ಹೆರಕಲ್ ಯೋಜನೆ; ಹಳ್ಳ ಹಿಡಿದದ್ದು ಹೇಗೆ?


Team Udayavani, May 16, 2019, 2:26 PM IST

Udayavani Kannada Newspaper

ಬಾಗಲಕೋಟೆ: ನಗರದ ಶಾಶ್ವತ ಕುಡಿಯುವ ನೀರು ಪೂರೈಕೆ ಯೋಜನೆ, ಹಳ್ಳ ಹಿಡಿಯಲು ನಾನು ಕಾರಣವಲ್ಲ ಅವರು ಎಂದು ಒಬ್ಬ ಇಂಜನಿಯರ್‌ ಹೇಳಿದರೆ, ಇಲ್ಲಾರಿ, ಅವರಿಂದಾನೇ ಯೋಜನೆ ಇಷ್ಟು ವಿಳಂಬವಾಯ್ತು ಎಂದು ಮತ್ತೂಬ್ಬ ಇಂಜಿನಿಯರ್‌ ಹೇಳುತ್ತಿದ್ದು, ಹೆರಕಲ್ ಯೋಜನೆ ಕುರಿತು ಬಿಟಿಡಿಎ ಇಂಜಿನಿಯರ್‌ಗಳಲ್ಲೇ ಪರಸ್ಪರ ತೀವ್ರ ಅಸಮಾಧಾನ, ಅಪಸ್ವರದ ಮಾತು ಕೇಳಿ ಬರುತ್ತಿವೆ.

ನಿಜ, ಹೆರಕಲ್ದಿಂದ ಬಾಗಲಕೋಟೆಗೆ ಶಾಶ್ವತ ಕುಡಿಯುವ ನೀರು ಪೂರೈಕೆ ಯೋಜನೆಯ 72 ಕೋಟಿ ಮೊತ್ತದ ಕ್ರಿಯಾ ಯೋಜನೆ ರೂಪಿಸಿದ್ದು ಬಿಟಿಡಿಎ ಎಇಇ ಮೋಹನ ಹಲಗತ್ತಿ. ಆ ಯೋಜನೆಗೆ ಮಂಜೂರಾತಿ ದೊರೆತು, ಕಾಮಗಾರಿಗೆ ಟೆಂಡರ್‌ ಆಗುವ ಹೊತ್ತಿಗೆ ರಾಜ್ಯದಲ್ಲಿ ಸರ್ಕಾರ ಬದಲಾಗಿತ್ತು. ಸ್ಥಳೀಯ ಶಾಸಕರೂ ಬದಲಾಗಿದ್ದರು. ಆಗ ಸ್ಥಳೀಯ ಶಾಸಕರ ಅಕ್ಕ-ಪಕ್ಕದಲ್ಲಿ ಕಾಣಿಸಿಕೊಂಡ ಎಸ್‌.ಐ. ಇದ್ದಲಗಿ ಅವರು, ಇದೇ ಯೋಜನೆ ಪೂರ್ಣಗೊಳಿಸಲು 75 ಕೋಟಿ ಮೊತ್ತದ ಸೇತುವೆಯ ಪ್ರಸ್ತಾವನೆ ಸಿದ್ಧಪಡಿಸಿದರು. ಅದಕ್ಕೆ ಅನುಮೋದನೆ ಸಿಗಲಿಲ್ಲ. ಸೇತುವೆ ಸಿದ್ಧವಾಗಲಿಲ್ಲ. ಪೈಪ್‌ ಅಳವಡಿಸಲಿಲ್ಲ. ಹೀಗಾಗಿ ನೀರು ಬರಲಿಲ್ಲ ಎಂದು ಬಿಟಿಡಿಎನ ಕೆಲ ಅಧಿಕಾರಿಗಳೇ ಹೇಳಿಕೊಳ್ಳುತ್ತಿದ್ದಾರೆ.

