ಕರಾವಳಿಯಲ್ಲೂ ಕುಡಿಯುವ ನೀರಿಗೆ ಉಂಟಾಗಿದೆ ಹಾಹಾಕಾರ


Team Udayavani, May 20, 2019, 4:42 PM IST

nc-3

ಭಟ್ಕಳ: ಸಮುದ್ರದಾ ತಡಿಯಲ್ಲಿ ಮನೆಯ ಮಾಡಿ ನೀರಿಲ್ಲವೆಂದರೆಂತಯ್ಯ ಎನ್ನುವಂತಾಗಿದೆ ಕರಾವಳಿಗರ ಪರಿಸ್ಥಿತಿ. ಕರಾವಳಿ ಭಾಗದಲ್ಲಿ ಬೋರ್ಗೆರೆವ ಸಮುದ್ರವಿದೆ. ಮಳೆಗಾಲದಲ್ಲಿ ಅತ್ಯಂತ ತುಂಬಿ ತುಳುಕುವ ನದಿ, ಹಳ್ಳಗಳಿವೆ. ಆದರೆ ಸರಿಯಾದ ನಿರ್ವಹಣೆ ಇಲ್ಲದೇ ನೀರನ್ನು ಹಿಡಿದಿಟ್ಟುಕೊಳ್ಳಲು ಯಾವುದೇ ಯೋಜನೆಯಿಲ್ಲದೇ ಲಕ್ಷಾಂತರ ಜನರು ಹನಿ ನೀರಿಗಾಗಿ ಪರಿತಪಿಸುವ ಕಾಲ ಬಂದೊದಗಿದೆ.

ಕರಾವಳಿಯಲ್ಲಿ ಹಿಂದೆಂದೂ ಕಾಣದ ಬರ ಇಂದು ಕಂಡು ಬಂದಿದ್ದು ಕುಡಿಯಲು ಹನಿ ನೀರಿಗೂ ತತ್ವಾರ ಎನ್ನುವಂತಾಗಿದೆ. ಗಿಡ ಮರಗಳು ಬಾಡಿ ಹೋಗಿದ್ದು ಇನ್ನೇನು ಒಣಗಿ ಹೋಗುವುದೊಂದೇ ಬಾಕಿ ಇದೆ. ಇನ್ನು 15 ದಿನ ಮಳೆಯಾಗದೇ ಇದ್ದರೆ ಇರುವ ಅಡಕೆ ತೋಟದಲ್ಲಿ ಅರ್ಧದಷ್ಟು ಮರಗಳ ಸುಳಿಗಳು ಒಣಗಿ ಹೋಗುವುದರಲ್ಲಿ ಸಂಶಯವಿಲ್ಲ ಎನ್ನಲಾಗುತ್ತಿದೆ. ಮಕ್ಕಳಂತೆ ಸಾಕಿದ ಮರಗಿಡಗಳು ಒಣಗಿ ಹೋಗುವುನ್ನು ಕಂಡು ಮನೆಯಲ್ಲಿ ಊಟ ಸೇರದ ಪರಿಸ್ಥಿತಿಗೆ ರೈತ ತಲುಪಿದ್ದಾನೆ.

ದಿನದಿಂದ ದಿನಕ್ಕೆ ಬಿಸಿಲ ಝಳ ಹೆಚ್ಚುತ್ತಿದ್ದು ಗರಿಷ್ಠ ತಾಪಮಾನ ಬಯಲು ಸೀಮೆಯಂತೆ 33 ಡಿಗ್ರಿ 34 ಡಿಗ್ರಿಗೆ ತಲುಪಿರುವುದು ಜನತೆ ಮನೆಯಿಂದ ಹೊರಕ್ಕೆ ಬರುವುದೇ ಕಷ್ಟಕರವಾಗಿದೆ. ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕಾಗಿ ಮರಗಳ ಮಾರಣ ಹೋಮ ಮಾಡಿರುವುದು ಬಿಸಿಲ ಝಳ ಇನ್ನಷ್ಟು ಹೆಚ್ಚಲು ಕಾರಣವಾಗಿದೆ.

ತಾಲೂಕಿನ 16 ಗ್ರಾಪಂಚ ವ್ಯಾಪ್ತಿಯಲ್ಲಿ 11 ಗ್ರಾಪಂ ವ್ಯಾಪ್ತಿಯಲ್ಲಿ ನೀರಿನ ಬರ ಉಂಟಾಗಿದ್ದು ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ದಿನಾಲೂ ಸುಮಾರು 16 ಹಳ್ಳಿಗಳಲ್ಲಿ 60 ಮಜಿರೆಗಳಿಗೆ 4.39 ಲಕ್ಷ ಲೀಟರ್‌ ನೀರನ್ನು ಸರಬರಾಜು ಮಾಡಲಾಗುತ್ತಿದೆ. ದಿನಕ್ಕೆರಡು ಬಾರಿ ನೀರು ಸರಬರಾಜು ಮಾಡಲಾಗುತ್ತಿದ್ದು ಇನ್ನೂ ಕೂಡಾ ಬೇಡಿಕೆ ಬಂದರೆ ನೀರು ಪೂರೈಸಲು ಹಣದ ಕೊರತೆ ಇಲ್ಲ ಎನ್ನುತ್ತವೆ ತಹಶೀಲ್ದಾರ್‌ ಕಚೇರಿ ಮೂಲಗಳು.

