿರುವ ಸುಲಿಗೆ ಕಂಪನಿಗಳು, ರಾಜಾರೋಷವಾಗಿ ಗ್ರಾಹಕರಿಗೆ ಮೋಸ ಮಾಡುತ್ತಿವೆ.

ನಗರ ಮತ್ತು ಪಟ್ಟಣಗಳ ಬೇಕರಿಗಳಲ್ಲಿ, ಹೋಟೆಲ್, ಖಾನಾವಳಿಗಳಲ್ಲಿ ಮಾತ್ರ ಲಭ್ಯವಿರುತ್ತಿದ್ದ ತಂಪು ನೀರಿನ ಬಾಟಲಿಗಳು, ಈಗ ಕಿರಾಣಿ ಅಂಗಡಿ, ಮೊಬೈಲ್ ರಿಚಾರ್ಜ್‌ ಶಾಪ್‌, ಸೈಕಲ್ ಪಂಕ್ಚರ್‌ ಅಂಗಡಿ, ಗುಟುಕಾ, ಪಾನ್‌ ಬೀಡಾ ಅಂಗಡಿಗಳಲ್ಲೂ ಮಾರಾಟವಾಗುತ್ತಿವೆ. ನೀರಿನ ವ್ಯಾಪಾರವು ಹಲವರಿಗೆ ಸ್ವಯಂ ಉದ್ಯೋಗ ಒದಗಿಸಿ ಉಪಜೀವನಕ್ಕೆ ದಾರಿಯಾಗಿದ್ದು ಖುಷಿಯ ಸಮಾಚಾರವೇ ಸರಿ. ಆದರೆ, ಕಲುಷಿತ ನೀರು ಬಾಟಲಿಗೆ ಮತ್ತು ಪ್ಲ್ಯಾಸ್ಟಿಕ್‌ ಪ್ಯಾಕೆಟ್‌ಗಳಿಗೆ ತುಂಬಿ ಸುಲಿಗೆ ದಂಧೆಗಿಳಿದಿರುವ ವಂಚಕರ ದೊಡ್ಡ ಜಾಲ ಆಹಾರ ಇಲಾಖೆ ಅಧಿಕಾರಿಗಳ ಬಲೆಗೆ ಬೀಳದಿರುವುದು ಅನುಮಾನಕ್ಕೆ ಕಾರಣವಾಗಿದೆ. ಅತ್ತ ನೀರೂ ನಕಲಿ, ಇತ್ತ ದರವೂ ದುಪ್ಪಟ್ಟು. ಇದರ ಪೆಟ್ಟು ನೇರವಾಗಿ ಗ್ರಾಹಕರ ಮೇಲೆ ಬೀಳುತ್ತಿದೆ.

ಸುಡುವ ಬಿಸಿಲ ತಾಪ ತಾಳಲಾಗದೆ ಪದೇಪದೆ ಬಾಯಾರಿಕೆ ಉಂಟಾಗಿ ಒಡಲು ತಂಪು ನೀರು ಬಯಸುವುದು ಸಹಜ. ಹೀಗಾಗಿ ಜನರು ತಂಪು ನೀರಿನ ಬಾಟಲಿ ಖರೀದಿಸುವುದು ಅನಿವಾರ್ಯವಾಗಿದೆ. ನೂರಾರು ಕಂಪನಿಗಳ ಹೆಸರಿನಲ್ಲಿ ಬಾಟಲಿ ನೀರು ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿದ್ದು, ಶುದ್ಧ ನೀರಿನ ಮಧ್ಯೆ ಅಶುದ್ಧ ನೀರು ಸರಬರಾಜು ಸದ್ದಿಲ್ಲದೆ ಸಾಗಿದೆ. ಬಾಟಲಿಗಳ ಮೇಲೆ ಮುದ್ರಿತವಾದ ದರಕ್ಕೂ ಗ್ರಾಹಕರಿಂದ ವಸೂಲಿ ಮಾಡಲಾಗುತ್ತಿರುವ ಹಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಕಂಪನಿಗಳ ಮೋಸ, ವಂಚನೆ ಹಾಗೂ ಸುಲಿಗೆಗೆ ಕಡಿವಾಣ ಹಾಕಬೇಕಿರುವ ಸಂಬಂಧಿತ ಅಧಿಕಾರಿಗಳು ಮೌನ ವಹಿಸಿರುವುದು ಗ್ರಾಹಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಮಡಿವಾಳಪ್ಪ ಹೇರೂರ

ಟಾಪ್ ನ್ಯೂಸ್

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.