ಕುಡಿಯುವ ನೀರು ಕೃಷಿಗೆ ದಾನ ?: ಮೂರು ಬಾರಿ ನೀಲನಕ್ಷೆ ಬದಲಾಗಿ, ಹಲವು ಗೊಂದಲಗಳು ನಿವಾರಣೆಯಾಗಿ, ಕೊನೆಗೆ ಕುಡಿಯುವ ನೀರು ಪೂರೈಕೆ ಯೋಜನೆಯೊಂದನ್ನು ಬ್ಯಾರೇಜ್‌ ತುಂಬುವ ಯೋಜನೆಯಾಗಿ ಮಾರ್ಪಡಿಸಿದ ಖ್ಯಾತಿ ಹೊಂದಿದ ಬಿಟಿಡಿಎ, ಕುಡಿಯುವ ನೀರನ್ನು ಕೃಷಿಗೆ ಕೊಡಲು ಮುಂದಾಗಿದೆ ಎಂಬ ಮಾತು ಈಗ ಬಲವಾಗಿ ಕೇಳಿ ಬರುತ್ತಿದೆ.

ಆನದಿನ್ನಿ ಬ್ಯಾರೇಜ್‌, ಘಟಪ್ರಭಾ ನದಿ ಪಾತ್ರದಲ್ಲಿದ್ದು, 0.108 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಆಲಮಟ್ಟಿ ಜಲಾಶಯದ ಹಿನ್ನೀರು ಸರಿದಾಗ, ಈ ಬ್ಯಾರೇಜ್‌ ಬರಿದಾಗುತ್ತ ಬರುತ್ತದೆ. ಆಗ, ಹೆರಕಲ್ ಬ್ಯಾರೇಜ್‌ನಿಂದ ನೀರು ಪಂಪ್‌ ಮಾಡಿ, ಅಲ್ಲಿಂದ ಅಂದು ಆನದಿನ್ನಿ ಬ್ಯಾರೇಜ್‌ ತುಂಬಿಸಿಕೊಂಡು, ಬಾಗಲಕೋಟೆಗೆ ನೀರು ಕೊಡಲು ಬಿಟಿಡಿಎ ಸಿದ್ಧತೆ ಮಾಡಿಕೊಂಡಿದೆ. ಆದರೆ, ಆನದಿನ್ನಿ ಬ್ಯಾರೇಜ್‌ ಪ್ರತಿವರ್ಷ ಅವಧಿಗೆ ಮುನ್ನವೇ ಬರಿದಾಗಲು, ಕುಡಿಯುವ ಉದ್ದೇಶದಿಂದ ಕಟ್ಟಿದ ಬ್ಯಾರೇಜ್‌ ನೀರು ಕೃಷಿ ಬಳಕೆಯಾಗುತ್ತಿರುವುದರಿಂದ ಎಂಬುದು ಎಲ್ಲರಿಗೂ ಗೊತ್ತು. ಆನದಿನ್ನಿ ಬ್ಯಾರೇಜ್‌ ಖಾಲಿಯಾದಾಗ, ನೀರು ಬಿಡಿಸಬೇಕೆಂಬ ಒತ್ತಡ ಹೆಚ್ಚುತ್ತದೆ. ಮುಂದಿನ ವರ್ಷದಿಂದ ಹೆರಕಲ್ದಿಂದಲೇ ಆನದಿನ್ನಿ ಬ್ಯಾರೇಜ್‌ ತುಂಬಿಸಿಕೊಂಡರೆ, ಆನದಿನ್ನಿ ಬ್ಯಾರೇಜ್‌ ಸುತ್ತಲಿನ ಕೃಷಿ ಪಂಪಸೆಟ್‌ಗಳ ಸಂಖ್ಯೆಯೂ ಹೆಚ್ಚುತ್ತವೆ. ಕುಡಿಯುವ ನೀರಿಗಿಂತ, ಇತರೇ ಚಟುವಟಿಕೆಗೆ ನೀರು ಹೆಚ್ಚು ಬಳಕೆಯಾಗುತ್ತದೆ. ಆಗ ಮತ್ತೆ ಘಟಪ್ರಭಾ ನದಿ ಮೂಲಕ ನೀರು ಬಿಡಿ ಎಂದು ಕೇಳುವ ಸಂಪ್ರದಾಯ ತಪ್ಪಲ್ಲ ಎಂಬ ಮಾತು ಬಿಟಿಡಿಎ ಅಧಿಕಾರಿಗಳ ಮಟ್ಟದಲ್ಲಿ ವ್ಯಕ್ತವಾಗುತ್ತಿವೆ.

