![ವಿದೇಶಿ ಪ್ರವಾಸ ಕಥನ 6: ದುಬೈ, ಶಾರ್ಜಾ, ಅಜ್ಮಾನ್ ಪರ್ಯಟನೆ-ಕರಾವಳಿಗರ ಕಲರವ!](https://www.udayavani.com/wp-content/uploads/2024/07/Dubai1-415x234.jpg)
ಶಿಕ್ಷಕರ ಕಾಲೋನಿಯಲ್ಲಿ ನೀರಿಗೆ ಹಾಹಾಕಾರ-ನಿಲ್ಲದ ಪರದಾಟ
Team Udayavani, May 15, 2019, 11:47 AM IST
![bagalkote-tdy-6..](https://www.udayavani.com/wp-content/uploads/2019/05/bagalkote-tdy-6..-273x465.jpg)
ತೇರದಾಳ: ಪಟ್ಟಣದ 1ನೇ ವಾರ್ಡ್ನಲ್ಲಿ ಹೊಸ ಕೊಳವೆಬಾವಿಯಿಂದ ನೀರು ಪೂರೈಕೆ ಮಾಡಲಾಗುತ್ತಿದೆ.
ತೇರದಾಳ: ಪಟ್ಟಣದ ಶಿಕ್ಷಕರ ಕಾಲೋನಿ ಸೇರಿದಂತೆ ವಿವಿಧ ಕಡೆಗಳಲ್ಲಿ ಕಡೆಯಲ್ಲಿ ಕುಡಿಯುವ ನೀರಿಗೆ ಜನರು ಪರದಾಡುತ್ತಿದ್ದಾರೆ.
ಶಿಕ್ಷಕರ ಕಾಲೋನಿಯಲ್ಲಿ ನೀರಿಗಾಗಿ ಪುರಸಭೆ ಮಾಡಿದ ನಲ್ಲಿ ವ್ಯವಸ್ಥೆ ಹೊರತುಪಡಿಸಿ ಕೊಳವೆ ಬಾವಿ ಅಥವಾ ಸಿಸ್ಟರ್ನ್ಗಳ ಯಾವ ಪರ್ಯಾಯ ವ್ಯವಸ್ಥೆಗಳಿಲ್ಲ. ಕೃಷ್ಣಾ ನದಿ ಬತ್ತಿದ್ದು, ಜೀವಜಲ ನೀರಿನ ಕೊರತೆ ತೀವ್ರತರವಾಗಿದೆ. ಶಿಕ್ಷಕ ಕಾಲೋನಿಯಲ್ಲಿ ಹೆಚ್ಚಿನ ಜನ ನಿವೃತ್ತರು ಹಾಗೂ ವಯೋವೃದ್ಧರು ಇದ್ದಾರೆ. ಟ್ಯಾಂಕರ್ಗಳ ಮೂಲಕ ನೀರು ಹಾಕಿಸಿಕೊಂಡರೆ, ಅವರು ಕೇಳಿದಷ್ಟು ದುಬಾರಿ ಹಣ ತೆರಬೇಕಾದ ದುಸ್ಥಿತಿ ಬಂದೊದಗಿದೆ. ಈ ಕುರಿತು ಕಾಲೋನಿಯ ನಿವಾಸಿಗಳು ಜಿಲ್ಲಾಧಿಕಾರಿ, ಪುರಸಭೆ ಸೇರಿದಂತೆ ಸಂಬಂಧಿಸಿದ ಎಲ್ಲ ಇಲಾಖೆಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ.
ವಾರ್ಡ್ನಲ್ಲಿ ಬೇಸಿಗೆ ಸಂದರ್ಭದಲ್ಲಿ ಪ್ರತಿವರ್ಷವೂ ನೀರಿನ ತೊಂದರೆ ತೀವ್ರತರವಾಗುತ್ತಿತ್ತು. ಈ ಬಾರಿ ಪುರಸಭೆ ಮುಖ್ಯಾಧಿಕಾರಿಗಳು ಅನೇಕ ಕೊಳವೆ ಬಾವಿ ದುರಸ್ತಿ ಮಾಡಿಸಿದ್ದರೆ, ಮತ್ತೆ ಕೆಲವು ಹೊಸ ಕೊಳವೆ ಬಾವಿ ಕೊರೆಸಿದ್ದಾರೆ. ಇದರಿಂದ ಹೆಚ್ಚಿನ ತೊಂದರೆಯಿಲ್ಲ.-ರೂಪಾ ಶಂಕರ ಕುಂಬಾರ,ಪುರಸಭೆ ಸದಸ್ಯ
ಪಟ್ಟಣದ ಅನೇಕ ವಾರ್ಡ್ ಗಳಲ್ಲಿ ಕೊಳವೆಬಾವಿ, ಸಿಸ್ಟರ್ನ್ ಗಳಿರುವುದರಿಂದ ಜೀವಜಲದ ಸಮಸ್ಯೆ ಇಲ್ಲ. ವಾರ್ಡ ನಂಬರ್ 1ರ ಕುಂಬಾರ ಗಲ್ಲಿಯಲ್ಲಿನ ನೀರಿನ ಸಮಸ್ಯೆ ಪರಿಹಾರವಾಗಿದೆ. ಕೆರೆಯ ಎದುರಿಗೆ ಮಹಾದೇವ ದೇವಸ್ಥಾನದ ಮುಂದೆ ಹೊಸ ಕೊಳವೆಬಾವಿ ತೋಡಿ,ದೂರದ ಕುಂಬಾರ ಗಲ್ಲಿಗೆ ಪೈಪ್ಲೈನ್ ಜೋಡಣೆ ಮಾಡಿ, ನೀರು ಪೂರೈಸಲಾಗಿದೆ.