ಪ್ರತಿ ವರ್ಷವೂ ಕಡವಿನಕಟ್ಟೆ ಡ್ಯಾಂನಲ್ಲಿ ನೀರು ಬರಿದಾಗಿ ಕೊನೆಯಲ್ಲಿ ಇದ್ದ ಅಲ್ಪಸ್ವಲ್ಪ ನೀರನ್ನೇ ಸರಬರಾಜು ಮಾಡಲಾಗುತ್ತಿದೆ. ಈ ಬಾರಿಯೂ ಅದೇ ಪರಿಸ್ಥಿತಿ ಇದ್ದು ಭಟ್ಕಳ ನಗರ, ಶಿರಾಲಿ, ಜಾಲಿ ಮತ್ತು ಮಾವಿನಕುರ್ವೆ ನೀರು ಸರಬರಾಜು ಯೋಜನೆಗೆ ಇದ್ದ ಒಂದೇ ಜಲಮೂಲವೂ ಬತ್ತಿ ಬರಡಾಗಿದೆ.

ಡ್ಯಾಂ ಮಧ್ಯದಲ್ಲಿ ಸಬ್‌ಮರ್ಸಿಬಲ್ ಪಂಪ್‌ ಅಳವಡಿಸಿ ನೀರೆತ್ತುವ ಯೋಜನೆಯೊಂದು ರೂಪುಗೊಳ್ಳುತ್ತಿದ್ದು ಕಾರ್ಯಗತಗೊಂಡರೆ ನದಿಯ ಸಂಪೂರ್ಣ ನೀರು ಖಾಲಿಯಾಗಲು ಹೆಚ್ಚು ದಿನ ಬೇಕಾಗುವುದಿಲ್ಲ.

ನಗರದಲ್ಲಿ ರಾಬಿತಾ ಸೊಸೈಟಿ ಹಾಗೂ ಮುಸ್ಲಿಂ ಯುತ್‌ ಫೆಡರೇಶನ್‌ ಕೂಡಾ ಉಚಿತವಾಗಿ ನೀರು ಸರಬರಾಜು ಮಾಡುತ್ತಿದೆ. ಕಾರ್ಯಕರ್ತರು ಸರದಿ ಮೇಲೆ ನೀರು ಬಿಡಲು ಬರುತ್ತಿರುವುದು ಸಮಾಜ ಸೇವೆಯ ಧ್ಯೋತಕವಾಗಿದೆ. ಬೇಡಿಕೆಯಿರುವಲ್ಲಿ ನೀರು ಸರಬರಾಜು ಮಾಡುತ್ತಿರುವುದು ಶ್ಲಾಘನೀಯ.

ತಾಲೂಕಿನಲ್ಲಿ ಬೇಡಿಕೆ ಬಂದಲ್ಲಿಗೆ ನೀರಿನ ಸರಬರಾಜು ಸರಿಯಾಗಿ ಮಾಡುತ್ತಿದ್ದು ಹೊಸದಾಗಿ ಬೇಡಿಕೆ ಬಂದರೆ ತಕ್ಷಣ ನೀರು ಸರಬರಾಜು ಮಾಡಲು ತಾಲೂಕಾಡಳಿತ ಸನ್ನದ್ಧವಾಗಿದೆ. ಹಲವು ಕಡೆಗಳಲ್ಲಿ ಜಲಮೂಲ ಕಂಡು ಕೊಂಡಿದ್ದು ಅಲ್ಲಲ್ಲಿ ನೀರು ಸರಬರಾಜಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಕಡವಿನಕಟ್ಟಾ ಡ್ಯಾಂ ಸಮಸ್ಯೆಯನ್ನು ಚಿಕ್ಕ ನೀರಾವರಿ ಇಲಾಖೆಯವರು ನಿರ್ವಹಣೆ ಮಾಡಬೇಕಾಗಿದೆ. ಯಾವುದೇ ಭಾಗದಲ್ಲಿ ಕುಡಿಯುವ ನೀರಿನ ಅಗತ್ಯವಿದ್ದಲ್ಲಿ ತಮ್ಮ ಕಚೇರಿ ಸಂಖೆ 08385-226422ಗೆ ಕರೆ ಮಾಡಿದಲ್ಲಿ ಕ್ರಮ ಕೈಗೊಳ್ಳಲಾಗುವುದು.
•ಎನ್‌.ಬಿ. ಪಾಟೀಲ್ ತಹಶೀಲ್ದಾರ್‌, ಭಟ್ಕಳ.

ಆರ್ಕೆ, ಭಟ್ಕಳ

ಟಾಪ್ ನ್ಯೂಸ್

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.