ಧೈರ್ಯ ಯಾರಿಗೂ ಇಲ್ಲ: ಕುಡಿಯುವ ಉದ್ದೇಶಕ್ಕೆ ಮೀಸಲಿಟ್ಟ ನೀರನ್ನು, ಇತರೆ ಚಟುವಟಿಕೆಗೆ ಬಳಸಬೇಡಿ ಎಂದು ಹೇಳಿಕೆ ಕೊಡುವ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಿ ಸಾಕಷ್ಟು ಜನರಿದ್ದಾರೆ. ಆದರೆ, ಆ ಕಾರ್ಯ ನಿರಂತರ ನಡೆದರೂ ಅದಕ್ಕೆ ಬ್ರೇಕ್‌ ಹಾಕಿ, ಜನ-ಜಾನುವಾರುಗಳಿಗೆ ಕುಡಿಯುವ ನೀರು ಕೊಡುವ ಧೈರ್ಯ ಯಾರಿಗೂ ಇಲ್ಲ. ಕಾರಣ, ರೈತರ ವಿಷಯದಲ್ಲಿ ಕಠೊರ ನಿರ್ಧಾರ ಕೈಗೊಳ್ಳುವುದು ಸಾಧ್ಯವೂ ಇಲ್ಲ. ಬರದಿಂದ ನಲುಗಿದ ರೈತ, ಸ್ವಾಭಾವಿಕವಾಗಿ ನದಿ ಮತ್ತು ಬ್ಯಾರೇಜ್‌ಗಳಿಗೆ ಪಂಪಸೆಟ್ ಅಳವಡಿಸಿ, ನೀರು ಎತ್ತುವುದು ಸಾಮಾನ್ಯ. ಅದನ್ನು ತಡೆದರೆ, ದೊಡ್ಡ ಪ್ರತಿಭಟನೆಗಳೇ ಆಗುತ್ತವೆ. ಹೀಗಾಗಿ ಬ್ಯಾರೇಜ್‌ನಿಂದ, ಮತ್ತೂಂದು ಬ್ಯಾರೇಜ್‌ ತುಂಬಿಸಿಕೊಳ್ಳುವ ಬದಲು, ನೇರವಾಗಿ ಜಲ ಶುದ್ದೀಕರಣ ಘಟಕಕ್ಕೆ ನೀರು ಪಂಪ್‌ ಮಾಡಿದರೆ, ಶಾಶ್ವತ ಪರಿಹಾರವಾದೀತು ಎಂಬುದು ಹಲವರ ಅಭಿಪ್ರಾಯ. ಆದರೆ, ಈಗ ಬಹುತೇಕ ಗೊಂದಲದಲ್ಲೇ ಮುಗಿದ ಯೋಜನೆಗೆ ಪುನಃ 75 ಕೋಟಿ ಖರ್ಚು ಮಾಡಿ, ಸೇತುವೆ ನಿರ್ಮಿಸುವುದೂ ಕಷ್ಟ ಸಾಧ್ಯ. ಹೀಗಾಗಿ ಯೋಜನೆಯನ್ನೇ ಇಂತಹ ಅಧಿಕಾರಿಯೇ ಹಳ್ಳ ಹಿಡಿಸಿದರು ಎಂಬ ಪರಸ್ಪರ ಆರೋಪವನ್ನು ಬಿಟಿಡಿಎ ಅಧಿಕಾರಿಗಳು ಮಾಡಿಕೊಳ್ಳುತ್ತಿದ್ದಾರೆ.