ಕೃಷ್ಣೆಯ ಒಡಲು ಹನಿ ನೀರು ಸಹ ಇಲ್ಲದೆ ಸಂಪೂರ್ಣ ಬತ್ತಿ ಹೋಗಿದೆ. ಜನ ಜಾನುವಾರುಗಳಿಗೆ ನೀರಿನ ಸಮಸ್ಯೆ ಎದುರಾಗಿದೆ. ಬೆಳೆದು ನಿಂತ ಅಲ್ಪ-ಸ್ವಲ್ಪ ಬೆಳೆಗಳು ಕಮರುತ್ತಿವೆ. ಮಹಾರಾಷ್ಟ್ರ ರಾಜ್ಯದ ಕೋಯ್ನಾ ಜಲಾಶಯದಿಂದ ನೀರು ಬಿಡಿಸಲು ವಿನಂತಿಸಲಾಗಿದೆ. ಆದರೆ, ನೀರು ಬರುವ ಕುರಿತು ಯಾವುದೇ ಖಚಿತತೆ ಇಲ್ಲದಿರುವುದರಿಂದ ರೈತರಲ್ಲಿ ಆತಂಕ ಮೂಡಿದೆ.
ನಮ್ಮ 23ನೇ ವಾರ್ಡ್ನಲ್ಲಿ ನೀರಿನ ಸಮಸ್ಯೆಯಿಲ್ಲ. ಇಲ್ಲಿನ ಹೊಸ ಹಾಗೂ ಹಳೆಯ ಕೊಳವೆಬಾವಿಗಳಿಗೆ ನೀರಿದೆ. ವಾರ್ಡಿನ ಎಲ್ಲರಿಗೂ ಸಾಕಷ್ಟು ನೀರಿನ ಲಭ್ಯತೆಯಿದೆ. ಹೊಸ ಕೊಳವೆ ಬಾವಿಗೆ ನೀರೆತ್ತುವ ಮೋಟರ್ ಅಳವಡಿಸಬೇಕಾಗಿದೆ.-ಮಹಾದೇವಿ ರಾಮಪ್ಪ ಗಸ್ತಿ,ಪುರಸಭೆ ಸದಸ್ಯರು, ತೇರದಾಳ.
ಟಾಪ್ ನ್ಯೂಸ್
![ವಿದೇಶಿ ಪ್ರವಾಸ ಕಥನ 6: ದುಬೈ, ಶಾರ್ಜಾ, ಅಜ್ಮಾನ್ ಪರ್ಯಟನೆ-ಕರಾವಳಿಗರ ಕಲರವ!](https://www.udayavani.com/wp-content/uploads/2024/07/Dubai1-415x234.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![mudhola](https://www.udayavani.com/wp-content/uploads/2024/07/mudhola-1-150x87.jpg)
ಪ್ರವಾಹದ ನೀರಿನಲ್ಲಿ ಪಂಪ್ ಸೆಟ್ ತರಲು ಹೋದ ರೈತರು… ನೀರಿಗಿಳಿಯದಂತೆ ಮನವಿ ಮಾಡಿದ ಸಚಿವರು
![ರಬಕವಿ-ಬನಹಟ್ಟಿ: ಅಪಾಯ ಮಟ್ಟದಲ್ಲಿ ಹರಿಯುತ್ತಿರುವ ಕೃಷ್ಣಾ ನದಿ](https://www.udayavani.com/wp-content/uploads/2024/07/KRISHNA-NADI-150x84.jpg)
ರಬಕವಿ-ಬನಹಟ್ಟಿ: ಅಪಾಯ ಮಟ್ಟದಲ್ಲಿ ಹರಿಯುತ್ತಿರುವ ಕೃಷ್ಣಾ ನದಿ
![Rain: ಬಾಗಲಕೋಟೆಯ ಜಿಲ್ಲೆಯ ನಾಲ್ಕು ತಾಲೂಕಿನ ಶಾಲೆಗಳಿಗೆ ಇಂದು (ಜುಲೈ 26) ರಜೆ](https://www.udayavani.com/wp-content/uploads/2024/07/bagalakote-150x90.jpg)
Heavy Rain: ಬಾಗಲಕೋಟೆ ಜಿಲ್ಲೆಯ ನಾಲ್ಕು ತಾಲೂಕಿನ ಶಾಲೆಗಳಿಗೆ ಇಂದು (ಜುಲೈ 26) ರಜೆ
![ರಬಕವಿ-ಬನಹಟ್ಟಿ: ಭೋರ್ಗರೆಯುತ್ತಿರುವ ಕೃಷ್ಣೆ… ಪ್ರವಾಹ ಭೀತಿಯಲ್ಲಿ ಜನತೆ](https://www.udayavani.com/wp-content/uploads/2024/07/rabakavi-1-150x84.jpg)
ರಬಕವಿ-ಬನಹಟ್ಟಿ: ಭೋರ್ಗರೆಯುತ್ತಿರುವ ಕೃಷ್ಣೆ… ಪ್ರವಾಹ ಭೀತಿಯಲ್ಲಿ ಜನತೆ
![Fetoside](https://www.udayavani.com/wp-content/uploads/2024/07/Fetoside-150x90.jpg)
Bagalakote: ಸರಕಾರಿ ವೈದ್ಯೆಯಿಂದಲೇ ಭ್ರೂಣಹತ್ಯೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.