ದಾನಮ್ಮದೇವಿಗೂ ಟ್ಯಾಂಕರ್‌ ನೀರು

•ಹಣ ಕೊಟ್ಟರೂ ನೀರು ಸಿಗದ ದುಸ್ಥಿತಿ ನಿರ್ಮಾಣ•ತಿಂಗಳಿಂದ ಮದುವೆ ಪರವಾನಗಿ ಸ್ಥಗಿತ

Team Udayavani, May 21, 2019, 11:04 AM IST

vp-tdy-1..

ವಿಜಯಪುರ: ಧರ್ಮಸ್ಥಳ ಕ್ಷೇತ್ರದ ಬಳಿಕ ರಾಜ್ಯದ ಅತ್ಯಂತ ಪ್ರತಿಷ್ಠಿತ ಹಾಗೂ ಭಕ್ತರ ಪಾಲಿನ ಇಷ್ಟಾರ್ಥ ಸಿದ್ದಿ ದೇವತಾ ಕ್ಷೇತ್ರ ಎನಿಸಿರುವ ಗುಡ್ಡಾಪುರ ಶ್ರೀ ದಾನಮ್ಮ ದೇವಿ ಕ್ಷೇತ್ರದಲ್ಲೂ ಜಲಕ್ಷಾಮ ಎದುರಾಗಿದೆ. ಒಂದೆಡೆ ಬಿರು ಬಿಸಿಲು ಮತ್ತೂಂದೆಡೆ ನೀರಿನ ಅಭಾವ ಇದ್ದರೂ ಶ್ರೀ ಕ್ಷೇತ್ರಕ್ಕೆ ವರದಾನಿ ದಾನಮ್ಮ ದೇವಿ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ಕೊರತೆ ಆಗಿಲ್ಲ.

ಹೀಗಾಗಿ ಭಕ್ತರಿಗೆ ಅಗತ್ಯ ಪ್ರಮಾಣದ ನೀರು ಒದಗಿಸುವಲ್ಲಿ ಗಂಭೀರ ಸಮಸ್ಯೆ ಎದುರಿಸುತ್ತಿರುವ ದೇವಸ್ಥಾನದ ಆಡಳಿತ ಮಂಡಳಿ, ಭಕ್ತರು ಶ್ರೀಕ್ಷೇತ್ರದ ದರ್ಶನಕ್ಕೆ ಬರುವ ಭಕ್ತರನ್ನು ಬರಬೇಡಿ ಎನ್ನಲಾಗದೇ, ಸಾಧ್ಯವಾದರೆ ತಾಯಿ ದರ್ಶನ ಮುಂದೂಡಿದರೆ ಒಳಿತು ಎಂದು ವಿನಯದಿಂದ ಮನವಿ ಮಾಡುತ್ತಿದೆ.

ಕರ್ನಾಟಕದ ವಿಜಯಪುರ ಜಿಲ್ಲೆಗೆ ಹೊಂದಿಕೊಂಡಿರುವ ಮಹಾರಾಷ್ಟ್ರ ರಾಜ್ಯದಲ್ಲಿರುವ ದಾನಮ್ಮ ದೇವಿಯ ಗುಡ್ಡಾಪುರ ಕ್ಷೇತ್ರ, ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯ ಮಾತ್ರವಲ್ಲದೇ ದಕ್ಷಿಣ ಭಾರತದ ಆಸ್ತಿಕರ ಪಾಲಿನ ಆರಾಧ್ಯಳಾಗಿರುವ ದಾನಮ್ಮ ದೇವಿ ದರ್ಶನಕ್ಕಾಗಿ ನಿತ್ಯವೂ ವಿವಿಧ ಹರಕೆ ತೀರಿಸುವುದು, ಜವಳಿ, ಮದುವೆ, ಸಾಮಾನ್ಯ ದರ್ಶನ ಆಂತೆಲ್ಲ ಶ್ರೀಕ್ಷೇತ್ರಕ್ಕೆ ಕನಿಷ್ಠ 3-4 ಸಾವಿರ ಭಕ್ತರು ಬರುತ್ತಾರೆ. ಕಳೆದ ವರ್ಷ ಜಾತ್ರೆ ಹಂತದಲ್ಲೇ ಈ ಕ್ಷೇತ್ರಕ್ಕೆ ನೀರಿನ ಅಭಾವ ಎದುರಾಗಿದೆ.

ಆಗಿನಿಂದ ನೆರೆಯ ಅಂಕಲಗಿ ಗ್ರಾಮದಲ್ಲಿನ ಬೊರ್‌ವೆಲ್ನಿಂದ ಟ್ಯಾಂಕರ್‌ ಮೂಲಕ ನೀರು ತರಲಾಗುತ್ತಿತ್ತು. ಇದೀಗ ಅಲ್ಲಿಯೂ ಅಂತರ್ಜಲ ಬತ್ತಿರುವ ಕಾರಣ ಎರಡು ತಿಂಗಳಿಂದ ಸೊರಡಿ ಗ್ರಾಮದಿಂದ ನೀರು ತರಲಾಗುತ್ತಿತ್ತು. ಅಲ್ಲಿಯೂ ಕೊಳಬೆ ಬಾವಿಗಳಲ್ಲಿ ನೀರಿಲ್ಲದ ಸ್ಥಿತಿ ನಿರ್ಮಾಣವಾಗುತ್ತಲೇ, ಮುಚ್ಚಂಡಿ ಗ್ರಾಮದತ್ತ ಮುಖ ಮಾಡಬೇಕಿದೆ. ಮುಚ್ಚಂಡಿ ಗ್ರಾಮದಲ್ಲೂ ಕೊಳವೆ ಬಾವಿ ಬತ್ತುವ ಭೀತಿ ಇರುವ ಕಾರಣ ದೇಸವಸ್ಥಾನ ಆಡಳಿತ ಮಂಡಳಿ ಶ್ರೀಕ್ಷೇತ್ರಕ್ಕೆ ಬರುವ ಭಕ್ತರಿಗೆ ನೀರು ಒದಗಿಸಲು ಪರದಾಡುವಂತೆ ಮಾಡಿದೆ.

