ಭಾರತ ಮೂಲಕ ವಿದೇಶಕ್ಕೆ ಹೋಗುವ ನೇಪಾಲಿಗಳಿಗೆ ವಲಸೆ ಇಲಾಖೆಯ ಎನ್ಓಸಿ ಅಗತ್ಯ
Team Udayavani, May 16, 2019, 11:23 AM IST
ಕಾಠ್ಮಂಡು : ಭಾರತದ ಮೂಲಕ ವಿದೇಶಕ್ಕೆ ಹಾರಲು ಬಯಸುವ ನೇಪಾಲಿ ಪ್ರಜೆಗಳು ಭಾರತದ ಒಳವಲಸೆ ಅಧಿಕಾರಿಗಳಿಂದ ಅನುಮತಿ ಪಡೆಯುವುಕ್ಕಾಗಿ ಈಗಿನ್ನು ಹೊಸದಿಲ್ಲಿಯಲ್ಲಿನ ನೇಪಾಲಿ ದೂತಾವಾಸದಿಂದ ನಿರಾಕ್ಷೇಪಣ ಪತ್ರವನ್ನು ಪಡೆದುಕೊಳ್ಳಬೇಕಾಗುತ್ತದೆ ಎಂದು ಪೊಲೀಸರು ಇಂದು ಹೊರಡಿಸಿರುವ ನೋಟಿಸ್ ತಿಳಿಸಿದೆ.
ಅರ್ಜಿದಾರರು ನೇಪಾಲಿ ದೂತಾವಾಸಕ್ಕೆ ಅರ್ಜಿಯನ್ನು ಸಲ್ಲಿಸಿ ತಾವು ವಿದೇಶ ಪ್ರಯಾಣ ಕೈಗೊಳ್ಳುವ ಕಾರಣವನ್ನು ತಿಳಿಸಬೇಕಾಗುತ್ತದೆ; ಜತೆಗೆ ತಮ್ಮ ದೇಶದ ವೀಸಾವನ್ನು, ಪಾಸ್ ಪೋರ್ಟ್ ಪ್ರತಿಯೊಂದನ್ನು, ಏರ್ ಟಿಕೆಟ್ ಮತ್ತು ಭಾರತ ಹೊರತು ಪಡಿಸಿ ಈ ಹಿಂದಿನ ಪ್ರಯಾಣ ವಿವರಗಳನ್ನು ಸಲ್ಲಿಸಬೇಕಾಗುತ್ತದೆ.
ಉದ್ಯೋಗದ ಉದ್ದೇಶದಲ್ಲಿ ವಿದೇಶ ಪ್ರಯಾಣ ಕೈಗೊಳ್ಳುವವರು ವಿದೇಶಿ ಉದ್ಯೋಗ ಇಲಾಖೆಯಿಂದ ಪಡೆಯಲಾದ ಉದ್ಯೋಗ ಪರವಾನಿಗೆ ಪತ್ರವನ್ನು ಸಲ್ಲಿಸಬೇಕಾಗುತ್ತದೆ ಎಂದು ಹೊಸದಿಲ್ಲಿಯಲ್ಲಿನ ನೇಪಾಲಿ ದೂತಾವಸ ಹೊರಡಿಸಿರುವ ಪ್ರಕಟನೆಯನ್ನು ಉಲ್ಲೇಖೀಸಿ ಪೊಲೀಸರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ
Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ
ಜಗತ್ತಿಗಿಂತ ಮೊದಲು ಪಾಕ್ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್ ದಾಳಿ ಬಗ್ಗೆ ಪ್ರಧಾನಿ
Encounter: ಛತ್ತೀಸ್ಗಢದಲ್ಲಿ ಎನ್ಕೌಂಟರ್… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