ಒಟ್ಟಾರೆ, ಬಿಟಿಡಿಎ ಇಂಜಿನಿಯರ್‌ಗಳ ಮುಂದಾಲೋಚನೆ ಇಲ್ಲದ ಕಾರ್ಯಕ್ಕೆ, 72 ಕೋಟಿ ವೆಚ್ಚದ ಯೋಜನೆ ಆರು ವರ್ಷ ಕಳೆದರೂ ಸಮರ್ಪಕವಾಗಿ ಪೂರ್ಣಗೊಂಡಿಲ್ಲ. ಕುಡಿಯುವ ನೀರಿನ ಯೋಜನೆಯನ್ನು ಬ್ಯಾರೇಜ್‌ ತುಂಬುವ ಯೋಜನೆಯಾಗಿ ಮಾಡಿಟ್ಟಿದ್ದಾರೆ ಎಂಬ ಆಕ್ರೋಶದ ಮಾತು ಕೇಳಿ ಬರುತ್ತಿವೆ.

ಹೆರಕಲ್ ಬ್ಯಾರೇಜ್‌ನಿಂದ ಆನದಿನ್ನಿ ಬ್ಯಾರೇಜ್‌ ತುಂಬಿಸಿಕೊಂಡರೆ, ಆ ಯೋಜನೆಯ ಮೂಲ ಉದ್ದೇಶ ಈಡೇರುವುದಿಲ್ಲ. ಮೊದಲು ಈ ಯೋಜನೆಯ ನೀಲನಕ್ಷೆ ತಯಾರಿಸಿದ್ದೆ ನಮ್ಮ ಬಿಟಿಡಿಎ ಒಬ್ಬ ಇಂಜನಿಯರ್‌. ಈಗ ಅವರೇ ಮೂಲ ಯೋಜನೆ ಬದಲಿಸಿ, ಆನದಿನ್ನಿ ಬ್ಯಾರೇಜ್‌ ತುಂಬಲು ಯೋಜನೆ ಅಂತಿಮಗೊಳಿಸಿದ್ದಾರೆ. ಇದು ಶಾಶ್ವತ ಪರಿಹಾರವಾಗುವುದಿಲ್ಲ. ಕಾವೇರಿ ನಿಗಮ ಕೈಗೊಂಡ ಕುಡಿಯುವ ನೀರು ಪೂರೈಕೆ ಯೋಜನೆಗಳಂತೆ, ಘಟಪ್ರಭಾ ನದಿಯಲ್ಲಿ ಸೇತುವೆ ನಿರ್ಮಿಸಿ, ಪೈಪ್‌ಲೈನ್‌ ಹಾಕಿಕೊಂಡೇ, ಬಿಟಿಡಿಎನ ಡಬ್ಲುಪಿಗೆ ನೀರು ತಂದರೆ ಶಾಶ್ವತ ಪರಿಹಾರವಾಗಲಿದೆ.
•ಎಸ್‌.ಐ. ಇದ್ದಲಗಿ, ಎಇಇ, ಬಿಟಿಡಿಎ

ಟಾಪ್ ನ್ಯೂಸ್

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್‌ಗೆ 48 ಗಂಟೆ ಪ್ರಚಾರ ನಿಷೇಧ

Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್‌ಗೆ 48 ಗಂಟೆ ಪ್ರಚಾರ ನಿಷೇಧ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ…? ಸಂಸದನ ವಿವಾದಾತ್ಮಕ ಹೇಳಿಕೆ

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್‌ಗೆ 48 ಗಂಟೆ ಪ್ರಚಾರ ನಿಷೇಧ

Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್‌ಗೆ 48 ಗಂಟೆ ಪ್ರಚಾರ ನಿಷೇಧ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.