ಹೀಗಾಗಿ ನಿತ್ಯವೂ ದೇವಸ್ಥಾನದಕ್ಕೆ ಬರುವ ಭಕ್ತರಿಗೆ ಸಮಸ್ಯೆ ಆಗದಿರಲಿ ಎಂದು ಕಳೆದ ವರ್ಷದ ನವೆಂಬರ್‌ ತಿಂಗಳಿಂದಲೇ ದೇವಸ್ಥಾನ ಟ್ರಸ್ಟ್‌ ಸಮಿತಿ ಮಾಸಿಕ ಕನಿಷ್ಠ 1.50 ಲಕ್ಷ ರೂ. ವೆಚ್ಚ ಮಾಡಿ ಟ್ಯಾಂಕರ್‌ ನೀರು ಕೊಡಲು ಮುಂದಾಗಿದೆ. ಸ್ವಂತ ಟ್ರ್ಯಾಕ್ಟರ್‌ ಹಾಗೂ 6000 ಲೀ. ಸಾಮರ್ಥ್ಯದ ಟ್ಯಾಂಕರ್‌ ಖರೀದಿಸಿ, ವಿದ್ಯುತ್‌ ಸಮಸ್ಯೆ ನೀಗಿಸಲು ಜನರೇಟರ್‌ ಇರಿಸಿದೆ. ನೆರೆಯ ಅಂಕಲಗಿ, ಸೊರಡಿ ಹಾಗೂ ಮುಚ್ಚಂಡಿ ಗ್ರಾಮಳಿಂದ ತರಲಾಗುತ್ತಿತ್ತು. ಅಲ್ಲಿಯೂ ಜಲಮೂಲ ಬತ್ತಿದೆ.

ಭಕ್ತರಿಗೆ ಸ್ನಾನ ಸೇರಿದಂತೆ ಇತರೆ ಬಳಕೆಗೂ ನೀರಿಲ್ಲದ ದುಸ್ಥಿತಿ ಇದೆ. ಕಳೆದ ಒಂದು ತಿಂಗಳಿಂದ ಶ್ರೀಕ್ಷೇತ್ರದಲ್ಲಿ ಮದುವೆ ಮಾಡಲು ಪರವಾನಿಗೆ ನೀಡಿಕೆ ಸ್ಥಗಿತ ಮಾಡಿದ್ದು, ವಾರದಿಂದ ದೇವಸ್ಥಾನದ ಶುದ್ಧ ನೀರಿನ ಘಟಕ ಮುಚ್ಚಿದೆ. ನಿತ್ಯ ದಾಸೋಹ, ಊಟದ ಮುನ್ನ-ನಂತರ ಕೈ ತೊಳೆಯಲು, ಕುಡಿಯಲು ಸೇರಿದಂತೆ ಕನಿಷ್ಠ 7 ಟ್ಯಾಂಕರ್‌ ನೀರು ಹೊಂದಿಸಲು ಹೆಣಗಾಟ ನಡೆದಿದೆ. ನೀರಿನ ಪರಿಸ್ಥಿತಿ ನಿರಂತರ ಗಂಭೀರ ಪರಿಸ್ಥಿತಿಗೆ ತಲುಪಿರುವ ಕಾರಣ ಕಳೆದ ಒಂದು ವಾರದಿಂದ ದೇವಸ್ಥಾನದಲ್ಲಿ ನಡೆದಿದ್ದ ಅಭಿವೃದ್ಧಿಯ ಕಟ್ಟಡ ಕಾಮಗಾರಿಗಳನ್ನು ಸ್ಥಗಿತಗೊಳಿಸಿದೆ. ಭವಿಷ್ಯದಲ್ಲಿ ಶ್ರೀ ಕ್ಷೇತ್ರದಲ್ಲಿ ಮದುವೆ ಮಾಡದಂತೆ ತಡೆಯಲು ಯೋಚಿಸಲಾಗುತ್ತಿದೆ. ದೀಡ ನಮಸ್ಕಾರ ಸೇರಿದಂತೆ ವಿವಿಧ ಹರಕೆ ತೀರಿಸಲು ಬರುವ ಭಕ್ತರು ತಮ್ಮ ದರ್ಶನ ಅವಧಿಯನ್ನು ಮುಂದೂಡಿದರೆ ಒಳಿತು ಎಂದು ಮನವಿ ಮಾಡಲು ಮುಂದಾಗಿದೆ. ಮೇ 25ರಂದು ದೇವಸ್ಥಾನ ಆಡಳಿತ ಮಂಡಳಿ ಸಭೆ ಕರೆದಿದ್ದು, ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿದೆ.

•ಜಿ.ಎಸ್‌. ಕಮತರ

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20

State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ

10-muddebihala

Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.